ವಿಜಯಪುರ: 5 ಕೋಟಿ ಹಣ ಕೊಡದಿದ್ದಲ್ಲಿ ಹಣೆಗೆ ಗುಂಡಿಟ್ಟು ಹೊಡೆಯುವುದಾಗಿ ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆಯೊಡ್ಡಿ ಆವಾಜ್ ಹಾಕಿದ್ದ ಆರೋಪಿಯನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ.
ಬರದ ನಾಡಲ್ಲಿ ಡಿಸಿಎಂ ಕಾರಜೋಳ ಪುತ್ರನ ತಪಸ್ಸು: ಕಾಡು ಕೃಷಿಯಲ್ಲಿ ಸಿಕ್ಕಿತು ಯಶಸ್ಸು..!
ಭೀಮಾ ತೀರದ ಕೆರೂರ ಗ್ರಾಮದ ಮಹಾದೇವ ಸಾಹುಕಾರ ಭೈರಗೊಂಡ ಬಂಧಿತ ಆರೋಪಿ. ಈತ ಜುಲೈ 19ರಂದು ಇಂಡಿ ಪಟ್ಟಣದ ನಾಮದೇವ ಡಾಂಗೆ ಎಂಬಾತನಿಗೆ ಕರೆ ಮಾಡಿದ್ದ. ಬಳಿಕ ಭೈರಗೊಂಡ ಜೊತೆಯಲ್ಲಿದ್ದ ಇನ್ನೂ ಇಬ್ಬರು ಆರೋಪಿಗಳು ಕೂಡಿ, ಡಾಂಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಕಾಲು ತೆಗೆಯುತ್ತೇನೆ, ತಲೆ ತೆಗೆಯುತ್ತೇನೆ 5 ಕೋಟಿ ರೂ. ಕೊಡುತ್ತಿಯೋ ಇಲ್ವೋ ಎಂದು ಬೆದರಿಕೆ ಹಾಕಿದ್ದು, ಒಂದು ವೇಳೆ ಈ ವಿಷಯ ಯಾರಿಗಾದರೂ ತಿಳಿಸಿದರೆ, ಮನೆಯೊಳಗೆ ಹೊಕ್ಕು ಹಣೆಗೆ ಗುಂಡಿಟ್ಟು ಹೊಡೆಯುತ್ತೇವೆ ಎಂದು ಧಮಕಿ ಹಾಕಿದ್ದರು. ಅಲ್ಲದೇ, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನ ಅಂಗಡಿ, ಮನೆ ಲೂಟಿ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.
ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲವೇ..?
ಆರೋಪಿಗಳಿಂದ ತನ್ನನ್ನು ರಕ್ಷಿಸಬೇಕೆಂದು ಡಾಂಗೆ ಚಡಚಣ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 511, 504, 506ರ ಅಡಿಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಚಡಚಣ ಠಾಣೆ ಪೊಲೀಸರು ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಬುಧವಾರ ಬಂಧಿಸಿ, ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ. ಜೊತೆಗೆ ಸಾಹುಕಾರ ಜೊತೆಯಲ್ಲಿದ್ದ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆದಿದೆ ಎಂದವರು ತಿಳಿಸಿದ್ದಾರೆ.
ವಿಜಯಪುರ: ಅಕ್ರಮ ಸಂಬಂಧ, ಮಹಿಳೆ, ಯುವಕನ ಮರ್ಡರ್
ಬಂಧಿತ ಆರೋಪಿ 2017ರಲ್ಲಿ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣನ ನಕಲಿ ಎನ್ಕೌಂಟರ್ ಹಾಗೂ ಆತನ ಸಹೋದರನ ನಿಗೂಢ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ 2018ರಲ್ಲಿ ಬಂಧನಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಬರದ ನಾಡಲ್ಲಿ ಡಿಸಿಎಂ ಕಾರಜೋಳ ಪುತ್ರನ ತಪಸ್ಸು: ಕಾಡು ಕೃಷಿಯಲ್ಲಿ ಸಿಕ್ಕಿತು ಯಶಸ್ಸು..!
ಭೀಮಾ ತೀರದ ಕೆರೂರ ಗ್ರಾಮದ ಮಹಾದೇವ ಸಾಹುಕಾರ ಭೈರಗೊಂಡ ಬಂಧಿತ ಆರೋಪಿ. ಈತ ಜುಲೈ 19ರಂದು ಇಂಡಿ ಪಟ್ಟಣದ ನಾಮದೇವ ಡಾಂಗೆ ಎಂಬಾತನಿಗೆ ಕರೆ ಮಾಡಿದ್ದ. ಬಳಿಕ ಭೈರಗೊಂಡ ಜೊತೆಯಲ್ಲಿದ್ದ ಇನ್ನೂ ಇಬ್ಬರು ಆರೋಪಿಗಳು ಕೂಡಿ, ಡಾಂಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಕಾಲು ತೆಗೆಯುತ್ತೇನೆ, ತಲೆ ತೆಗೆಯುತ್ತೇನೆ 5 ಕೋಟಿ ರೂ. ಕೊಡುತ್ತಿಯೋ ಇಲ್ವೋ ಎಂದು ಬೆದರಿಕೆ ಹಾಕಿದ್ದು, ಒಂದು ವೇಳೆ ಈ ವಿಷಯ ಯಾರಿಗಾದರೂ ತಿಳಿಸಿದರೆ, ಮನೆಯೊಳಗೆ ಹೊಕ್ಕು ಹಣೆಗೆ ಗುಂಡಿಟ್ಟು ಹೊಡೆಯುತ್ತೇವೆ ಎಂದು ಧಮಕಿ ಹಾಕಿದ್ದರು. ಅಲ್ಲದೇ, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನ ಅಂಗಡಿ, ಮನೆ ಲೂಟಿ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.
ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲವೇ..?
ಆರೋಪಿಗಳಿಂದ ತನ್ನನ್ನು ರಕ್ಷಿಸಬೇಕೆಂದು ಡಾಂಗೆ ಚಡಚಣ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 511, 504, 506ರ ಅಡಿಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಚಡಚಣ ಠಾಣೆ ಪೊಲೀಸರು ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಬುಧವಾರ ಬಂಧಿಸಿ, ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ. ಜೊತೆಗೆ ಸಾಹುಕಾರ ಜೊತೆಯಲ್ಲಿದ್ದ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆದಿದೆ ಎಂದವರು ತಿಳಿಸಿದ್ದಾರೆ.
ವಿಜಯಪುರ: ಅಕ್ರಮ ಸಂಬಂಧ, ಮಹಿಳೆ, ಯುವಕನ ಮರ್ಡರ್
ಬಂಧಿತ ಆರೋಪಿ 2017ರಲ್ಲಿ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣನ ನಕಲಿ ಎನ್ಕೌಂಟರ್ ಹಾಗೂ ಆತನ ಸಹೋದರನ ನಿಗೂಢ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ 2018ರಲ್ಲಿ ಬಂಧನಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.