ವಿಕ ವಿಶೇಷ ವಿಜಯಪುರ
ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದವರು ಬಸವಣ್ಣ. ಅದರಿಂದಲೇ ಇಡೀ ವಿಶ್ವ ಅವರನ್ನು ಆರಾಧಿಸುತ್ತದೆ. ಅಂತಹ ಬಸವಣ್ಣನ ವೃತ್ತಕ್ಕೆ ತವರೂ ಜಿಲ್ಲೆ ವಿಜಯಪುರ ನಗರದಲ್ಲಿಯೇ ರಕ್ಷಣೆಯಿಲ್ಲ. ಬಿಡಾಡಿ ದನಗಳು, ನಾಯಿಗಳು ವೃತ್ತವನ್ನು ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದು, ಬಸವಾಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿದೆ.
20 ವರ್ಷಗಳ ಹಿಂದೆ ವೃತ್ತವನ್ನು ನಿರ್ಮಿಸಲಾಗಿದೆ. ಈಗ ಸಿದ್ದೇಶ್ವರ ಸಂಸ್ಥೆಯಿಂದ ಅಂದಾಜು 15 ಲಕ್ಷ ರೂ.ಗಳ ವೆಚ್ಚದಲ್ಲಿ ಆಳೆತ್ತದರ ಕುದುರೆ ಮೇಲೆ ವಿರಾಜಮಾನರಾದ ಬಸವೇಶ್ವರರ ಮೂರ್ತಿ ಹೊರತು ಪಡಿಸಿ ವೃತ್ತವನ್ನು ನವೀಕರಣ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ ಪರಿಣಾಮ ಮತ್ತು ಭದ್ರತೆ ಇಲ್ಲದ ಕಾರಣ ಈ ರೀತಿಯ ಆವಾಂತರಗಳಿಗೆ ಕಾರಣವಾಗಿದೆ.
ಅಭಿವೃದ್ಧಿ ದೃಷ್ಟಿಯಿಂದ ಸುತ್ತಲಿನ ಕಾಂಪೌಂಡ್ ಕೆಳ ಹಂತದಲ್ಲಿ ನಿರ್ಮಾಣ ಮಾಡಿದ್ದು ಮತ್ತು ಯಾವುದೇ ರಕ್ಷಣೆ ವ್ಯವಸ್ಥೆ ಮಾಡದ ಕಾರಣ ಬಿಡಾಡಿ ದನಗಳು ಮತ್ತು ನಾಯಿಗಳು ಲೀಲಾಜಾಲವಾಗಿ ವೃತ್ತದ ಮೇಲೇರಿ ಆಶ್ರಯ ಪಡೆದುಕೊಳ್ಳುತ್ತಿವೆ. ಸಾಕಷ್ಟು ವಾಹನಗಳ ಸಂಚಾರದ ನಡುವೆಯೂ ರಾಜಾರೋಷವಾಗಿ ಮಲಗಿರುತ್ತವೆ. ವೃತ್ತದಲ್ಲಿ ದನಕರುಗಳು, ನಾಯಿಗಳು ಮಲಗಿರುವುದನ್ನು ಕಂಡು ವೃತ್ತದ ಮಾರ್ಗವಾಗಿ ಸಂಚರಿಸುವ ಅನೇಕರು ಮಮ್ಮಲ ಮರುಗುತ್ತಿದ್ದಾರೆ. ಕುಳಿತರೂ ಬಸವ ನಿಂತರೂ ಬಸವ ಎನ್ನುವ ಬಸವಣ್ಣನ ಆರಾಧಕರು ಮಾತ್ರ ಈ ಅವ್ಯವಸ್ಥೆಗೆ ಕಾರಣರಾದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಸವ ಜಯಂತಿಗೆ ಮಾತ್ರ ನೆನಪು
ಬಸವ ಜಯಂತಿ ಬಂದಾಗ ಮಾತ್ರ ಎಲ್ಲರೂ ಈ ವೃತ್ತವನ್ನು ನೆನಪಿಸಿಕೊಳ್ಳುತ್ತಾರೆ. ಆಗ ಬಸವಣ್ಣನವರ ವಚನಗಳಲ್ಲಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ಸಾಗಿಸುವಂತೆ ಎಲ್ಲರೂ ಮಾತನಾಡುತ್ತಾರೆ. ನಗರದಲ್ಲಿ ನಡೆಯುವ ಪ್ರತಿ ಹೋರಾಟ, ರಾರಯಲಿಗಳ ಸಂದರ್ಭದಲ್ಲಿ ವೃತ್ತದಲ್ಲಿನ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಿಸುತ್ತಾರೆ. ಆದರೆ ವೃತ್ತದ ಅವ್ಯವಸ್ಥೆ ಕುರಿತು ಯಾರೂ ಚಿಂತಿಸುತ್ತಿಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ.
ನವೀಕರಣ ಕಾಮಗಾರಿ ಪೂರ್ಣಗೊಂಡು, ವೃತ್ತದಲ್ಲಿನ ಸುಂದರ ಉದ್ಯಾನ, ಮೂರ್ತಿಗೆ ಹಾರ ಹಾಕಲು ಲಿಫ್ಟ್, ಕಣ್ಮನ ತಣಿಸುವ ವಿದ್ಯುತ್ ದೀಪಾಲಂಕಾರ, ಮಧ್ಯದಲ್ಲಿ ಕಂಗೋಳಿಸುವ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಬಸವಾಭಿಮಾನಿಗಳು ಕಾತರಿಸುತ್ತಿದ್ದಾರೆ. ಆದರೆ ಕಾಮಗಾರಿ ಜವಾಬ್ದಾರಿ ಪಡೆದವರು ಮಾತ್ರ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಅಂದಾಜು 15 ಲಕ್ಷ ರೂ.ಗಳ ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭವಾಗಿದೆ. ಈಗಾಗಲೇ 5 ಲಕ್ಷ ರೂ.ಗಳ ವೆಚ್ಚದಲ್ಲಿ ಮುಂಬೈನ ನುರಿತ ತಂತ್ರಜ್ಞರಿಂದ ಪಂಚಲೋಹದ ಬಸವೇಶ್ವರ ಮೂರ್ತಿಯ ಮೇಲಿದ್ದ ಧೂಳನ್ನು ತೆಗೆಸಿ ಕಲರ್ ಮಾಡಿಸಲಾಗಿದೆ. ಇದರಿಂದ ಮೂರ್ತಿ ಫಳಫಳ ಹೊಳೆಯುತ್ತಿದೆ. ಮೂರ್ತಿಗೆ ಹಾರ ಹಾಕಲು ಮತ್ತು ಪೂಜೆ ಸಲ್ಲಿಸಲು ಹೈಡ್ರಾಲಿಕ್ ಲೀಫ್ಟ್ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ಕಾಂಪೌಂಡ್ ಮತ್ತು ತಾತ್ಕಾಲಿಕ ಲೈಟಿಂಗ್ ಅಳವಡಿಸಲಾಗಿದೆ. ಇನ್ನೂ ಗ್ರೀಲ್ ಅಳವಡಿಕೆ, ಗ್ರಾನೈಟ್ ಅಳವಡಿಕೆ, ಹುಲ್ಲು ಹಾಸು ಹಾಗೂ ಮೂರ್ತಿ ಅತ್ಯಾಕರ್ಷಕವಾಗಿ ಗೋಚರಿಸುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಕಾಮಗಾರಿಗಳು ಕೆಲ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬಸವೇಶ್ವರ ವೃತ್ತ ನೋಡುಗರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ಸಿದ್ದೇಶ್ವರ ಸಂಸ್ಥೆಯವರು.
ಗ್ರೀಲ್ ಅಳವಡಿಕೆಯಾಗದೇ ಇರುವುದರಿಂದ ದನಕರಗಳು ಮೇಲೆ ಹತ್ತುತ್ತಿವೆ. ಕೆಲ ದಿನಗಳಲ್ಲಿಯೇ ಗ್ರೀಲ್ ಅಳವಡಿಸಲಾಗುವುದು. ಗ್ರಾನೈಟ್ ಅಳವಡಿಕೆ, ಹುಲ್ಲು ಹಾಸು ಸೇರಿದಂತೆ ಉಳಿದೆಲ್ಲ ಕಾಮಗಾರಿ ತಿಂಗಳಲ್ಲೇ ಪೂರ್ಣಗೊಳ್ಳಲಿದೆ. ವೃತ್ತದ ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಯಿಂದ ನಿರ್ವಹಣೆ ಮಾಡಲಾಗುವುದು.
ಬಸಯ್ಯ ಎಸ್.ಹಿರೇಮಠ. ಚೇರಮನ್. ಸಿದ್ಧೇಶ್ವರ ಸಂಸ್ಥೆ.
ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದವರು ಬಸವಣ್ಣ. ಅದರಿಂದಲೇ ಇಡೀ ವಿಶ್ವ ಅವರನ್ನು ಆರಾಧಿಸುತ್ತದೆ. ಅಂತಹ ಬಸವಣ್ಣನ ವೃತ್ತಕ್ಕೆ ತವರೂ ಜಿಲ್ಲೆ ವಿಜಯಪುರ ನಗರದಲ್ಲಿಯೇ ರಕ್ಷಣೆಯಿಲ್ಲ. ಬಿಡಾಡಿ ದನಗಳು, ನಾಯಿಗಳು ವೃತ್ತವನ್ನು ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದು, ಬಸವಾಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿದೆ.
20 ವರ್ಷಗಳ ಹಿಂದೆ ವೃತ್ತವನ್ನು ನಿರ್ಮಿಸಲಾಗಿದೆ. ಈಗ ಸಿದ್ದೇಶ್ವರ ಸಂಸ್ಥೆಯಿಂದ ಅಂದಾಜು 15 ಲಕ್ಷ ರೂ.ಗಳ ವೆಚ್ಚದಲ್ಲಿ ಆಳೆತ್ತದರ ಕುದುರೆ ಮೇಲೆ ವಿರಾಜಮಾನರಾದ ಬಸವೇಶ್ವರರ ಮೂರ್ತಿ ಹೊರತು ಪಡಿಸಿ ವೃತ್ತವನ್ನು ನವೀಕರಣ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ ಪರಿಣಾಮ ಮತ್ತು ಭದ್ರತೆ ಇಲ್ಲದ ಕಾರಣ ಈ ರೀತಿಯ ಆವಾಂತರಗಳಿಗೆ ಕಾರಣವಾಗಿದೆ.
ಅಭಿವೃದ್ಧಿ ದೃಷ್ಟಿಯಿಂದ ಸುತ್ತಲಿನ ಕಾಂಪೌಂಡ್ ಕೆಳ ಹಂತದಲ್ಲಿ ನಿರ್ಮಾಣ ಮಾಡಿದ್ದು ಮತ್ತು ಯಾವುದೇ ರಕ್ಷಣೆ ವ್ಯವಸ್ಥೆ ಮಾಡದ ಕಾರಣ ಬಿಡಾಡಿ ದನಗಳು ಮತ್ತು ನಾಯಿಗಳು ಲೀಲಾಜಾಲವಾಗಿ ವೃತ್ತದ ಮೇಲೇರಿ ಆಶ್ರಯ ಪಡೆದುಕೊಳ್ಳುತ್ತಿವೆ. ಸಾಕಷ್ಟು ವಾಹನಗಳ ಸಂಚಾರದ ನಡುವೆಯೂ ರಾಜಾರೋಷವಾಗಿ ಮಲಗಿರುತ್ತವೆ. ವೃತ್ತದಲ್ಲಿ ದನಕರುಗಳು, ನಾಯಿಗಳು ಮಲಗಿರುವುದನ್ನು ಕಂಡು ವೃತ್ತದ ಮಾರ್ಗವಾಗಿ ಸಂಚರಿಸುವ ಅನೇಕರು ಮಮ್ಮಲ ಮರುಗುತ್ತಿದ್ದಾರೆ. ಕುಳಿತರೂ ಬಸವ ನಿಂತರೂ ಬಸವ ಎನ್ನುವ ಬಸವಣ್ಣನ ಆರಾಧಕರು ಮಾತ್ರ ಈ ಅವ್ಯವಸ್ಥೆಗೆ ಕಾರಣರಾದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಸವ ಜಯಂತಿಗೆ ಮಾತ್ರ ನೆನಪು
ಬಸವ ಜಯಂತಿ ಬಂದಾಗ ಮಾತ್ರ ಎಲ್ಲರೂ ಈ ವೃತ್ತವನ್ನು ನೆನಪಿಸಿಕೊಳ್ಳುತ್ತಾರೆ. ಆಗ ಬಸವಣ್ಣನವರ ವಚನಗಳಲ್ಲಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ಸಾಗಿಸುವಂತೆ ಎಲ್ಲರೂ ಮಾತನಾಡುತ್ತಾರೆ. ನಗರದಲ್ಲಿ ನಡೆಯುವ ಪ್ರತಿ ಹೋರಾಟ, ರಾರಯಲಿಗಳ ಸಂದರ್ಭದಲ್ಲಿ ವೃತ್ತದಲ್ಲಿನ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಿಸುತ್ತಾರೆ. ಆದರೆ ವೃತ್ತದ ಅವ್ಯವಸ್ಥೆ ಕುರಿತು ಯಾರೂ ಚಿಂತಿಸುತ್ತಿಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ.
ನವೀಕರಣ ಕಾಮಗಾರಿ ಪೂರ್ಣಗೊಂಡು, ವೃತ್ತದಲ್ಲಿನ ಸುಂದರ ಉದ್ಯಾನ, ಮೂರ್ತಿಗೆ ಹಾರ ಹಾಕಲು ಲಿಫ್ಟ್, ಕಣ್ಮನ ತಣಿಸುವ ವಿದ್ಯುತ್ ದೀಪಾಲಂಕಾರ, ಮಧ್ಯದಲ್ಲಿ ಕಂಗೋಳಿಸುವ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಬಸವಾಭಿಮಾನಿಗಳು ಕಾತರಿಸುತ್ತಿದ್ದಾರೆ. ಆದರೆ ಕಾಮಗಾರಿ ಜವಾಬ್ದಾರಿ ಪಡೆದವರು ಮಾತ್ರ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಅಂದಾಜು 15 ಲಕ್ಷ ರೂ.ಗಳ ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭವಾಗಿದೆ. ಈಗಾಗಲೇ 5 ಲಕ್ಷ ರೂ.ಗಳ ವೆಚ್ಚದಲ್ಲಿ ಮುಂಬೈನ ನುರಿತ ತಂತ್ರಜ್ಞರಿಂದ ಪಂಚಲೋಹದ ಬಸವೇಶ್ವರ ಮೂರ್ತಿಯ ಮೇಲಿದ್ದ ಧೂಳನ್ನು ತೆಗೆಸಿ ಕಲರ್ ಮಾಡಿಸಲಾಗಿದೆ. ಇದರಿಂದ ಮೂರ್ತಿ ಫಳಫಳ ಹೊಳೆಯುತ್ತಿದೆ. ಮೂರ್ತಿಗೆ ಹಾರ ಹಾಕಲು ಮತ್ತು ಪೂಜೆ ಸಲ್ಲಿಸಲು ಹೈಡ್ರಾಲಿಕ್ ಲೀಫ್ಟ್ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ಕಾಂಪೌಂಡ್ ಮತ್ತು ತಾತ್ಕಾಲಿಕ ಲೈಟಿಂಗ್ ಅಳವಡಿಸಲಾಗಿದೆ. ಇನ್ನೂ ಗ್ರೀಲ್ ಅಳವಡಿಕೆ, ಗ್ರಾನೈಟ್ ಅಳವಡಿಕೆ, ಹುಲ್ಲು ಹಾಸು ಹಾಗೂ ಮೂರ್ತಿ ಅತ್ಯಾಕರ್ಷಕವಾಗಿ ಗೋಚರಿಸುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಕಾಮಗಾರಿಗಳು ಕೆಲ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬಸವೇಶ್ವರ ವೃತ್ತ ನೋಡುಗರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ಸಿದ್ದೇಶ್ವರ ಸಂಸ್ಥೆಯವರು.
ಗ್ರೀಲ್ ಅಳವಡಿಕೆಯಾಗದೇ ಇರುವುದರಿಂದ ದನಕರಗಳು ಮೇಲೆ ಹತ್ತುತ್ತಿವೆ. ಕೆಲ ದಿನಗಳಲ್ಲಿಯೇ ಗ್ರೀಲ್ ಅಳವಡಿಸಲಾಗುವುದು. ಗ್ರಾನೈಟ್ ಅಳವಡಿಕೆ, ಹುಲ್ಲು ಹಾಸು ಸೇರಿದಂತೆ ಉಳಿದೆಲ್ಲ ಕಾಮಗಾರಿ ತಿಂಗಳಲ್ಲೇ ಪೂರ್ಣಗೊಳ್ಳಲಿದೆ. ವೃತ್ತದ ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಯಿಂದ ನಿರ್ವಹಣೆ ಮಾಡಲಾಗುವುದು.
ಬಸಯ್ಯ ಎಸ್.ಹಿರೇಮಠ. ಚೇರಮನ್. ಸಿದ್ಧೇಶ್ವರ ಸಂಸ್ಥೆ.