ಆ್ಯಪ್ನಗರ

ಎಸಿಬಿ ಬಲೆಗೆ ಪ್ರಭಾರ ಎಕ್ಸಿಕ್ಯೂಟಿವ್‌ ಎಂಜಿನೀಯರ್‌

ವಿಜಯಪುರ: ಸೇವಾ ಪುಸ್ತಕ ಕಳುಹಿಸಿಕೊಡಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Vijaya Karnataka 24 Oct 2019, 5:00 am
ವಿಜಯಪುರ: ಸೇವಾ ಪುಸ್ತಕ ಕಳುಹಿಸಿಕೊಡಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb is a trap executive engineer
ಎಸಿಬಿ ಬಲೆಗೆ ಪ್ರಭಾರ ಎಕ್ಸಿಕ್ಯೂಟಿವ್‌ ಎಂಜಿನೀಯರ್‌


ವಿ.ಜಿ.ವಸ್ತ್ರದ ಎಸಿಬಿ ಬಲೆಗೆ ಬಿದ್ದ ಎಂಜಿನಿಯರ್‌. ಇದೇ ಕಚೇರಿಯಲ್ಲಿಸಹಾಯಕ ಎಂಜಿನೀಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಜಿತ್‌ಕುಮಾರ ಚೌಗಲೆ ಎಂಬುವರು ಇತ್ತೀಚೆಗಷ್ಟೇ ಚಿಕ್ಕೋಡಿಗೆ ವರ್ಗಾವಾಗಿದ್ದರು.ಹೀಗಾಗಿ ವಿಜಯಪುರ ಕಚೇರಿಯಲ್ಲಿದ್ದ ಸೇವಾ ಪುಸ್ತಕ ಕಳುಹಿಸಿಕೊಡುವಂತೆ ಅವರು ವಿ.ಜಿ. ವಸ್ತ್ರದ ಅವರಿಗೆ ವಿನಂತಿಸಿದ್ದರು. ಆದರೆ ಅದಕ್ಕೆ ಅವರು 2 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದರು.

ಬುಧವಾರ 2 ಲಕ್ಷ ರೂ. ಲಂಚವನ್ನು ಚೌಗಲೆ ಅವರಿಂದ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದಾಗ ವಿ.ಜಿ. ವಸ್ತ್ರದ ಸಿಕ್ಕಿ ಬಿದ್ದಿದ್ದಾರೆ. ಆರೋಪಿ ವಿ.ಜಿ. ವಸ್ತ್ರದ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ, ಸಿಪಿಐಗಳಾದ ಎಸ್‌.ಆರ್‌. ಗಣಾಚಾರಿ ಹಾಗೂ ಸಚಿನ್‌ ಚಲವಾದಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ