ಆ್ಯಪ್ನಗರ

ಗಂಗಾಧರ ಹತ್ಯೆ ಪ್ರಕರಣ: ಮುಂದುವರಿದ ಸಿಐಡಿ ತನಿಖೆ

ವಿಜಯಪುರ : ಪೊಲೀಸರೇ ಆರೋಪಿಗಳಾಗಿ ರಾಜ್ಯದಾದ್ಯಂತ ತೀವ್ರ ಕುತುಹಲ ಕೆರಳಿಸಿರುವ ಭೀಮಾತೀರದ ಹಂತಕ ಧರ್ಮರಾಜ ಚಡಚಣನ ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖಾ ಕಾರ್ಯಾಚರಣೆ ಮುಂದುವರಿಸಿದೆ. ಬುಧವಾರ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಬಂಧಿತ ಪೊಲೀಸರ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದೆ.

Vijaya Karnataka 21 Jun 2018, 5:00 am
ವಿಜಯಪುರ : ಪೊಲೀಸರೇ ಆರೋಪಿಗಳಾಗಿ ರಾಜ್ಯದಾದ್ಯಂತ ತೀವ್ರ ಕುತುಹಲ ಕೆರಳಿಸಿರುವ ಭೀಮಾತೀರದ ಹಂತಕ ಧರ್ಮರಾಜ ಚಡಚಣನ ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖಾ ಕಾರ್ಯಾಚರಣೆ ಮುಂದುವರಿಸಿದೆ. ಬುಧವಾರ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಬಂಧಿತ ಪೊಲೀಸರ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
Vijaya Karnataka Web advanced cid investigation
ಗಂಗಾಧರ ಹತ್ಯೆ ಪ್ರಕರಣ: ಮುಂದುವರಿದ ಸಿಐಡಿ ತನಿಖೆ


ಎಸ್ಪಿ ಆನಂದಕುಮಾರ, ಡಿಎಸ್ಪಿ ಜನಾರ್ಧನ ನೇತೃತ್ವದ ಸಿಐಡಿ ತಂಡ 100ಕ್ಕೂ ಹೆಚ್ಚು ಸ್ಥಳೀಯ ಪೊಲೀಸ್‌ ಸಿಬ್ಬಂದಿಯೊಂದಿಗೆ ಮಹಾದೇವ ಸಾಹುಕಾರ ಭೈರಗೊಂಡ ವಾಸವಿದ್ದ ಇಂಡಿ ತಾಲೂಕಿನ ಕೆರೂರಿನ ತೋಟದ ಮನೆ ಹಾಗೂ ಆತನ ಅಡ್ಡೆಯಲ್ಲಿ ಶೋಧ ಕಾರ್ಯ ನಡೆಸಿತು. ಈ ವೇಳೆ ಭೈರಗೊಂಡ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದೆಯಲ್ಲದೆ, ಅವರಲ್ಲಿನ ಮೊಬೈಲ್‌ ಫೋನ್‌ಗಳಲ್ಲದೆ, ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಮಹಾದೇವ ಭೈರಗೊಂಡ ಎಲ್ಲೇ ಇದ್ದರೂ ಶರಣಾದರೆ ಸರಿ, ಇಲ್ಲದಿದ್ದರೆ ಎಲ್ಲಿದ್ದರೂ ಪತ್ತೆ ಹಚ್ಚುವುದಾಗಿ ಸಿಐಡಿ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಮನೆಗೂ ದಾಳಿ

ಸಿಐಡಿ ತಂಡವು ಇತರೆ ಆರೋಪಿಗಳಾಧ ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ಧಾರೂಢ ರೂಗಿ, ಚಂದ್ರಶೇಖರ ಜಾಧವ ಹಾಗೂ ಗೆದ್ದಪ್ಪ ನಾಯ್ಕೋಡಿ ಅವರ ಚಡಚಣದಲ್ಲಿನ ಮನೆಗಳಲ್ಲೂ ಶೋಧಕಾರ್ಯ ನಡೆಸಿದೆ.

ತನಿಖಾ ತಂಡವು ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಾದ ಪಿಎಸ್‌ಐ ಗೋಪಾಲ ಹಳ್ಳೂರ, ಮೂವರು ಪೇದೆಗಳ, ಇತರೆ ಆರೋಪಿಗಳಾದ ಹಣಮಂತ ಪೂಜಾರಿ ಹಾಗೂ ಸಿದ್ದಗೊಂಡ ತಿಕ್ಕುಂಡಿಯೊಂದಿಗೆ ಮಹಾದೇವ ಭೈರಗೊಂಡನ ತೋಟದ ಮನೆಯಲ್ಲಿ ಮೊದಲು ಶೋಧ ಕಾರ್ಯ ನಡೆಸಿತು. ಅಲ್ಲದೆ ಭೈರಗೊಂಡನ ಶಾಲೆ ಮತ್ತು ಆತನ ಕಚೇರಿಗಳನ್ನೂ ಜಾಲಾಡಿತು.ಚಡಚಣ ಠಾಣೆ ಆವರಣದಲ್ಲಿ ಆರೋಪಿಗಳಾದ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೇದೆಗಳ ಮನೆಗಳಲ್ಲಿ ತನಿಖಾ ಕಾರ್ಯಾಚರಣೆ ನಡೆಸಲಾಯಿತು.

ಕೊಂಕಣಗಾಂವಕ್ಕೂ ಭೇಟಿ

ಗಂಗಾಧರ ಚಡಚಣ ನಾಪತ್ತೆಯಾದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ವಿಚಾರಣೆಯನ್ನು ನಡೆಸಲಾಯಿತು. ಅಲ್ಲದೆ, ಧರ್ಮರಾಜ ಚಡಚಣ ಎನ್‌ಕೌಂಟರ್‌ ಆದ ಸ್ಥಳಕ್ಕೂ ಭೇಟಿ ನೀಡಿ ಮಾಹಿತಿ ಕಲೆಹಾಕಲಾಯಿತು. ಕೆರೂರ, ಚಡಚಣ ಹಾಗೂ ಕೊಂಕಣಗಾಂವದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಿಐಡಿ ತಂಡವು ಪಿಎಸ್‌ಐ ಗೋಪಾಲ ಹಳ್ಳೂರ ಸ್ವಗ್ರಾಮ ರಾಯಭಾಗ ತಾಲೂಕಿನ ಹಾರೋಗೇರಿಯತ್ತ ಪ್ರಯಾಣ ಬೆಳೆಸಿದ್ದು , ಅಲ್ಲಿನ ಮನೆಯಲ್ಲೂ ಶೋಧ ಹಾಗೂ ವಿಚಾರ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಬ್ಬ ಎಸ್ಸೈಭಾಗಿ?

ಗಂಗಾಧರ ಹತ್ಯೆ ಪ್ರಕರಣ ತನಿಖೆ ಮುಂದುವರಿದಂತೆಲ್ಲ ಹೊಸ ಮಾಹಿತಿ, ಹೆಸರುಗಳು ಸೇರ್ಪಡೆಯಾಗುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಬ್ಬ ಪಿಎಸ್‌ಐ ಹಾಗೂ ಮೂವರು ಪೇದೆಗಳು ಆರೋಪಿಗಳಾಗಿದ್ದರು. ಇದೀಗ ಮತ್ತೋರ್ವ ಪಿಎಸ್‌ಐ ಹೆಸರು ಕೇಳಿಬರುತ್ತಿದೆ. ಧರ್ಮರಾಜ ಚಡಚಣ ಹಾಗೂ ಗಂಗಾಧರ ಹತ್ಯೆ ಪ್ರಕರಣ ನಡೆದ ಸಂದರ್ಭದಲ್ಲಿ ಪಿಎಸ್‌ಐ ಗೋಪಾಳ ಹಳ್ಳೂರಗೆ ಸಹಕರಿಸಿದರೆಂಬ ನ್ನೊಬ್ಬ ಪಿಎಸ್‌ಐ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಬಂಧಿತ ಪೊಲೀಸರಲ್ಲೇ ಒಬ್ಬರು ಸಿಐಡಿ ತಂಡಕ್ಕೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಮತ್ತೊಬ್ಬ ಪಿಎಸ್‌ಐ ಯಾರೆಂಬುದು ಅಧಿಕೃತವಾಗಿ ಬಹಿರಂಗಗೊಂಡಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ