ಆ್ಯಪ್ನಗರ

ಬಿಇಒ ಸೇರಿ 6 ಸಿಬ್ಬಂದಿ ಸಸ್ಪೆಂಡ್‌

ವಿಜಯಪುರ: ಆಡಳಿತ ವೈಫಲ್ಯ ಹಾಗೂ ಕರ್ತವ್ಯ ಲೋಪ ಎಸಗಿದ ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅನಧಿಕೃತ ಗೈರು ಹಾಜರಿ ಉಳಿದ ಕಚೇರಿಯ ಮೂವರು ಪ್ರಥಮ ದರ್ಜೆ ಸಹಾಯಕ ಸೇರಿದಂತೆ 6 ಜನರನ್ನು ಸೇವೆಯಿಂದ ಅಮಾನತುಗೊಳಿಸಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಆದೇಶ ಹೊರಡಿಸಿದ್ದಾರೆ.

Vijaya Karnataka 29 Sep 2019, 5:00 am
ವಿಜಯಪುರ: ಆಡಳಿತ ವೈಫಲ್ಯ ಹಾಗೂ ಕರ್ತವ್ಯ ಲೋಪ ಎಸಗಿದ ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅನಧಿಕೃತ ಗೈರು ಹಾಜರಿ ಉಳಿದ ಕಚೇರಿಯ ಮೂವರು ಪ್ರಥಮ ದರ್ಜೆ ಸಹಾಯಕ ಸೇರಿದಂತೆ 6 ಜನರನ್ನು ಸೇವೆಯಿಂದ ಅಮಾನತುಗೊಳಿಸಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಆದೇಶ ಹೊರಡಿಸಿದ್ದಾರೆ.
Vijaya Karnataka Web 6 staff suspended along with bee
ಬಿಇಒ ಸೇರಿ 6 ಸಿಬ್ಬಂದಿ ಸಸ್ಪೆಂಡ್‌


ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಪ್ರಥಮ ದರ್ಜೆ ಸಹಾಯಕರಾದ ಎ.ಎಂ. ಅಕ್ಕಲಕೋಟ, ಬಿ.ಎಚ್‌. ನಾಯಕ, ಎಸ್‌.ಡಿ. ಚೌಹಾಣ್‌, ದ್ವಿತೀಯ ದರ್ಜೆ ಸಹಾಯಕ ಎಲ್‌.ಎಚ್‌. ಬಾಗೇವಾಡಿ ಹಾಗೂ ಕಚೇರಿಯ ಎನ್‌.ಎ. ಬೀಳಗಿ ಅಮಾನತುಗೊಂಡವರು.

ಇವರೆಲ್ಲಕರ್ತವ್ಯದಲ್ಲಿಲೋಪ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ6 ಜನರನ್ನು ಅಮಾನತುಗೊಳಿಸಿ, ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

ಆರೋಪ ಏನು?:

ಕಳೆದ 3 ವರ್ಷದ ಹಿಂದೆ ವಸತಿ ಶಾಲೆ ಮುಚ್ಚಲ್ಪಟ್ಟಿದ್ದರೂ ಆ ಶಾಲೆಯ ಶಿಕ್ಷಕನಿಗೆ ವೇತನ ಬಟವಡೆ ಮಾಡಿರುವುದು. ಅಲ್ಲದೇ ಅದೇ ಶಾಲೆಯ ಎ.ಬಿ. ಅತ್ತಾರ ಮೃತಪಟ್ಟರೂ ಮೇಲಧಿಕಾರಿಗಳ ಗಮನಕ್ಕೆ ತರುವ ಬದಲು ಅವರಿಗೆ ನಿಯಮಿತವಾಗಿ ವೇತನ ಬಟವಡೆ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ. ಇನ್ನೊಂದೆಡೆ ವೇತನ ತಡೆಹಿಡಿಯದೇ ಸರಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ಆರೋಪದ ಮೇರೆಗೆ ಬಿಇಒ ರುದ್ರಪ್ಪ ಹುರುಳಿಯನ್ನು ಅಮಾನತುಗೊಳಿಸಿದ್ದಾಗಿ ಅಪರ ಆಯುಕ್ತರು ಆದೇಶದಲ್ಲಿತಿಳಿಸಿದ್ದಾರೆ.

ಪ್ರಥಮ ದರ್ಜೆ ಸಹಾಯಕ ಬಿ.ಎಚ್‌. ನಾಯಕ 2018ರ ಅ. 26ರಿಂದ ಅನಧಿಕೃತ ಗೈರು ಉಳಿದಿರುವುದು. ಕಾರಣ ಕೇಳಿ ನೊಟೀಸ್‌ ನೀಡಿದರೂ ಉತ್ತರಿಸದೇ, ಸರಕಾರದ ಕೆಲಸಕ್ಕೆ ವ್ಯತ್ಯಯವನ್ನುಂಟು ಮಾಡಿರುವುದು. ಇದೇ ಮಾದರಿಯಲ್ಲಿಎಫ್‌ಡಿಎ, ಎಸ್‌ಡಿಎ ಹಾಗೂ ಸಿಸಿಟಿ ಎನ್‌.ಎ. ಬೀಳಗಿ ಕರ್ತವ್ಯ ಲೋಪ ಎಸಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ಬಿಇಒ ಸೇರಿದಂತೆ 6 ಜನರನ್ನು ಶುಕ್ರವಾರ ಏಕಕಾಲಕ್ಕೆ ಅಮಾನತುಗೊಳಿಸಿ ಆದೇಶ ಹೊರಡಿಸುವ ಮೂಲಕ ಚುರುಕು ಮುಟ್ಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ