ಆ್ಯಪ್ನಗರ

ವಿಜಯಪುರ: ಬೆಂಕಿ ಅವಘಡದಲ್ಲಿ ಕಾರು ಭಸ್ಮ, ಕಾರಿನಲ್ಲಿದ್ದವರು ಸಿನಿಮೀಯ ರೀತಿಯಲ್ಲಿ ಪಾರು

ಬೆಂಕಿಯ ಜ್ವಾಲೆ ಇಡೀ ಕಾರಿಗೆ ಆವರಿಸಿದ್ದರಿಂದ ಕಾರು ಭಸ್ಮವಾಗಿದೆ. ಆದರೆ ಕಾರಿನಲ್ಲಿದ್ದ 85 ಸಾವಿರ ರೂ. ನಗದು ಹಾಗೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Vijaya Karnataka Web 18 Feb 2021, 8:46 pm
ವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದರಿಂದ, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web ಕಾರು ಭಸ್ಮ
ಕಾರು ಭಸ್ಮ


ಎಲ್ಲರೂ ಪಾರಾಗುವಷ್ಟರಲ್ಲೇ ಕಾರು ಭಸ್ಮಗೊಂಡ ಘಟನೆ ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರ ತಿಡಗುಂದಿ ಬಳಿ ನಡೆದಿದೆ.

ಆಲಮೇಲ ಪಪಂ ಸದಸ್ಯ ಸುಂಬಡ ಎಂಬುವರಿಗೆ ಸೇರಿದ ಮಹಿಂದ್ರಾ ಕಂಪನಿಯ ಎಕ್ಸ್‌ಯುವಿ 500 ಕಾರು ಬೆಂಕಿಗಾಹುತಿಯಾಗಿದೆ. ಕೆಲಸದ ನಿಮಿತ್ತ ಇವರು ವಿಜಯಪುರದಿಂದ ಸೊಲ್ಲಾಪುರಕ್ಕೆ ಹೊರಟಿದ್ದರು. ಆದರೆ ತಿಡಗುಂದಿ ಬಳಿ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಕಾರಿನಲ್ಲಿದ್ದವರೆಲ್ಲ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಕಾರಿನಿಂದಿಳಿದಿದ್ದಾರೆ.

ತಕ್ಷಣಕ್ಕೆ ಬೆಂಕಿಯ ಜ್ವಾಲೆ ಇಡೀ ಕಾರಿಗೆ ಆವರಿಸಿದ್ದರಿಂದ ಇಡೀ ಕಾರು ಭಸ್ಮವಾಗಿದೆ. ಆದರೆ ಕಾರಿನಲ್ಲಿದ್ದ 85 ಸಾವಿರ ರೂ. ನಗದು ಹಾಗೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ