ಆ್ಯಪ್ನಗರ

ಮೂವರು ಮನೆಗಳ್ಳರ ಬಂಧನ

ವಿಜಯಪುರ: ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ಮೂವರು ಕದೀಮರನ್ನು ಬಂಧಿಸಿರುವ ಪೊಲೀಸರು, 180 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಕಾರ್‌ ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 19 Jan 2020, 5:00 am
ವಿಜಯಪುರ: ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ಮೂವರು ಕದೀಮರನ್ನು ಬಂಧಿಸಿರುವ ಪೊಲೀಸರು, 180 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಕಾರ್‌ ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest of three homeowners
ಮೂವರು ಮನೆಗಳ್ಳರ ಬಂಧನ


ಇಲ್ಲಿನ ಜಲನಗರದ ಜೈ ಸಂತೋಷಿ ಮಾತಾ ಗುಡಿ ಹಿಂಭಾಗದ ಮನ್‌ಖಾದ್ರಿ/ಮನ್ಯಾ ಬಂದಗಿಸಾಬ ನಾಲತವಾಡ (19), ವಿಜಯಪುರ ತಾಲೂಕಿನ ಹಂಚನಾಳ ಎಲ್‌ಟಿ ನಂ.1 ರ ಭರತ ಠಾಕೂರ ರಾಠೋಡ (24) ಹಾಗೂ ಆದರ್ಶನಗರ ಕಾಶೀಮಕೇರಿ ತಾಂಡೆಯ ಮಹಾವೀರ ರಾಮಜಿ ಚೌಹಾಣ್‌ (32) ಬಂಧಿತರು ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ನಗರದಲ್ಲಿಇತ್ತೀಚಿನ ದಿನಗಳಲ್ಲಿಮನೆಗೆ ಕನ್ನಾ ಪ್ರಕರಣಗಳು ಹೆಚ್ಚಿದ್ದನ್ನು ಗಂಭೀರವಾಗಿ ಪರಿಗಣಿಸಿ, ಅಡಿಷನಲ್‌ ಎಸ್ಪಿ ಡಾ. ರಾಮ್‌ ಅರಸಿದ್ದಿ ನೇತೃತ್ವದಲ್ಲಿವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಶನಿವಾರ ನಸುಕಿನ ಜಾವ ಸೊಲ್ಲಾಪುರ ಬೈಪಾಸ್‌ನಲ್ಲಿಕರ್ತವ್ಯದಲ್ಲಿದ್ದಾಗ, ಆರೋಪಿಗಳು ಅನುಮಾನಸ್ಪದವಾಗಿ ಸಂಚರಿಸುತ್ತಿದ್ದರು. ತಕ್ಷಣಕ್ಕೆ ವಿಶೇಷ ತಂಡ ಮನ್‌ಖಾದ್ರಿ ಹಾಗೂ ಭರತನನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿವಿಚಾರಣೆಗೊಳಪಡಿಸಿದಾಗ, ಇಬ್ಬರು ಸೇರಿ ಆದರ್ಶನಗರ ಠಾಣೆ ವ್ಯಾಪ್ತಿಯಲ್ಲಿ2 ಮನೆ ಹಾಗೂ ಜಲನಗರ ಠಾಣೆ ವ್ಯಾಪ್ತಿಯಲ್ಲಿ2 ಮನೆ ಸೇರಿದಂತೆ 4 ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

4 ಪ್ರಕರಣಗಳಲ್ಲಿಕದ್ದಿದ್ದ ಚಿನ್ನಾಭರಣಗಳನ್ನು 3 ನೇ ಆರೋಪಿ ಮಹಾವೀರ ರಾಮಜಿ ಚೌಹಾಣ್‌ಗೆ ಮಾರಾಟ ಮಾಡಿದ್ದಾಗಿ ತಪ್ಪೊಪಿಕೊಂಡಿದ್ದಾರೆ. ಬಳಿಕ ಮಹಾವೀರನನ್ನು ಬಂಧಿಸಿದ್ದಾಗಿ ಎಸ್ಪಿ ನಿಕ್ಕಂ ತಿಳಿಸಿದ್ದಾರೆ.

ವಿಜಯಪುರ ಡಿವೈಎಸ್ಪಿ ಕೆ.ಸಿ.ಲಕ್ಷ್ಮೇನಾರಾಯಣ ನೇತೃತ್ವದಲ್ಲಿಗೋಲಗುಂಬಜ್‌ ಸಿಪಿಐ ಜಯವಂತ ದುಲಾರಿ, ಎಸ್‌ಐ ಎಸ್‌.ಬಿ.ಆಜೂರ, ಸಿಬ್ಬಂದಿ ಎಸ್‌.ಎಸ್‌.ಮಾಳೆಗಾಂವ್‌, ವೈ.ಪಿ.ಕಬಾಡೆ, ಸಿದ್ದು ದಾನಪ್ಪಗೋಳ, ಸಂಜಯ ಬನಪಟ್ಟಿ, ಪುಂಡಲೀಕ ಬಿರಾದಾರ, ಮಹೇಶ ಸಾಲಿಕೇರಿ ತನಿಖೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ