ಆ್ಯಪ್ನಗರ

ಜಿಲ್ಲಾದ್ಯಂತ ಬಸವ ಜಯಂತಿ

Vijaya Karnataka 8 May 2019, 5:00 am
ವಿಜಯಪುರ: ಜಗಜ್ಯೋತಿ ಬಸವಣ್ಣನವರು ಜನಿಸಿದ ಬಸವನಬಾಗೇವಾಡಿಯಲ್ಲಿ ಬಾಲ ಬಸವಣ್ಣನನ್ನು ತೊಟ್ಟಿಲಿಗೆ ಹಾಕುವ ಮೂಲಕ ಜಯಂತಿ ಆಚರಿಸಿದರೆ, ಇತ್ತ ಜಿಲ್ಲಾದ್ಯಂತ ಜಗಜ್ಯೋತಿಯ ನಾಮಸ್ಮರಣೆ ಜರುಗಿತು.
Vijaya Karnataka Web basav jayanti throughout the district
ಜಿಲ್ಲಾದ್ಯಂತ ಬಸವ ಜಯಂತಿ


ಬಸವನಬಾಗೇವಾಡಿ ಸ್ಮಾರಕದಲ್ಲಿರುವ ತೊಟ್ಟಿಲಲ್ಲಿ ಉಭಯ ಶ್ರೀಗಳು ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ ಶಿಶು ಬಸವನನ್ನು ಹಾಕಿ ನಾಮಕರಣ ಮಾಡಿದರು. 21 ಮುತ್ತೈದೆಯರು ತೊಟ್ಟಿಲು ಕೆಳಗೆ ಕುಳಿತಿದ್ದರು. ಬಸವ ಸೈನ್ಯ ಸಂಘಟನೆ ಕಾರ್ಯಕರ್ತರು ಸಾಥ್‌ ನೀಡಿದರು.

ಜಿಲ್ಲೆಯ ನಾನಾ ಕಡೆ ಸಂಘ ಸಂಸ್ಥೆಗಳು ಬಸವ ಜಯಂತಿ ಆಚರಿಸಿದವು. ಈ ವೇಳೆ ಹಲವರು ಬಸವಣ್ಣನವರ ತತ್ತ್ವಾದರ್ಶಗಳ ಗುಣಗಾನ ಮಾಡಿದರು. ಅಲ್ಲದೇ ಹಳ್ಳಿಗಳಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ