ಆ್ಯಪ್ನಗರ

ಚೆಕ್‌ಪೋಸ್ಟ್‌ ತಪಾಸಣೆ ಮುಕ್ತ

ಜಿಲ್ಲೆಪ್ರವೇಶಿಸುವ ತಾಲೂಕಿನ ಯಲಗೂರು ಹತ್ತಿರದ ಕೃಷ್ಣಾ ಸೇತುವೆ ಬಳಿ ಆರಂಭಿಸಿದ್ದ ಚೆಕ್‌ ಪೋಸ್ಟ್‌ ಮೂಲಕ ತಪಾಸಣೆಯಿಲ್ಲದೇ ವಾಹನ ಸವಾರರು ಸಂಚರಿಸುತ್ತಿದ್ದಾರೆ.

Vijaya Karnataka Web 23 May 2020, 5:00 am
ನಿಡಗುಂದಿ: ಜಿಲ್ಲೆಪ್ರವೇಶಿಸುವ ತಾಲೂಕಿನ ಯಲಗೂರು ಹತ್ತಿರದ ಕೃಷ್ಣಾ ಸೇತುವೆ ಬಳಿ ಆರಂಭಿಸಿದ್ದ ಚೆಕ್‌ ಪೋಸ್ಟ್‌ ಮೂಲಕ ತಪಾಸಣೆಯಿಲ್ಲದೇ ವಾಹನ ಸವಾರರು ಸಂಚರಿಸುತ್ತಿದ್ದಾರೆ.
Vijaya Karnataka Web 22NDG4_38


ಲಾಕ್‌ಡೌನ್‌ ಸಡಿಲಿಕೆಗೂ ಮುನ್ನ ನಿತ್ಯ 24 ಗಂಟೆಯೂ ಚೆಕ್‌ಪೋಸ್ಟ್‌ ಕಾರ್ಯನಿರ್ವಹಣೆ ಇತ್ತು. ನಿತ್ಯ ಈ ಭಾಗದ ಜನ ಅತ್ತಿಂದಿತ್ತ ಕಾರ್ಯ ನಿಮಿತ್ತ ಸಂಚರಿಸಲು ಪರದಾಡಬೇಕಿತ್ತು. ಅದಕ್ಕಾಗಿ ಹಲವಾರು ಕಳ್ಳ ಹಾದಿಯ ಮೂಲಕವೂ ಜಿಲ್ಲೆಯ ಪ್ರವೇಶ ನಡೆದಿತ್ತು. ತಾಲೂಕಾಡಳಿತ ಕಠಿಣ ಕ್ರಮ ಕೈಗೊಂಡು ಅವುಗಳನ್ನೆಲ್ಲಾಬಂದ್‌ ಮಾಡಿಸಿತ್ತು. ಈಗ ರಾಜ್ಯದೊಳಗೆ ಅಂತರ್‌ ಜಿಲ್ಲಾಸಂಚಾರಕ್ಕೆ ನಿರ್ಭಂಧವಿಲ್ಲದೇ ಅನುಮತಿ ನೀಡಿದ ಕಾರಣ ಚೆಕ್‌ ಪೋಸ್ಟ್‌ ಕಾರ್ಯನಿರ್ವಹಣೆ ಬಹುತೇಕ ಸ್ಥಗಿತಗೊಂಡಿದೆ.

ಲಾಕ್‌ಡೌನ್‌ ಅವಧಿಯಲ್ಲಿಕಲ್ಲು, ಮಣ್ಣು ಹಾಕಿ ಬಂದ್‌ ಮಾಡಿದ್ದ ಮೊದಲಿನ ರಾಷ್ಟ್ರೀಯ ಹೆದ್ದಾರಿ-13ರ ಮೇಲಿನ ಹಳೆ ಕೃಷ್ಣಾ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ