ಆ್ಯಪ್ನಗರ

ವಿಜಯಪುರ: ಡೋಣಿ ನದಿ ನಡುಗಡ್ಡೆಯಲ್ಲಿ ಇಡೀ ರಾತ್ರಿ ಕಳೆದಿದ್ದ 5 ಮಕ್ಕಳು ಸೇರಿ 7 ಜನರ ರಕ್ಷಣೆ

ಸ್ಥಳಕ್ಕೆ ಎಸಿ ಬಲರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತೆರಳಿದ್ದರು. ಗುರುವಾರ ರಾತ್ರಿ ರಾತ್ರಿ ಕಾರ್ಯಾರಚಣೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ‌ ಸಿಬ್ಬಂದಿ ಮೂಲಕ ಏಳು ಜನರನ್ನು ರಕ್ಷಿಸಿ ಕರೆ ತಂದಿದ್ದಾರೆ.

Vijaya Karnataka Web 16 Oct 2020, 12:16 pm
ವಿಜಯಪುರ: ತಾಳಿಕೋಟೆ ಬಳಿಯ ಡೋಣಿ‌ ನದಿಯ‌ ನಡುಗಡ್ಡೆಯಲ್ಲಿ ಸಿಲುಕಿದ್ದ ಐವರು ಮಕ್ಕಳು ಸೇರಿ ಏಳು ಜನರನ್ನು ಜಿಲ್ಲಾಡಳಿತ ರಕ್ಷಣೆ ಮಾಡಿದೆ.
Vijaya Karnataka Web ಕುಟುಂಬ ಸದಸ್ಯರ ರಕ್ಷಣೆ
ಕುಟುಂಬ ಸದಸ್ಯರ ರಕ್ಷಣೆ


ಮಹಾರಾಷ್ಟ್ರ ಮೂಲದ ದಂಪತಿ ಹಾಗೂ ಐವರು ಮಕ್ಕಳು ನಡುಗಡ್ಡೆಯಲ್ಲಿ ಇದ್ದಿಲು ತಯಾರಿಸಲು ಆಗಮಿಸಿ ಸಿಲುಕಿದ್ದರು. ನದಿಯಲ್ಲಿ ಪ್ರವಾಹ ಬಂದ ನಂತರವೂ ಅಲ್ಲಿಯೇ ಉಳಿದುಕೊಂಡಿದ್ದರು.

ಪ್ರವಾಹ ಭಯದಿಂದ ಗುರುವಾರ ಸಂಜೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಕ್ಕೆ ಮೊರೆ ಇಟ್ಟಿದ್ದರು.

ಸ್ಥಳಕ್ಕೆ ಎಸಿ ಬಲರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತೆರಳಿದ್ದರು. ಗುರುವಾರ ರಾತ್ರಿ ರಾತ್ರಿ ಕಾರ್ಯಾರಚಣೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ‌ ಸಿಬ್ಬಂದಿ ಮೂಲಕ ಏಳು ಜನರನ್ನು ರಕ್ಷಿಸಿ ಕರೆ ತಂದಿದ್ದಾರೆ.

ಎಲ್ಲರ ಆರೋಗ್ಯ ಸ್ಥಿರವಾಗಿದೆ.ರಕ್ಷಣೆ ಮಾಡಿದ ಆಧಿಕಾರಿಗಳಿಗೆ, ಅಗ್ನಿಶಾಮಕ ದಳ ಸಿಬ್ಬಂದಿಗೆ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ