ಆ್ಯಪ್ನಗರ

ಅಧಿಸೂಚನೆ ಪ್ರತಿ ಸುಟ್ಟು ಪ್ರತಿಭಟನೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಲ್ಲಿನ ಎಪಿಎಂಸಿ ವರ್ತರ್ಕರು, ಕಾರ್ಮಿಕರು ಸೋಮವಾರ ವಹಿವಾಟು ಸ್ಥಗಿತಗೊಳಿಸಿದಲ್ಲದೆ, ಕಾಯ್ದೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 2 Jun 2020, 5:00 am
ವಿಜಯಪುರ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಲ್ಲಿನ ಎಪಿಎಂಸಿ ವರ್ತರ್ಕರು, ಕಾರ್ಮಿಕರು ಸೋಮವಾರ ವಹಿವಾಟು ಸ್ಥಗಿತಗೊಳಿಸಿದಲ್ಲದೆ, ಕಾಯ್ದೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web APMC-BJP1031839


ಮರ್ಚೆಂಟ್ಸ್‌ ಅಸೋಸಿಯೇಶನ್‌, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವ ಸ್ಥಳೀಯ ವ್ಯಾಪಾರಸ್ಥರು, ರೈತರಿಗೆ ಮಾರಕವಾಗಿರುವ ತಿದ್ದುಪಡಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ತಿದ್ದುಪಡಿ ಕಾಯಿದೆಯಿಂದ ಬಹು ರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಖರೀದಿಸುವುದರಿಂದ ಕೃಷಿ ಮಾರುಕಟ್ಟೆಯಲ್ಲಿಸಿಗುವ ಸ್ಪರ್ಧಾತ್ಮಕ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯ ಸರಕಾರಕ್ಕೆ ಶೇ 1.5ರಷ್ಟು ಸೆಸ್‌, ಜಿಎಸ್‌ಟಿ ಹಣ ಕಡಿತಗೊಳ್ಳಲಿದೆ. ಸದ್ಯ ಎಪಿಎಂಸಿ ಕಚೇರಿಯಲ್ಲಿಇ-ಟೆಂಡರ್‌ ಮೂಲಕ ವಹಿವಾಟು ನಡೆದಿದ್ದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ ವ್ಯಾಪಾರಸ್ಥರಿಗೆ ಪೆಟ್ಟು ಬೀಳಲಿದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ರೈತರಿಂದ ನೇರವಾಗಿ ಖರೀದಿ ಮಾಡಲು ಅನುವುಮಾಡಿಕೊಟ್ಟರೆ ಪ್ರತಿ ಎಪಿಎಂಸಿಯಿಂದ 30-35 ಸಾವಿರದಷ್ಟು ಅವಲಂಬಿತರು ಸಂಕಷ್ಟಕ್ಕೀಡಾಗುತ್ತಾರೆ. ಕಾಯ್ದೆ 2017ರಲ್ಲಿತಿದ್ದುಪಡಿಗೆ ಉದ್ದೇಶಿಸಿದ್ದರಿಂದ ರೈತರು, ವ್ಯಾಪಾರಸ್ಥರು, ದುಡಿಯುವ ವರ್ಗಗಳು ಹೋರಾಟ ಮಾಡಿದ್ದರಿಂದ ವಾಪಸ್‌ ಪಡೆಯಲಾಗಿತ್ತು. ಆದರೀಗ ತಿದ್ದುಪಡಿ ತಂದು ಜಾರಿಗೊಳಿಸಲಾಗುತ್ತಿದೆ ಎಂದು ದೂರಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ರೈತರು, ವ್ಯಾಪಾರಸ್ಥರು ಹಾಗೂ ದುಡಿಯುವ ವರ್ಗಕ್ಕೆ ಕಂಟಕವಾಗುವ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದರು

ವಹಿವಾಟು ಬಂದ್‌ :
ವಿಜಯಪುರ ಎಪಿಎಂಸಿಯಲ್ಲಿ200 ಅಂಗಡಿಗಳಿದ್ದು, ಎಣ್ಣೆಕಾಳು, ಹತ್ತಿ ವ್ಯಾಪಾರಸ್ಥರು, ದಲ್ಲಾಳಿಗಳು, ಗುಮಾಸ್ತರು, ಹಮಾಲರು, ಕೂಲಿಕಾರ್ಮಿಕರು ವಹಿವಾಟು, ಕೆಲಸ ಸ್ಥಗಿತಗೊಳಿಸಿದ್ದರಿಂದ ಮಧ್ಯಾಹ್ನದ ತನಕ ವಹಿವಾಟು ನಡೆಯಲಿಲ್ಲ.

ಮುಖಂಡರಾದ ಅರವಿಂದ ಕುಲಕರ್ಣಿ, ಅಣ್ಣಾರಾಯ ಈಳಗೇರ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಭೀಮರಾಯ ಪೂಜಾರಿ, ಬಸನಗೌಡ ಧರ್ಮಗೊಂಡ , ಬಾಳು ಜೇವೂರ, ಚಂದ್ರಾಮ ತೆಗ್ಗಿ , ಶೇಖಪ್ಪ ಕರಾಬಿ, ರಾಮಣ್ಣ ಮಲ್ಲಪ್ಪ ಶಿರಗೋಳ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ