ಆ್ಯಪ್ನಗರ

ಹಳ್ಳಿಯಿಂದ ದಿಲ್ಲಿಯವರೆಗೂ ಬಿಜೆಪಿ ಅಧಿಕಾರದಲ್ಲಿರಬೇಕು: ಗೋವಿಂದ ಕಾರಜೋಳ

ಕಾರ್ಯಕರ್ತರನ್ನ ನಾಯಕರನ್ನಾಗಿ ಬೆಳೆಸುವ ಚುನಾವಣೆಯೇ ಗ್ರಾಪಂ ಚುನಾವಣೆ. ಗ್ರಾಪಂ ಚುನಾವಣಾ ಸಲುವಾಗಿ ಪ್ರತಿ ಗ್ರಾಪಂಗೆ ಒಂದು ಪಂಚರತ್ನ ಕಮೀಟಿಯನ್ನು ರಚಿಸಲಾಗುವದು.

Vijaya Karnataka Web 30 Nov 2020, 9:47 pm
ತಾಳಿಕೋಟೆ: ಹಳ್ಳಿಯಿಂದ ದಿಲ್ಲಿಯವರೆಗೂ ಬಿಜೆಪಿ ಅಧಿಕಾರದಲ್ಲಿರಬೇಕು ಎನ್ನುವ ಪ್ರಧಾನಿಗಳ ಆಶಯವನ್ನು ಕಾರ್ಯಕರ್ತರು ಕಾರ್ಯತಗೊಳಿಸಬೇಕು. ಬಿಜೆಪಿಯ ಅತಿ ಹೆಚ್ಚು ಕಾರ್ಯಕರ್ತರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Vijaya Karnataka Web ಗೋವಿಂದ ಕಾರಜೋಳ
ಗೋವಿಂದ ಕಾರಜೋಳ


ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಸ್ವರಾಜ್ಯದ ಕನಸು ಕಂಡವರು ಮಹಾತ್ಮಾ ಗಾಂಧಿಜಿಯವರು. ಆದರೆ ಗಾಂಧಿಜಿಯವರ ಹೆಸರು ಹೆಳಿಕೊಂಡು ಅಧಿಕಾರಿ ನಡೆಸಿದ ಕಾಂಗ್ರೆಸ್‌ ಪಕ್ಷದಿಂದ ಗ್ರಾಮ ಸ್ವರಾಜ್ಯದ ಕನಸನ್ನು ಹಾಳು ಮಾಡಿದರು. ಆದರೆ ಪ್ರಧಾನಿ ನರೇದ್ರ ಮೋದಿಯವರು ಗಾಂಧಿಜಿಯ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಿದ್ದಾರೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಮಾತನಾಡಿ, ಕಾರ್ಯಕರ್ತರನ್ನ ನಾಯಕರನ್ನಾಗಿ ಬೆಳೆಸುವ ಚುನಾವಣೆಯೇ ಗ್ರಾಪಂ ಚುನಾವಣೆ. ಗ್ರಾಪಂ ಚುನಾವಣಾ ಸಲುವಾಗಿ ಪ್ರತಿ ಗ್ರಾಪಂಗೆ ಒಂದು ಪಂಚರತ್ನ ಕಮೀಟಿಯನ್ನು ರಚಿಸಲಾಗುವದು. ಅಭ್ಯರ್ಥಿಗಳನ್ನ ಪಂಚರತ್ನ ಕಮಿಟಿಗಳೇ ಆಯ್ಕೆ ಮಾಡಲಿವೆ. ಅಭ್ಯರ್ಥಿಗಳ ಗೆಲುವಿಗೆ ಪಂಚಸೂತ್ರಗಳನ್ನು ಸಿದ್ದಪಸಲಾಗಿದ್ದು, ಗ್ರಾಪಂ ಚುನವಾಣೆಯಲ್ಲಿಅತಿ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಲಿದೆ ಎಂದರು.

ಖಾಸಗಿ ಕಾರು ಬಳಕೆ

ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಖಾಸಗಿ ಕಾರಿನಲ್ಲಿ ತಾಳಿಕೋಟೆ ಪಟ್ಟಣದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗಿಯಾದರು. ನೀತಿ ಸಂಹಿತೆ ಜಾರಿಯಾದ ತಕ್ಷಣ ಸರಕಾರಿ ವಾಹನವನ್ನು ಬಿಟ್ಟು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಅವರ ಇನ್ನೋವಾ ಕಾರಿನಲ್ಲಿ ಆಗಮಿಸಿ ಮತ್ತೆ ಅದೇ ಕಾರಿನಲ್ಲಿ ಮರಳಿ ಹೋದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ