ಆ್ಯಪ್ನಗರ

ಕಾಂಗ್ರೆಸ್‌ ಸಂಘಟನೆಗೆ ಸತೀಶ ಸಲಹೆ

ಕಾಂಗ್ರೆಸ್‌ ಪಕ್ಷ ಕೇವಲ ಅಧಿಕಾರಕ್ಕೆ ಹೋರಾಟ ನಡೆಸಲ್ಲ. ದೇಶದ ಜನರ ಹಿತಾಸಕ್ತಿ, ಏಳಿಗೆಗೆ ದುಡಿಯುತ್ತಿದೆ. ಸೋನಿಯಾಗಾಂಧಿ ಅವರು ನಮ್ಮೆಲ್ಲರ ಮೇಲೆ ವಿಶ್ವಾಸವಿಟ್ಟು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪದಾಧಿಕಾರಗಳನ್ನು ನೇಮಕ ಮಾಡಿದ್ದಾರೆ. ಪಕ್ಷ ಸಂಘಟನೆಗೆ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Vijaya Karnataka Web 28 May 2020, 5:00 am
ವಿಜಯಪುರ : ಕಾಂಗ್ರೆಸ್‌ ಪಕ್ಷ ಕೇವಲ ಅಧಿಕಾರಕ್ಕೆ ಹೋರಾಟ ನಡೆಸಲ್ಲ. ದೇಶದ ಜನರ ಹಿತಾಸಕ್ತಿ, ಏಳಿಗೆಗೆ ದುಡಿಯುತ್ತಿದೆ. ಸೋನಿಯಾಗಾಂಧಿ ಅವರು ನಮ್ಮೆಲ್ಲರ ಮೇಲೆ ವಿಶ್ವಾಸವಿಟ್ಟು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪದಾಧಿಕಾರಗಳನ್ನು ನೇಮಕ ಮಾಡಿದ್ದಾರೆ. ಪಕ್ಷ ಸಂಘಟನೆಗೆ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
Vijaya Karnataka Web advice to congress
ಕಾಂಗ್ರೆಸ್‌ ಸಂಘಟನೆಗೆ ಸತೀಶ ಸಲಹೆ


ಜಿಲ್ಲಾಕಾಂಗ್ರೆಸ್‌ ಕಾರ್ಯಾಲಯದಲ್ಲಿಬುಧವಾರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಸಿದ ಅವರು, ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಜೂ.7ರಂದು ಬೆಂಗಳೂರಿನಲ್ಲಿಸರಳವಾಗಿ ನಡೆಯಲಿದ್ದು, ಬೂತ್‌ ಮಟ್ಟದಲ್ಲಿಪಕ್ಷದ ಕಾರ್ಯಕರ್ತರಿಗೆ ಟಿವಿ ಮೂಲಕ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಕೈಗೊಳ್ಳಬೇಕೆಂದು ಮುಖಂಡರು, ಜಿಲ್ಲಾಪದಾಧಿಕಾರಿಗಳಿಗೆ ಸೂಚಿಸಿದರು.

ಪ್ರತಿಜ್ಞಾ ವಿಧಿ ಬೋಧನೆ :
ಸಮಾರಂಭದಲ್ಲಿ ಮಹಾತ್ಮ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ನೂತನ ಅಧ್ಯಕ್ಷ ಹಾಗು ಕಾರ್ಯಾಧ್ಯಕ್ಷರ ಭಾವಚಿತ್ರಗಳನ್ನು ಅಳವಡಿಸಿ ರಾಷ್ಟ್ರ ಧ್ವಜ, ಪಕ್ಷದ ಧ್ವಜವನ್ನು ಹಾರಿಸಿ ಪಾಲ್ಗೊಂಡ ಎಲ್ಲರಿಗೂ ಸಂವಿಧಾನದ ಪೀಠಿಕೆ ಪ್ರತಿಜ್ಞಾ ವಿಧಿಯನ್ನು ಏಕಕಾಲಕ್ಕೆ ಭೋದನೆ ಮಾಡಲಾಗುವುದು. ಅಂದು ಎಲ್ಲರೂ ಎದ್ದು ನಿಂತು ನಮ್ಮ ಜೊತೆ ಪ್ರಮಾಣವಚನ ಸ್ವೀಕರಿಸಬೇಕೆಂದರು.

ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿದರು.

ಮಾಜಿ ಶಾಸಕ ವಿಠ್ಠಲಕಟಕದೊಂಡ, ಅಬ್ದುಲ್‌ ಹಮೀದ್‌ ಮುಶ್ರೀಫ್‌, ಮಲ್ಲಣ್ಣ ಸಾಲಿ, ಉಸ್ತುವಾರಿಗಳಾದ ಶಾಕೀರ ಸನದಿ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಚಂದ್ರಶೇಖರ ರಾಠೋಡ, ದಯಾನಂದ ಪಾಟೀಲ, ಸುನೀತಾ ಐಹೊಳೆ, ಶರಣಪ್ಪ ಕೊಟಗಿ (ಮತ್ತಿಕಟ್ಟಿ), ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಮಹ್ಮದ್‌ ರಫೀಕ್‌ ಟಪಾಲ, ರವಿಗೌಡ ಪಾಟೀಲ, ಹಾಸೀಂಪೀರ ವಾಲಿಕಾರ, ಎಸ್‌.ಎಂ.ಪಾಟೀಲ(ಗಣಿಹಾರ), ಬಡೇಪೀರ ಜುನೇದಿ, ಸುರೇಶ ಗೊಣಸಗಿ, ಸುನೀಲ ಉಕ್ಕಲಿ, ವಿದ್ಯಾರಾಣಿ ತುಂಗಳ, ಸುಜಾತ ಕಳ್ಳಿಮನಿ, ಬ್ಲಾಕ್‌ ಅಧ್ಯಕ್ಷರು, ಅಂಗ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.


ಪಾಟೀಲರು ದೂರ..ದೂರ
ಪೂರ್ವಭಾವಿ ಸಭೆಗೆ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲ ಪಾಲ್ಗೊಂಡರೂ ಪರಸ್ಪರರು ಮಾತನಾಡಲಿಲ್ಲ. ಅಷ್ಟೇ ಅಲ್ಲದೂರ ಕುಳಿತು, ಜಲ ಸಮರದ ಸಿಟ್ಟನ್ನು ಪರೋಕ್ಷವಾಗಿ ಪ್ರದರ್ಶಿಸಿದರು. ಸತೀಶ ಜಾರಕಿಹೊಳಿ ಬಲಗಡೆ ಎಂ.ಬಿ.ಪಾಟೀಲ ಕುಳಿತರೆ, ಎಡಗಡೆ ಯಶವಂತರಾಯಗೌಡ ಹಾಗೂ ಶಿವಾನಂದ ಪಾಟೀಲ ಕುಳಿತ್ತಿದ್ದರು. ಪರಸ್ಪರರು ಮಾತನಾಡುವುದಿರಲಿ, ಒಬ್ಬರಿಗೊಬ್ಬರು ನೋಡಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ