ಆ್ಯಪ್ನಗರ

‘ಏಕತಾರಿ’ಗೆ ಪ್ರಶಸ್ತಿ ಗರಿ

ನಾಡಿನ ಖ್ಯಾತ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಹೆಸರಿನಲ್ಲಿಕೊಡಮಾಡುವ 2019ನೇ ಸಾಲಿನ ರಾಜ್ಯಮಟ್ಟದ ಕಥಾ ಪ್ರಶಸ್ತಿಗೆ ಸಿಂದಗಿಯ ಹಿರಿಯ ಕಥೆಗಾರ ಚನ್ನಪ್ಪ ಕಟ್ಟಿ ಭಾಜನರಾಗಿದ್ದಾರೆ.

Vijaya Karnataka Web 30 May 2020, 5:00 am
ಮುರಿಗೇಶ ಹಿಟ್ಟಿ ಸಿಂದಗಿ ( ವಿಜಯಪುರ): ನಾಡಿನ ಖ್ಯಾತ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಹೆಸರಿನಲ್ಲಿಕೊಡಮಾಡುವ 2019ನೇ ಸಾಲಿನ ರಾಜ್ಯಮಟ್ಟದ ಕಥಾ ಪ್ರಶಸ್ತಿಗೆ ಸಿಂದಗಿಯ ಹಿರಿಯ ಕಥೆಗಾರ ಚನ್ನಪ್ಪ ಕಟ್ಟಿ ಭಾಜನರಾಗಿದ್ದಾರೆ.
Vijaya Karnataka Web 29SND3_38


ಕನ್ನಡ ಕಥಾ ಪರಂಪರೆಗೆ ವಿಶಿಷ್ಟ ನುಡಿಗಟ್ಟು, ಮಾನವೀಯ ಸಂಗತಿಯ ಹೊಸ ಹೊಳಹು ನೀಡುವ ಕತೆಗಳನ್ನು ಹೊಂದಿರುವ ಸಂಕಲನಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಚನ್ನಪ್ಪ ಕಟ್ಟಿ ಅವರ 'ಏಕತಾರಿ' ಕಥಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯಮಟ್ಟದ ಪ್ರಶಸ್ತಿ ವಿಜಯಪುರ ಜಿಲ್ಲೆಗೆ ಸಂದಿರುವುದು ಸಂತಸ ಮೂಡಿಸಿದೆ.

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿಜನಿಸಿರುವ ಚನ್ನಪ್ಪ ಅವರು ಹುಟ್ಟೂರಿನಲ್ಲಿಪ್ರಾಥಮಿಕ ಶಿಕ್ಷಣ, ಬಾದಾಮಿಯಲ್ಲಿಪದವಿ ಪೂರ್ವ ಶಿಕ್ಷಣ ಹಾಗೂ ಧಾರವಾಡದಲ್ಲಿಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದು 1979 ರಿಂದ ಸಿಂದಗಿಯ ಪೋರವಾಲ ಕಾಲೇಜ್‌ನಲ್ಲಿಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಮೂರುವೆರೆ ದಶಕಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿ 2016ರಲ್ಲಿನಿವೃತ್ತರಾಗಿದ್ದಾರೆ.

ಪ್ರಾಧ್ಯಾಪಕ ವೃತ್ತಿ ಜತೆಗೆ ಸಾಹಿತ್ಯ ಕೃಷಿ ಕೈಗೊಂಡು ಈ ವರೆಗೆ 4 ಕವನ ಸಂಕಲನ, 3 ಕಥಾ ಸಂಕಲನ, 2 ಸಂಶೋಧನಾ ಗ್ರಂಥ, 1 ವಿಮರ್ಶಾ ಗ್ರಂಥ, 1 ವೈಚಾರಿಕ ಲೇಖನಗಳ ಸಂಕಲನ, ಮಹಿಳಾ ಸಂಸ್ಕೃತಿಗೆ ಸಂಬಂಧಿಸಿದ ಗ್ರಂಥ ಹಾಗೂ 2 ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಮೋಘಸಿದ್ಧ ಪರಂಪರೆ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್‌ ಪಡೆದಿದ್ದಾರೆ. ಸಿಂದಗಿಯಲ್ಲಿತಮ್ಮ ಸ್ನೇಹಿತರ ಒಡಗೂಡಿ ನೆಲೆ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ 60 ಗ್ರಂಥಗಳನ್ನು ಪ್ರಕಟಿಸಿದ್ದಾರೆ. ನಾಡಿನ ಹಿರಿಯ ಹಾಗೂ ಸ್ಥಳೀಯ ಲೇಖಕರ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಚನ್ನಪ್ಪ ಕಟ್ಟಿ ಅವರ ಸಾಹಿತ್ಯ ಕೃಷಿಯನ್ನು ಗಮನಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ನಾಡಿನ ಶ್ರೇಷ್ಠ ಕತೆಗಾರರೂ ಆಗಿರುವ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಹೆಸರಲ್ಲಿನೀಡುವ ಪ್ರಶಸ್ತಿಗೆ ನನ್ನ ಏಕತಾರಿ ಕಥಾ ಸಂಕಲನ ಆಯ್ಕೆಯಾಗಿರುವುದು ಸಂತಸ ತಂದಿದೆ.
- ಚನ್ನಪ್ಪ ಕಟ್ಟಿ , ಸಾಹಿತಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ