ಆ್ಯಪ್ನಗರ

ಬಿಎಸ್‌ವೈ ವಿರುದ್ಧ ಇಬ್ಬರು ಕೇಂದ್ರ ಸಚಿವರಿಂದ ಷಡ್ಯಂತ್ರ: ಬಸನಗೌಡ ಪಾಟೀಲ ಯತ್ನಾಳ

ಅನಂತಕುಮಾರ್‌ ಹಾಗೂ ಯಡಿಯೂರಪ್ಪ ಈ ಹಿಂದೆ ಜಗಳವಾಡುತ್ತಿದ್ದರು. ಆದರೆ, ಪಕ್ಷ, ಕರ್ನಾಟಕ, ದೇಶದ ಹಿತ ಬಂದಾಗ ಇಬ್ಬರೂ ಒಗ್ಗೂಡುತ್ತಿದ್ದರು. ಆದರೆ, ಈಗ ರಾಜ್ಯದಲ್ಲಿ ನಡೆದಿರುವುದೇ ಬೇರೆ ಎಂದು ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 9 Oct 2019, 10:28 pm
ವಿಜಯಪುರ : ಕೇಂದ್ರದ ಇಬ್ಬರು ಸಚಿವರು ಯಡಿಯೂರಪ್ಪ ಅವರನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ನಾನೇನಾದರೂ ನೆರೆ ಸಂತ್ರಸ್ತರ ಬಗ್ಗೆ ನಾನು ಧ್ವನಿ ಎತ್ತದಿದ್ದರೆ ಸಿಎಂ ಬಿ.ಎಸ್‌.ಯಡಿಯೂರಪ್ಪ 15 ದಿನದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್‌ ಸಿಡಿಸಿದ್ದಾರೆ.
Vijaya Karnataka Web ಬಸನಗೌಡ ಪಾಟೀಲ್‌ ಯತ್ನಾಳ್‌
ಬಸನಗೌಡ ಪಾಟೀಲ್‌ ಯತ್ನಾಳ್‌


ಬುಧವಾರ ವಿಜಯಪುರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಚಾಡಿಕೋರರದಿಂದ ರಾಜ್ಯದಲ್ಲಿಬಿಜೆಪಿ ಹಾಳಾಗುತ್ತಿದೆ. ಕೇಂದ್ರದ ಇಬ್ಬರು ಸಚಿವರು ಯಡಿಯೂರಪ್ಪ ಅವರನ್ನು ಮುಗಿಸಲು ಪ್ರಯತ್ನಿಸುತ್ತಿರುವ ಬಗ್ಗೆ ನನಗೆ ದಿಲ್ಲಿಯಿಂದ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ನೋಟಿಸ್‌ಗೆ ಉತ್ತರ ನೀಡಲ್ಲ, ಮೋದಿ ಮುಂದೆ ರಾಜ್ಯದ ಜನರ ಭಾವನೆ ಹೇಳುತ್ತೇನೆ: ಯತ್ನಾಳ ಖಡಕ್‌ ನುಡಿ

ಯಡಿಯೂರಪ್ಪ ಬಗ್ಗೆ ನಿಮಗೆ ಅಸಮಾಧಾವಿದ್ದರೆ, ಅವರು ಬೇಡವಾಗಿದ್ದರೆ 76 ವಯಸ್ಸಾಗಿದೆ. ಪಕ್ಷದ ನಿಯಮದಂತೆ ರಾಜೀನಾಮೆ ಕೊಡಿ ಎಂದು ಕೇಳಲಿ, ಬೇಕಿದ್ದರೆ ಹೊಸ ನಾಯಕನನ್ನು ಆಯ್ಕೆ ಮಾಡಲಿ. ಅದನ್ನು ಬಿಟ್ಟು ಸಂತ್ರಸ್ತರಿಗೆ ಪರಿಹಾರ ಕೊಡೋಕ್ಕೆ ಅಡ್ಡ ಹಾಕುವುದು, ಯಡಿಯೂರಪ್ಪ ವಿರೋಧಿಗಳನ್ನು ಪದಾಧಿಕಾರಿಗಳನ್ನಾಗಿ ಮಾಡುವುದು ಸರಿಯಲ್ಲ ಎಂದು ಕೇಂದ್ರದ ಇಬ್ಬರು ಸಚಿವರ ಹೆಸರನ್ನೇಳದೆ ಯತ್ನಾಳ ವಾಗ್ದಾಳಿ ನಡೆಸಿದರು.

ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ರಾಜ್ಯದ ಸಚಿವರಿಬ್ಬರ ಕುತಂತ್ರದಿಂದ ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತದೆ. ಇದು ಎಷ್ಟು ಸರಿ ಎಂದು ಎಂದು ಯತ್ನಾಳ ಅಸಮಾಧಾನ ಹೊರ ಹಾಕಿದರು.

ಯಡಿಯೂರಪ್ಪ ವಿರೋಧಿಗಳು ಹಾಗೂ ಅವರ ಪರ ಇರುವವರನ್ನು ಕೂಡಿಸಿ ಕೇಳಿ ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ಆಗ್ರಹಿಸಿದ ಯತ್ನಾಳ, ಯಡಿಯೂರಪ್ಪ ತಪ್ಪು ಮಾಡಿದ್ದರೆ ಅವರ ಕಿವಿ ಹಿಂಡಿ. ಯಡಿಯೂರಪ್ಪ ವಿರುದ್ಧ ತಂತ್ರ ರೂಪಿಸಿದರ ಕಿವಿಯನ್ನೂ ಹಿಂಡಿ. ರಾಜ್ಯದಲ್ಲಿಪಕ್ಷ ಉಳಿಸುವ ಬಯಕೆ ಇದ್ದರೆ ಯಡಿಯೂರಪ್ಪ ಮತ್ತು ಅವರ ವಿರೋಧಿಗಳನ್ನು ಒಟ್ಟಿಗೆ ಕೂಡಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೇಂದ್ರ ನಾಯಕರಿಗೆ ಯತ್ನಾಳ ಆಗ್ರಹಿಸಿದರು.

ಕುತಂತ್ರ ನಡೆಯಲ್ಲ

ಯಾರು ಚಾಡಿ ಹೇಳುತ್ತಿರುವವರಷ್ಟೇ ಪಕ್ಷ ಕಟ್ಟಿಲ್ಲ, ಯಡಿಯೂರಪ್ಪ ಹಾಗು ಅನಂತಕುಮಾರ್‌ ಹಗಲು ರಾತ್ರಿ ಊರೂರು ಸುತ್ತಿ ಪಕ್ಷ ಕಟ್ಟಿದ್ದಾರೆ. ನಾವೂ ಪಕ್ಷಕ್ಕಾಗಿ ಶ್ರಮಿಸಿದ್ದೇವೆ. ಆದರೆ ಅನಂತಕುಮಾರ್‌ ಅವರ ಪತ್ನಿಗೂ ಟಿಕೆಟ್‌ ತಪ್ಪಿಸುತ್ತೀರಿ, ಯಡಿಯೂರಪ್ಪ ಅವರನ್ನೂ ಮುಗಿಸುತ್ತೀವಿ ಎನ್ನುತ್ತೀರಿ. ಇದು ಯಾವ ಕಾಲಕ್ಕೂ ಆಗದ ಕೆಲಸ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪರ ಯತ್ನಾಳ ಬ್ಯಾಟಿಂಗ್‌ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ