ಆ್ಯಪ್ನಗರ

ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ : ₹2.5 ಲಕ್ಷ ಹಣ, ವಾಹನ ಇನ್ಸಪೆಕ್ಟರ್ ಸೇರಿ 20 ಏಜೆಂಟ್ ವಶಕ್ಕೆ

ವಿಜಯಪುರ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿ, ವಾಹನ ಇನ್ಸಪೆಕ್ಟರ್ ಸೇರಿದಂತೆ 20 ಏಜೆಂಟರುಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ 2.5 ಲಕ್ಷ ಅಕ್ರಮ ನಗದು, ಸ್ಮಾರ್ಟ್‌ ಕಾರ್ಡ್‌, ಲೈಸೆನ್ಸ್‌ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 5 Dec 2019, 9:48 pm
ವಿಜಯಪುರ : ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿ, ವಾಹನ ಇನ್ಸಪೆಕ್ಟರ್ ಸೇರಿದಂತೆ 20 ಏಜೆಂಟರುಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ 2.5 ಲಕ್ಷ ಅಕ್ರಮ ನಗದು, 5 ಸ್ಮಾರ್ಟ್ ಕಾರ್ಡ್‌, 50 ಲೈಸೆನ್ಸ್ ಕಾರ್ಡ್ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web ACB raide
ಸಾಂಧರ್ಭಿಕ ಚಿತ್ರ


ವಿಜಯಪುರ ಪ್ರಾದೇಶಿಕ ಸಾರಿಗೆ ಕಚೇರಿ ಒಳಗೆ ಮತ್ತು ಹೊರಗೆ ಖಾಸಗಿ ಏಜೆಂಟರ್‌ದ್ದೇ ದರಬಾರು ನಡೆದಿದೆ. ಸಾರ್ವಜನಿಕರ ಕೆಲಸಗಳಿಗೆ ಏಜೆಂಟರು ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ದಾಳಿ ಮಾಡಿರುವ ಎಸಿಬಿ ಪೊಲೀಸರು, ಸಾರಿಗೆ ಕಚೇರಿಯ ವರಾಂಡದ ಗೇಟ್ ಬಂದ್ ಮಾಡಿ ಏಜೆಂಟ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ 20 ಏಜೆಂಟರು ಹಾಗೂ ವಾಹನ ಇನ್ಸಪೆಕ್ಟರ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದೇವೆ ಎಂದು ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಮತಯಂತ್ರ ಸೇರಿದ ಜನಾದೇಶ : 15 ಕ್ಷೇತ್ರಗಳ ಉಪಸಮರದ ಕಥೆ ಹೇಳುವ ಚಿತ್ರಗಳಿವು!

ಜನರಿಂದ ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನು ಎಗ್ಗಿಲ್ಲದೇ ಸಂಗ್ರಹ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದೇವೆ. ದಾಳಿ ವೇಳೆ 20 ಜನ ಏಜೆಂಟರಿಂದ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ಇನ್ನೂ ತನಿಖೆ ಮುಂದುವರಿದಿದೆ ಎಂದು ಅಮರನಾಥ ರೆಡ್ಡಿ ತಿಳಿಸಿದರು.

ಅಂಗಡಿಗಳು ಸೀಜ್ : ಆರ್‌ಟಿಒ ಕಚೇರಿ ಬಳಿಯಿರುವ ಕೆಲ ಅಂಗಡಿಗಳನ್ನು ಸೀಜ್ ಮಾಡಲು ನ್ಯಾಯಾಲಯದಿಂದ ವಾರೆಂಟ್ ಪಡೆದು, ಅಂಗಡಿಗಳನ್ನು ಸೀಜ್ ಮಾಡಿದ್ದೇವೆ. ತನಿಖೆ ವೇಳೆ ಕೆಲ ಆರ್‌ಟಿಒಗಳನ್ನು ವಿಚಾರಣೆಗೊಳಪಡಿಸುತ್ತೇವೆ ಎಂದು ಎಸ್ಪಿ ತಿಳಿಸಿದರು.

1984ರ ಸಿಖ್‌ ವಿರೋಧಿ ದಂಗೆ ತಡೆಯಲು ಸಾಧ್ಯವಿತ್ತು: ಮನಮೋಹನ್‌ ಅಭಿಮತ

ಬೆಳಗ್ಗೆ ನ್ಯಾಯಾಂಗ ಬಂಧನಕ್ಕೆ : ವಶಕ್ಕೆ ಪಡೆದುಕೊಂಡಿರುವ ಆರ್‌ಟಿಒ ಹಾಗೂ 20 ಏಜೆಂಟರ್‌ರನ್ನು ಶುಕ್ರವಾರ ಬೆಳಗ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದವರು ತಿಳಿಸಿದರು.

ಎಸಿಬಿ ಎಸ್ಪಿ ಅಮರನಾಥ ರೆಡಿ ಮಾಗರ್ದರ್ಶನದಲ್ಲಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿಯಲ್ಲಿ ಇನ್ಸಪೆಕ್ಟರ್‌ಗಳಾದ ಎಸ್.ಆರ್. ಗಣಾಚಾರಿ, ಸಚಿನ್ ಚಲವಾದಿ, ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ, ಮಂಜುನಾಥ ಹಿರೇಮಠ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ