ಆ್ಯಪ್ನಗರ

ಆಲಮಟ್ಟಿ ಡ್ಯಾಂ : ತಗ್ಗಿದ ಒಳ ಹರಿವು ವಿದ್ಯುತ್‌ ಉತ್ಪಾದನೆ ಸ್ಥಗಿತ : 519 ಮೀ. ಮಟ್ಟ

ವಿಜಯಪುರ: ಕೃಷ್ಣಾ ಕಣಿವೆಯಲ್ಲಿ ಮಳೆಯ ವಿಳಂಬದ ನಡುವೆಯೂ ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾದ ಆಲಮಟ್ಟಿಯ ಲಾಲ್‌ ಬಹದ್ಧೂರ್‌ ಶಾಸ್ತ್ರಿ ಸಾಗರ ಭರ್ತಿ ಹಂತ ತಲುಪಿದೆ.

Vijaya Karnataka 23 Jul 2019, 5:00 am
ವಿಜಯಪುರ: ಕೃಷ್ಣಾ ಕಣಿವೆಯಲ್ಲಿ ಮಳೆಯ ವಿಳಂಬದ ನಡುವೆಯೂ ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾದ ಆಲಮಟ್ಟಿಯ ಲಾಲ್‌ ಬಹದ್ಧೂರ್‌ ಶಾಸ್ತ್ರಿ ಸಾಗರ ಭರ್ತಿ ಹಂತ ತಲುಪಿದೆ.
Vijaya Karnataka Web alamatti dam decreased inner flow power output breakdown
ಆಲಮಟ್ಟಿ ಡ್ಯಾಂ : ತಗ್ಗಿದ ಒಳ ಹರಿವು ವಿದ್ಯುತ್‌ ಉತ್ಪಾದನೆ ಸ್ಥಗಿತ : 519 ಮೀ. ಮಟ್ಟ


519.60 ಮೀಟರ್‌ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸೋಮವಾರ 519 ಮೀಟರ್‌ ತನಕ ನೀರು ಮಟ್ಟ ತಲುಪಿತು. 123.081ಟಿಎಂಸಿ ಸಂಗ್ರಹ ಸಾಮರ್ಥ್ಯ‌ವಿದ್ದು , ಜಲಾಶಯದಲ್ಲೀಗ 112.945 ಟಿಎಂಸಿ ನೀರನ್ನು ಹಿಡಿದಿಡಲಾಗಿದೆ. ವಾರದ ಹಿಂದೆ 1 ಲಕ್ಷ ಕ್ಯೂಸೆಕ್‌ಗೂ ಮೀರಿದ ಒಳ ಹರಿವಿತ್ತು. ಕೃಷ್ಣಾ ಕಣಿವೆಯ ಮಹಾರಾಷ್ಟ್ರ ಭಾಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದರಿಂದ ಜು.16ರಿಂದ ಸತತವಾಗಿ ಒಳ ಹರಿವು ಗಣನೀಯವಾಗಿ ಕಡಿಮೆಯಾಗಿದೆ. ಸೋಮವಾರ 13,310 ಕ್ಯೂಸೆಕ್‌ ಒಳ ಹರಿವಿತ್ತು. ಕೆಲ ಸಲ ದಿನವೊಂದಕ್ಕೆ 5-10 ಟಿಎಂಸಿ ನೀರು ಹರಿದು ಬಂತು. ಆದರೀಗ ದಿನಕ್ಕೆ 1 ಟಿಎಂಸಿಯಷ್ಟು ನೀರು ಬರುತ್ತಿದೆ. ಇದೇ ಪ್ರಮಾಣದ ಒಳ ಹರಿವಿದ್ದರೆ ಡ್ಯಾಂ ಭರ್ತಿಗೆ ಇನ್ನೊಂದು ವಾರ ಬೇಕಾಗಬಹುದು.

ಒಳ ಹರಿವು ತೀವ್ರ ಕಡಿಮೆಯಾಗಿದ್ದರಿಂದ ಹೊರ ಹರಿವನ್ನೂ ಕಡಿಮೆಗೊಳಿಸಿ, ಜಲಾಶಯದಲ್ಲಿ ಗರಿಷ್ಠ ಮಟ್ಟದ ನೀರನ್ನು ಸಂಗ್ರಹಿಸುವ ಕಾರ್ಯ ನಡೆದಿದೆ.

ಜಲಾಶಯದಲ್ಲೀಗ 113 ಟಿಎಂಸಿಯಷ್ಟು ನೀರು ಸಂಗ್ರಹಿಸಲಾಗಿದೆ. ಇನ್ನೂ 10 ಟಿಎಂಸಿ ನೀರನ್ನು ಸಂಗ್ರಹಿಸಬೇಕಿದೆ. ಒಳ ಹರಿವು ಗಣನೀಯವಾಗಿ ಕಡಿಮೆಯಾಗಿದ್ದರಿಂದ ಹೊರ ಹರಿವನ್ನು 128 ಕ್ಯೂಸೆಕ್‌ಗೆ ಕಡಿತಗೊಳಿಸಲಾಗಿದೆ.

ವಿದ್ಯುತ್‌ ಉತ್ಪಾದನೆ ಸ್ಥಗಿತ : ಜಲಾಶಯಕ್ಕೆ ಒಳ ಹರಿವು ಗಣನೀಯವಾಗಿ ಕಡಿಮೆಯಾಗಿದ್ದರಿಂದ ಜು.20ರಿಂದ ವಿದ್ಯುತ್‌ ಉತ್ಪಾದನೆ ಘಟಕದ ಮೂಲಕ ನೀರನ್ನು ಹೊರ ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿದೆ.

ಸದ್ಯ ಜಲಾಶಯದಿಂದ ನೀರನ್ನು ಕಾಲುವೆ, ಕೆರೆ ತುಂಬಿಸಲು, ಎನ್‌ಟಿಸಿಪಿಗೆ ಮಾತ್ರ ಹರಿ ಬಿಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ