ಆ್ಯಪ್ನಗರ

ಕುತಂತ್ರದಿಂದ ಬಿಎಸ್‌ವೈ ಜೈಲಿಗೆ ಕಳುಹಿಸಿದವರೇ ಜೈಲಿಗೆ ಹೋಗುವ ಸಮಯ: ಯತ್ನಾಳ್

ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿ ಎಂದು ಭಾಸವಾಗುತ್ತಿಲ್ಲ. ಅವರು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಭಾಗಕ್ಕೆ ಮಾತ್ರ ಸಿಎಂ ಅನಿಸುತ್ತಿದೆ ಎಂದು ಯತ್ನಾಳ್ ಟೀಕಿಸಿದರು

Vijaya Karnataka Web 7 Dec 2018, 2:18 pm
ವಿಜಯಪುರ: ಈ ಹಿಂದೆ ಕುತಂತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದವರೇ ಜೈಲಿಗೆ ಹೋಗುವ ದಿನಗಳು ಬಂದಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
Vijaya Karnataka Web yatnal


ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾನೆ ವೇಳೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾದರೂ ಸಮ್ಮಿಶ್ರ ಸರಕಾರ ಬೀಳುತ್ತದೆ ಎಂದು ಭವಿಷ್ಯ ನುಡಿದರು.

ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿ ಎಂದು ಭಾಸವಾಗುತ್ತಿಲ್ಲ. ಅವರು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಭಾಗಕ್ಕೆ ಮಾತ್ರ ಸಿಎಂ ಅನಿಸುತ್ತಿದೆ ಎಂದು ಟೀಕಿಸಿದರು. ಯಾರೋ ಕೊರೆದ ಕೊಳವೆ ಬಾವಿ ಉದ್ಘಾಟನೆಯಲ್ಲಿ ಸಿಎಂ ನಿರತರಾಗಿದ್ದಾರೆ ಎಂದು ಛೇಡಿಸಿದರು.

ಕ್ಯಾಬಿನೆಟ್ ಅನುಮೋದನೆ ಇಲ್ಲದೆಯೇ ಹಾಸನಕ್ಕೆ ನೂರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿರುವ ಯತ್ನಾಳ್, ಬಿಜೆಪಿ ಶಾಸಕರ ಕಡತಗಳನ್ನು ಉದ್ದೇಶ ಪೂರ್ವಕವಾಗಿ ತಳ್ಳುತ್ತಿದ್ದಾರೆಂದು ದೂರಿದರು.

ಸರಕಾರದ ಅಸ್ಥಿರತೆ ನೋಡಿ ರಾಜ್ಯದ ಜನತೆ ದಂಗೆ ಏಳುವ ದಿನಗಳು ದೂರವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ