ಆ್ಯಪ್ನಗರ

18ರಿಂದ ಬಿಎಸ್ಸೆನ್ನೆಲ್‌ ನೌಕರರ ಮುಷ್ಕರ

ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ದೂರ ಸಂಪರ್ಕ ಸೇವಾ ಸಂಸ್ಥೆಯು ಹಿಂದಿನ ಹಾಗೂ ಇಂದಿನ ಸರಕಾರದ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹೀಗಾಗಿ ಅಂದಾಜು 2 ಲಕ್ಷ ಕಾಯಂ ನೌಕರರು, 1 ಲಕ್ಷ ಗುತ್ತಿಗೆ ನೌಕರರ ಹಾಗೂ ಪರೋಕ್ಷ ವಾಗಿ ಲಕ್ಷಾಂತರ ನೌಕರರಿಗೆ ಉದ್ಯೋಗ ನೀಡಿ ಅಂದಾಜು 5 ಲಕ್ಷ ದಷ್ಟು ಕುಟುಂಬಗಳಿಗೆ ಜೀವನಾಧಾರವಾಗಿರುವ ಸಂಸ್ಥೆ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಈ ಹೋರಾಟ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

Vijaya Karnataka 13 Feb 2019, 9:16 pm
ವಿಜಯಪುರ: 2ನೇ ವೇತನ ತಾರತಮ್ಯ ನಿವಾರಿಸಿ, 3ನೇ ವೇತನ ನೀಡಬೇಕು ಹಾಗೂ ಬಿಎಸ್ಸೆನ್ನೆಲ್‌ ಸಂಸ್ಥೆ ಉಳಿಸಬೇಕೆಂದು ಒತ್ತಾಯಿಸಿ ಅವಳಿ ಜಿಲ್ಲೆಯ ಬಿಸ್ಸೆನ್ನೆಲ್‌ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಫೆ. 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಸಂಘಟನೆ ಜಿಲ್ಲಾ ಸಂಯೋಜಕ ಎಸ್‌.ಆರ್‌. ನಾಯಕ ತಿಳಿಸಿದ್ದಾರೆ.
Vijaya Karnataka Web bsnl


ಈ ಕುರಿತು ಹೇಳಿಕೆ ನೀಡಿರುವ ಅವರು, ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಆದರೆ ನಮ್ಮ ಕಷ್ಟದಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಕೆಗಾಗಿ ಕೈಜೋಡಿಸಬೇಕು. ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ದೂರ ಸಂಪರ್ಕ ಸೇವಾ ಸಂಸ್ಥೆಯು ಹಿಂದಿನ ಹಾಗೂ ಇಂದಿನ ಸರಕಾರದ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹೀಗಾಗಿ ಅಂದಾಜು 2 ಲಕ್ಷ ಕಾಯಂ ನೌಕರರು, 1 ಲಕ್ಷ ಗುತ್ತಿಗೆ ನೌಕರರ ಹಾಗೂ ಪರೋಕ್ಷ ವಾಗಿ ಲಕ್ಷಾಂತರ ನೌಕರರಿಗೆ ಉದ್ಯೋಗ ನೀಡಿ ಅಂದಾಜು 5 ಲಕ್ಷ ದಷ್ಟು ಕುಟುಂಬಗಳಿಗೆ ಜೀವನಾಧಾರವಾಗಿರುವ ಸಂಸ್ಥೆ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಈ ಹೋರಾಟ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ಬಿಎಸ್ಸೆನ್ನೆಲ್‌ ಕಂಪನಿಗೆ ಶೀಘ್ರದಲ್ಲಿಯೇ ಕೇಂದ್ರ ಸರಕಾರ 4ಜಿ ಸೇವೆ ಕೊಡಮಾಡಬೇಕು. 2018ರ ಫೆ. 24ರಂದು ನಡೆದ ಸಭೆಯಲ್ಲಿ ಕೇಂದ್ರ ಸಂಪರ್ಕ ಸಚಿವರು 4 ಜಿ ತರಂಗಳನ್ನು ಸಂಸ್ಥೆಗೆ ಕೊಡಲು ದೂರ ಸಂಪರ್ಕ ಇಲಾಖಾ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಆದರೆ ಅದು ಇಂದಿಗೂ ಕಾರ್ಯಗತವಾಗಿಲ್ಲ. ಆ ಪ್ರಸ್ತಾವನೆ ಈಡೇರಿಸಬೇಕೆಂದು ಮುಷ್ಕರದ ಮೂಲಕ ಒತ್ತಾಯಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಸೇರಿದ ಆಸ್ತಿ, ಖಾಲಿ ಭೂಮಿ ಹಾಗೂ ನಿವೇಶನಗಳು ಸಾಕಷ್ಟಿವೆ. ಈ ಎಲ್ಲ ಆಸ್ತಿಗಳನ್ನು ಬಿಎಸ್ಸೆನ್ನೆಲ್‌ ಸುಪರ್ದಿಗೆ ಕೊಡಬೇಕೆಂದು ಮುಷ್ಕರದ ಮೂಲಕ ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ