ಆ್ಯಪ್ನಗರ

ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ

ಭೀಮಾತೀರದ ರಕ್ತಚರಿತ್ರೆಗೆ ಮತ್ತೆ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ (40) ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ರಮೇಶ ಹಡಪದ, ಭೀಮಶಿ ಹರಿಜನ, ನಾಮದೇವ ದೊಡಮನಿ, ರಜಾಕ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಇಂಚಗೇರಿ ಬಂಧಿತರು.

Vijaya Karnataka Web 15 Aug 2017, 9:52 pm
ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಮತ್ತೆ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ (40) ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ರಮೇಶ ಹಡಪದ, ಭೀಮಶಿ ಹರಿಜನ, ನಾಮದೇವ ದೊಡಮನಿ, ರಜಾಕ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಇಂಚಗೇರಿ ಬಂಧಿತರು.
Vijaya Karnataka Web bhagappa harijan shootout case 6 arrested
ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ


ಆಗಸ್ಟ್ 8ರಂದು ಬಾಗಪ್ಪ ಹರಿಜನ್ ಮೇಲೆ ವಿಜಯಪುರ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿತ್ತು. ಇದೊಂದು ಪ್ರತೀಕಾರದ ದಾಳಿ ಆಗಿದ್ದು, ಬಂಧಿತರಿಂದ 6 ಮೊಬೈಲ್ ಹಾಗೂ ಸ್ಕಾರ್ಫಿಯೋ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಕುಲದೀಪ್ ಜೈನ್ ತಿಳಿಸಿದ್ದಾರೆ.



ಗುಂಡಿನ ದಾಳಿಯಲ್ಲಿ ಬಾಗಪ್ಪ ಹರಿಜನ್ ತೀವ್ರವಾಗಿ ಗಾಯಗೊಂಡಿದ್ದರು. ಅವರ ದೇಹದೊಳಕ್ಕೆ ಮೂರು ಗುಂಡುಗಳು ಹೊಕ್ಕಿದ್ದು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಅವನ್ನು ಹೊರತೆಗೆದಿದ್ದಾರೆ. ವಿಚಾರಣೆ ನಿಮಿತ್ತ ಬಾಗಪ್ಪ ಹರಿಜನ್ ಆಗಸ್ಟ್ 8ರಂದು ವಿಜಯಪುರ ಕೋರ್ಟ್‌ಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬಾಗಪ್ಪ ಮೇಲೆ ಗುಂಡಿನ ದಾಳಿ ನಡೆದಿತ್ತು.

ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಸಂಬಂಧಿಯಾಗಿದ್ದ ಬಾಗಪ್ಪ ಹರಿಜನ ಮೇಲೆ ಅಂದು ಬೆಳಗ್ಗೆ 10.45ಕ್ಕೆ ಶೂಟೌಟ್ ನಡೆಯಿತು. ಶೂಟರ್ ಕೋರ್ಟ್ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ನಾಲ್ಕು ಗುಂಡು ಹಾರಿಸಲಾಗಿತ್ತು, ಅದರಲ್ಲಿ ಮೂರು ಗುಂಡು ಎಡಗಡೆ ಭುಜ ಮತ್ತು ಹೊಟ್ಟೆಗೆ ಹೊಕ್ಕಿದ್ದವು. ವಿಜಯಪುರದ ಬಿಎಲ್‌ಡಿಇ ಕಾಲೇಜಿನಲ್ಲಿ ಸಾವುಬದುಕಿನ ನಡುವೆ ಬಾಗಪ್ಪ ಹೋರಾಡುತ್ತಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ