ಆ್ಯಪ್ನಗರ

ಸಿಂದಗಿ: ಇದು ಬಿಜೆಪಿ ಮಾಡಲ್‌, ಅಮಿತ್‌ ಶಾ ಫಾರ್ಮುಲಾ ಎಂದ ನಾಯಕರು

ನಮ್ಮ ಪಕ್ಷದ ಸಾಂಪ್ರದಾಯಿಕ ಮತದಾರರನ್ನಾಗಿ ಪರಿವರ್ತನೆಯತ್ತ ತರುವುದರ ಜತೆಗೆ 2023ರ ಚುನಾವಣೆಯಲ್ಲಿಈ ಫಾರ್ಮುಲಾ ಅನುಷ್ಠಾ ಮಾಡಿದ್ದೇವೆ. ಗುಜರಾತ್‌ ಚುನಾವಣೆಯಲ್ಲೂಇದೇ ಮಾಡಲ್‌ ಬಳಕೆ ಮಾಡಲಾಗಿದ್ದು, ಈಗ ಉಪಚುನಾವಣೆಗೂ ಇದನ್ನೇ ಬಳಕೆ ಮಾಡುತ್ತಿದ್ದೇವೆ

Vijaya Karnataka 16 Oct 2021, 5:56 pm
ಸಿಂದಗಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿಯನ್ನು ದೇಶದಲ್ಲಿಅನುಷ್ಠಾನಗೊಳಿಸಲು ಪಕ್ಷಕ್ಕೆ ಒಂದು ಮಾಡಲ್‌ ಫಾರ್ಮುಲಾ ಪರಿಚಯಿಸಿದ್ದಾರೆ. ಅದು ಸಿ 2 ಎ ಮಾಡಲ್‌. ಇದು ಆಯಾ ಕ್ಷೇತ್ರಗಳಲ್ಲಿನ ಗ್ರೌಂಡ್‌ ರಿಯಾಲಿಟಿ ಜತೆಗೆ ಪಕ್ಷದ ಸಾಂಪ್ರದಾಯಿಕ ಮತ್ತು ಪರಂಪರೆಯ ಮತದಾರರೊಂದಿಗೆ ಸಂಘಟನಾತ್ಮಕವಾಗಿ ಬೆಸೆಯುವ ಬಿಜೆಪಿ ಮಾಡಲ್‌ ಆಗಿದೆ ಎಂದು ಕ್ಷೇತ್ರ ಉಸ್ತುವಾರಿ ಲಕ್ಷ್ಮಣ ಸವದಿ ಹೇಳಿದರು.
Vijaya Karnataka Web ಬಿಜೆಪಿ
ಬಿಜೆಪಿ


ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಮನೆಯಲ್ಲಿಸಚಿವ ಗೋವಿಂದ ಕಾರಜೋಳ, ವಿ.ಸೋಮಣ್ಣ ಹಾಗೂ ಲಕ್ಷ್ಮಣ ಸವದಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದತ್ತ ಮುಖ ಮಾಡದ ಮತದಾರರು ಸಿ ವರ್ಗಕ್ಕೆ ಸೇರಿದರೆ, ಒಂದೊಂದು ಪಕ್ಷದಲ್ಲಿರುವ ಮತದಾರರು ಬಿ ವರ್ಗಕ್ಕೆ ಸೇರಿದ್ದಾರೆ. ಎ ವರ್ಗ ಎಂದರೆ ಬಿಜೆಪಿಯ ಮತದಾರರು. ಸಿ ವರ್ಗದವರನ್ನು ಗುರುತಿಸಿ, ಪಕ್ಷದ ತತ್ವ, ಸಿದ್ಧಾಂತ ಪರಿಚಯಿಸಿ ಅವರನ್ನು ಬಿ ವರ್ಗಕ್ಕೆ ಸೇರಿಸುವುದು. ಬಿ ವರ್ಗದಲ್ಲಿರುವವರನ್ನು ನಮ್ಮ ಪಕ್ಷದ ಸಾಂಪ್ರದಾಯಿಕ ಮತದಾರರನ್ನಾಗಿ ಪರಿವರ್ತನೆಯತ್ತ ತರುವುದರ ಜತೆಗೆ 2023ರ ಚುನಾವಣೆಯಲ್ಲಿಈ ಫಾರ್ಮುಲಾ ಅನುಷ್ಠಾನಗೊಳಿಸಲಾಗುತ್ತಿದೆ. ಗುಜರಾತ್‌ ಚುನಾವಣೆಯಲ್ಲೂಇದೇ ಮಾಡಲ್‌ ಬಳಕೆ ಮಾಡಲಾಗಿದ್ದು, ಈಗ ಉಪಚುನಾವಣೆಗೂ ಇದನ್ನೇ ಬಳಕೆ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿಡಿಕೆಶಿ ತಂಡ ಹಾಗೂ ಇನ್ನೊಂದು ಸಿದ್ಧರಾಮಯ್ಯನ ತಂಡಗಳು ಯುದ್ಧ ಮಾಡುತ್ತಿರುವ ರೀತಿಯ ಕಾಂಗ್ರೆಸ್‌ ಬಣಗಳ ರಾಜಕಾರಣದ ಬಗ್ಗೆ ಚರ್ಚೆ ಅನವಶ್ಯಕ. ಕ್ಷೇತ್ರದಲ್ಲಿಅ.20, 21ಕ್ಕೆ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಅ.21, 22ರಂದು ಕೆ.ಎಸ್‌.ಈಶ್ವರಪ್ಪ ಮತ್ತು ಅ.23 ಹಾಗೂ 24ರಂದು ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿಪ್ರಚಾರ ನಡೆಸಲಿದ್ದಾರೆ.
ಲಕ್ಷ್ಮಣ ಸವದಿ, ಕ್ಷೇತ್ರ ಉಸ್ತುವಾರಿ

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ನೆಹರೂ ಅವರಿಗಿಂತ ಮೊದಲು ದೇಶದ ಪ್ರಧಾನಿ ಆಗಬೇಕಿತ್ತು. ಅಲ್ಲದೇ ಇಂದಿರಾ ಗಾಂಧಿ ನಂತರ ಡಾ.ಬಾಬು ಜಗಜೀವನರಾಂ ಪ್ರಧಾನಿ ಆಗಬೇಕಿತ್ತು. ಆದರೆ ಕಾಂಗ್ರೆಸ್‌ ಬುದ್ಧಿ ಜೀವಿಗಳನ್ನು ಗೌರವಿಸುವ ಕೆಲಸ ಮಾಡಲಿಲ್ಲ. ಡಾ.ಅಂಬೇಡ್ಕರ್‌ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿದ್ದು ಒಂದು ಕೆಟ್ಟ ಇತಿಹಾಸ ಎಂದರು.

ಕಾಂಗ್ರೆಸ್‌ ವಾರಸುದಾರರಿಲ್ಲದ ಮನೆ. ಇಂದಲ್ಲ ನಾಳೆ ಕಾಂಗ್ರೆಸ್‌ ಮುಕ್ತ ಭಾರತದ ಕನಸು ನನಸಾಗುತ್ತದೆ. ಬಿಜೆಪಿ ಒಂದೇ ಜನಾಂಗದ ವೋಟ್‌ ಬ್ಯಾಂಕ್‌ ಹೊಂದಿಲ್ಲ, ಅದು ಎಲ್ಲಧರ್ಮ, ಮತಗಳ ಸಂಗಮದ ಸಂಸ್ಕೃತಿ ರೂಢೀಸಿಕೊಂಡು ಬಂದಿದೆ. ಕ್ಷೇತ್ರದಲ್ಲಿನ ಅಲ್ಪಸಂಖ್ಯಾತ ಮತಗಳು, ಆ ಸಮಾಜಕ್ಕೆ ನಮ್ಮ ಸರಕಾರಗಳು ನೀಡಿದ ಕೊಡುಗೆ ನಮ್ಮನ್ನು ಬೆಂಬಲಿಸುವಂತೆ ಮಾಡಿವೆ ಎಂದು ಹೇಳಿದರು.

ಸಚಿವ ವಿ. ಸೋಮಣ್ಣ ಮಾತನಾಡಿ, ನಾನು ಸಿಂದಗಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಬಂದಿರುವೆ. ವಾಸ್ತವಿಕತೆಗೆ ಆದ್ಯತೆ ಕೊಡುವೆ. ನಾನು ಸುಳ್ಳು ಹೇಳಲಾರೆ, ಕ್ಷೇತ್ರದಲ್ಲಿನ ರಸ್ತೆಗಳು ಹದಗೆಟ್ಟಿವೆ. ನಾನು ನನ್ನದೇ ಆದ ಆದ್ಯತೆಯನುಸಾರ ಕೆಲಸ ಮಾಡುವೆ. ರಾಜ್ಯದಲ್ಲಿ5 ಲಕ್ಷ ಆಶ್ರಯ ಮನೆಗಳಿಗೆ ಆದೇಶ ಮಾಡಿರುವೆ. ಕ್ಷೇತ್ರದಲ್ಲಿ6 ಸಾವಿರಕ್ಕೂ ಹೆಚ್ಚು ಮನೆಗಳ ವಸತಿ ಯೋಜನೆ ಆರಂಭಿಸಲಾಗುತ್ತಿದೆ. ಗ್ರಾಪಂವಾರು ಸದಸ್ಯರ ಸಂಖ್ಯೆಗನುಗುಣವಾಗಿ ವಸತಿ ಸೌಕರ್ಯ ಕೊಡಲಾಗುತ್ತದೆ. ಕ್ಷೇತ್ರದಲ್ಲಿ10 ವರ್ಷದ ಆಡಳಿತಕ್ಕೂ ಮಿಗಿಲಾದ ಅಭಿವೃದ್ಧಿ ಕಾಮಗಾರಿಗಳು 18 ತಿಂಗಳಲ್ಲಿನಡೆಯುತ್ತವೆ. ಅದಕ್ಕೆ ಏನೇನು ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ