ವಿಜಯಪುರ : ಕೇಂದ್ರ ಸರಕಾರ ಒಂದೇ ಹೊಡೆತಕ್ಕೆ ಭಾರತೀಯ ಸಮುದಾಯದೊಂದಿಗೆ ಕಾಶ್ಮೀರವನ್ನು ಸೇರಿಸುವ ಮೂಲಕ ಅದ್ಭುತ ನಿರ್ಣಯ ಕೈಗೊಂಡಿದೆ ಎಂದು ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಿಜವಾಗಿಯೂ ಇದೊಂದು ಅದ್ಭುತ ನಿರ್ಣಯ. ಪ್ರತಿಯೊಬ್ಬ ಭಾರತೀಯ ಒಪ್ಪಿಕೊಳ್ಳಲೇಬೇಕು. ಅವರವರ ಪಕ್ಷ ಸಿದ್ಧಾಂತಗಳೇನೇ ಇರಲಿ. ಈ ವಿಷಯದಲ್ಲಿ ವಿರೋಧಿಸುತ್ತಿದ್ದರೆ ಅವನು ಭಾರತೀಯನೇ ಅಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ದೊರೆತು ಏಳು ದಶಕಗಳು ಉರುಳಿದ್ದರೂ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಒಂದು ಕಡೆಗೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುತ್ತಲೇ ಅದಕ್ಕೊಂದು ಪ್ರತ್ಯೇಕ ಧ್ವಜ ಕೊಡಲಾಗಿತ್ತು. ಉಳಿದ ರಾಜ್ಯಗಳಂತೆ ಭಾರತೀಯರು ಅಲ್ಲಿ ಹೋಗಿ ನೆಲೆಸುವಂತಿರಲಿಲ್ಲ. ನೆಲೆಸಿದರೂ ಕಾಶ್ಮೀರಿಗಳಾಗಿ ಮತ ಚಲಾಯಿಸುವಂತಿರಲಿಲ್ಲ. ಅಲ್ಲಿಯ ಹುಡುಗಿಯನ್ನು ಮದುವೆಯಾದರೂ ಅವಳದ್ದೇ ಸ್ವಾತಂತ್ರ್ಯ ಹರಣ. ಮನೆ ಮಾರು ಕೊಳ್ಳುವಂತಿರಲಿಲ್ಲ. ಹೀಗೆ ಇನ್ನೂ ಹಲವು ಕಾರಣಗಳಿಂದಾಗಿ ಯಾವ ಪುರುಷಾರ್ಥಕ್ಕಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅನ್ನುತ್ತಿದ್ದರೋ ಆ ದೇವರೇ ಬಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.
ವಿರೋಧಿಸಬೇಕೆಂದು ವಿರೋಧಿಸುವುದು ಸರಿಯಲ್ಲ. ಇಂದಿನ ಈ ನಿರ್ಣಯ ಭಾರತೀಯ ಒಕ್ಕೂಟಕ್ಕೆ ಮಾರಕ ಎಂದೂ ಜೊತೆಗೆ ಆಕ್ರಮಣ ಕಾರಿ ಪ್ರವೃತ್ತಿ ಎಂದು ಕೆಲವರು ಹೇಳುತ್ತಾರೆ ಅದು ಹೇಗೆ ? ಕೇವಲ ವಿಶೇಷ ಅಧಿಕಾರ ಸೌಲಭ್ಯಗಳ ಮದದಲ್ಲಿ ಅಲ್ಲಿನ ಸ್ಥಳೀಯ ನೂರು ಸಾವಿರ ಪಂಡಿತರನ್ನು ಹೊರಗೆ ಹಾಕಿ ಅವರ ಆಸ್ತಿ ಪಾಸ್ತಿಗಳನ್ನು ಕಬಳಿಸಿದವರ ವಿಶೇಷ ಅಧಿಕಾರ ಸೌಲಭ್ಯಗಳನ್ನು ಮೊಟಕುಗೊಳಿಸಿದ್ದು ಅತಿಕ್ರಮಣವೇ ಎಂದು ಪ್ರಶ್ನಿಸಿದ್ಧಾರೆ. ಹಾಗೆ ಹೇಳಿದವರು ತಮ್ಮ ಆತ್ಮಸಾಕ್ಷಿಯಾಗಿ ಯೋಚಿಸಬೇಕು. ದೇಶದ ಹಿತ ಅಡಗಿದ್ದರೆ ಅದನ್ನು ಸ್ವಾಗತಿಸುವ ಹೃದಯವೈಶಾಲ್ಯತೆ ಇರಬೇಕು. ಇಂದಿನ ನಿರ್ಣಯಕ್ಕೆ ಭಾರತದ ಗಣತಂತ್ರ ನತಮಸ್ತಕವಾಗಿದೆ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಿಜವಾಗಿಯೂ ಇದೊಂದು ಅದ್ಭುತ ನಿರ್ಣಯ. ಪ್ರತಿಯೊಬ್ಬ ಭಾರತೀಯ ಒಪ್ಪಿಕೊಳ್ಳಲೇಬೇಕು. ಅವರವರ ಪಕ್ಷ ಸಿದ್ಧಾಂತಗಳೇನೇ ಇರಲಿ. ಈ ವಿಷಯದಲ್ಲಿ ವಿರೋಧಿಸುತ್ತಿದ್ದರೆ ಅವನು ಭಾರತೀಯನೇ ಅಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ದೊರೆತು ಏಳು ದಶಕಗಳು ಉರುಳಿದ್ದರೂ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಒಂದು ಕಡೆಗೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುತ್ತಲೇ ಅದಕ್ಕೊಂದು ಪ್ರತ್ಯೇಕ ಧ್ವಜ ಕೊಡಲಾಗಿತ್ತು. ಉಳಿದ ರಾಜ್ಯಗಳಂತೆ ಭಾರತೀಯರು ಅಲ್ಲಿ ಹೋಗಿ ನೆಲೆಸುವಂತಿರಲಿಲ್ಲ. ನೆಲೆಸಿದರೂ ಕಾಶ್ಮೀರಿಗಳಾಗಿ ಮತ ಚಲಾಯಿಸುವಂತಿರಲಿಲ್ಲ. ಅಲ್ಲಿಯ ಹುಡುಗಿಯನ್ನು ಮದುವೆಯಾದರೂ ಅವಳದ್ದೇ ಸ್ವಾತಂತ್ರ್ಯ ಹರಣ. ಮನೆ ಮಾರು ಕೊಳ್ಳುವಂತಿರಲಿಲ್ಲ. ಹೀಗೆ ಇನ್ನೂ ಹಲವು ಕಾರಣಗಳಿಂದಾಗಿ ಯಾವ ಪುರುಷಾರ್ಥಕ್ಕಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅನ್ನುತ್ತಿದ್ದರೋ ಆ ದೇವರೇ ಬಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.
ವಿರೋಧಿಸಬೇಕೆಂದು ವಿರೋಧಿಸುವುದು ಸರಿಯಲ್ಲ. ಇಂದಿನ ಈ ನಿರ್ಣಯ ಭಾರತೀಯ ಒಕ್ಕೂಟಕ್ಕೆ ಮಾರಕ ಎಂದೂ ಜೊತೆಗೆ ಆಕ್ರಮಣ ಕಾರಿ ಪ್ರವೃತ್ತಿ ಎಂದು ಕೆಲವರು ಹೇಳುತ್ತಾರೆ ಅದು ಹೇಗೆ ? ಕೇವಲ ವಿಶೇಷ ಅಧಿಕಾರ ಸೌಲಭ್ಯಗಳ ಮದದಲ್ಲಿ ಅಲ್ಲಿನ ಸ್ಥಳೀಯ ನೂರು ಸಾವಿರ ಪಂಡಿತರನ್ನು ಹೊರಗೆ ಹಾಕಿ ಅವರ ಆಸ್ತಿ ಪಾಸ್ತಿಗಳನ್ನು ಕಬಳಿಸಿದವರ ವಿಶೇಷ ಅಧಿಕಾರ ಸೌಲಭ್ಯಗಳನ್ನು ಮೊಟಕುಗೊಳಿಸಿದ್ದು ಅತಿಕ್ರಮಣವೇ ಎಂದು ಪ್ರಶ್ನಿಸಿದ್ಧಾರೆ. ಹಾಗೆ ಹೇಳಿದವರು ತಮ್ಮ ಆತ್ಮಸಾಕ್ಷಿಯಾಗಿ ಯೋಚಿಸಬೇಕು. ದೇಶದ ಹಿತ ಅಡಗಿದ್ದರೆ ಅದನ್ನು ಸ್ವಾಗತಿಸುವ ಹೃದಯವೈಶಾಲ್ಯತೆ ಇರಬೇಕು. ಇಂದಿನ ನಿರ್ಣಯಕ್ಕೆ ಭಾರತದ ಗಣತಂತ್ರ ನತಮಸ್ತಕವಾಗಿದೆ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.