ಆ್ಯಪ್ನಗರ

ನಮ್ಮ ಶಿಕ್ಷಣ ಸಂಸ್ಥೆಯಲ್ಲಿದ್ದ ಕಾರ್ನಾಡ್‌ ಭಾವಚಿತ್ರವನ್ನು ತಿಪ್ಪೆಗುಂಡಿಗೆ ಹಾಕಿದ್ದೇನೆ, ಪ್ರಕಾಶ್‌ ರೈ ಕಳ್ಳ: ಯತ್ನಾಳ

ಕಿಡಿಕಾರಿದ ವಿಜಯಪುರ ಶಾಸಕ

Vijaya Karnataka Web 28 Nov 2018, 9:08 pm
ವಿಜಯಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಸದಾ ದೇಶದ ವಿರುದ್ಧ ಮಾತನಾಡುವ ಗಿರೀಶ ಕಾರ್ನಾಡ್ ಕಂಡರೆ ನನಗೆ ಹೊಟ್ಡೆಯಲ್ಲಿ ಬೆಂಕಿ ಬೀಳುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ.
Vijaya Karnataka Web ಬಸನಗೌಡ ಪಾಟೀಲ್‌ ಯತ್ನಾಳ
ಬಸನಗೌಡ ಪಾಟೀಲ್‌ ಯತ್ನಾಳ


ವಿಜಯಪುರದಲ್ಲಿ ಎಬಿವಿಪಿ ಅಯೋಜಿಸಿದ್ದ ನಾಗರಿಕ ಮುಖವಾಡದ ನಕ್ಸಲರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿದರು.

ನಮ್ಮ ಶಿಕ್ಷಣ ಸಂಸ್ಥೆಯಲ್ಲಿದ್ದ ಕಾರ್ನಾಡ್ ಭಾವಚಿತ್ರವನ್ನು ಕಿತ್ತು ತಿಪ್ಪೆಗುಂಡಿಗೆ ಹಾಕಿ ಎಂದಿದ್ದೆ. ದೇಶದ್ದ ವಿರುದ್ಧ ಮಾತಾಡುವವರ ಭಾವಚಿತ್ರವನ್ನು ನಾವೇಕೆ ಹಾಕಬೇಕು ಎಂದು ಹೇಳಿದರು.

ಪ್ರಕಾಶ್ ರೈ ಬಗ್ಗೆ ಕೂಡ ಯತ್ನಾಳ ಕಿಡಿಕಾರಿದರು.

ಚಿತ್ರನಟರಾಗಿರುವ ಪ್ರಕಾಶ್‌ ರೈ ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಕಾಶ್‌ ರೈ ಒಬ್ಬ ಕಳ್ಳ ಎಂದು ಬಸನಗೌಡ ಪಾಟೀಲ್‌ ಯತ್ನಾಳ ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ