ಆ್ಯಪ್ನಗರ

ದೇಶದ ಪ್ರಧಾನಿಯಾದರೂ ಅಪ್ಪಾ, ಅಣ್ಣಾ ಅನ್ನುತ್ತೇನೆ: ರಮೇಶ ಜಿಗಜಿಣಗಿ

ಈ ಹಿಂದೆ ಸಂಸದರಾಗಿದ್ದವರು ಜಿಲ್ಲೆಗೆ ನನಗಿಂತ ಹೆಚ್ಚು ಅನುದಾನ, ಯೋಜನೆ ತಂದಿದ್ದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದು ಜಿಗಜಿಣಗಿ ಸವಾಲು ಹಾಕಿದರು.

Vijaya Karnataka Web 9 Feb 2019, 3:23 pm
ವಿಜಯಪುರ: ನನ್ನನ್ನು ದೇಶದ ಪ್ರಧಾನಿ ಮಾಡಿದರೂ ಅಪ್ಪಾ, ಅಣ್ಣಾ ಅನ್ನೋದನ್ನ ಬಿಡಲ್ಲ. ಪ್ರತಿಯೊಬ್ನರಿಗೂ ಗೌರವ ಕೊಡೋದು ನನ್ನ ಸಂಸ್ಕೃತಿ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.
Vijaya Karnataka Web Ramesh Jigajinagi


ನಗರದ ವನಶ್ರೀ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು, ನಾನೊಬ್ಬ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಇಂದಿಗೂ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಎಂದರು.

ಯಾರೂ ಸಾಧಿಸಲಾರದನ್ನು ಸಾಧಿಸಬೇಕೆಂಬ ಹಠ ನನ್ನಲ್ಲಿದೆ. ನನ್ನ ನರನಾಡಿ ಪಕ್ಷದ ಕಾರ್ಯಕರ್ತರು. ನನ್ನ ರಾಜಕಾರಣದ ಸಾಧನೆಗೆ ಪಕ್ಷದ ಕಾರ್ಯಕರ್ತರೇ ಕಾರಣ ಎಂದು ರಮೇಶ ಜಿಗಜಿಣಗಿ ತಿಳಿಸಿದರು.

ನನ್ನ ಜೊತೆ ನೀವಿರುವ ತನಕ ನನ್ನ ರಾಜಕಾರಣ ಇರುತ್ತದೆ. ಮೋದಿ ಸರಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಲು ನೀವೇ ಕಾರಣ. ನೀವೇ ಸೋಲಿಸಿದ್ದರೆ ನಾನೇನು ಮಂತ್ರಿಯಾಗುತ್ತಿರಲಿಲ್ಲ. ಈ ಹಿಂದೆ ಸಂಸದರಾಗಿದ್ದವರು ಜಿಲ್ಲೆಗೆ ನನಗಿಂತ ಹೆಚ್ಚು ಅನುದಾನ, ಯೋಜನೆ ತಂದಿದ್ದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದು ಜಿಗಜಿಣಗಿ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ