ಆ್ಯಪ್ನಗರ

ಬಿಜೆಪಿ ಕಚ್ಚಾಟ ಶೀಘ್ರ ಬೀದಿಗೆ

ವಿಜಯಪುರ : ರಾಜ್ಯದಲ್ಲಿಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಆ ಪಕ್ಷದ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಶೀಘ್ರದಲ್ಲಿಅದು ಸ್ಫೋಟಗೊಳ್ಳುವ ಮೂಲಕ ಬೀದಿಗೆ ಬರಲಿದೆ ಎಂದು ನಾಗಠಾಣ ಶಾಸಕ ದೇವಾನಂದ ಚೌಹಾಣ್‌ ಹೇಳಿದರು.

Vijaya Karnataka 16 Oct 2019, 5:00 am
ವಿಜಯಪುರ : ರಾಜ್ಯದಲ್ಲಿಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಆ ಪಕ್ಷದ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಶೀಘ್ರದಲ್ಲಿಅದು ಸ್ಫೋಟಗೊಳ್ಳುವ ಮೂಲಕ ಬೀದಿಗೆ ಬರಲಿದೆ ಎಂದು ನಾಗಠಾಣ ಶಾಸಕ ದೇವಾನಂದ ಚೌಹಾಣ್‌ ಹೇಳಿದರು.
Vijaya Karnataka Web bjp brawl to quick street
ಬಿಜೆಪಿ ಕಚ್ಚಾಟ ಶೀಘ್ರ ಬೀದಿಗೆ


ನಗರದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿಯಲ್ಲಿನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಏನೆಲ್ಲಮಾಡಿದ್ದಾರೋ, ಅದನ್ನೆಲ್ಲಉಣ್ಣುತ್ತಿದ್ದಾರೆ ಎನ್ನುವ ಮೂಲಕ ಮಾಡಿದ್ದುಣ್ಣೋ ಮಹಾರಾಯ ಎಂದರು.

ಮುಖ್ಯಮಂತ್ರಿ ಬೆಂಬಲಿಗರ ಮೇಲೆ ಬಿಜೆಪಿ ಕಚೇರಿಯಲ್ಲಿಹಲ್ಲೆಹಾಗೂ ಯಡಿಯೂರಪ್ಪ ಅವರಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೌಹಾಣ್‌, ಅದು ಬಿಜೆಪಿ ಆಂತರಿಕ ವಿಷಯ. ಮೈತ್ರಿ ಸರಕಾರದ ಅವಧಿಯಲ್ಲಿಜಾರಿಗೊಳಿಸಿದ್ದ ಕಾಮಗಾರಿಗಳನ್ನೆಲ್ಲತಡೆ ಹಿಡಿದಿದ್ದು ಸರಿಯಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ