ಆ್ಯಪ್ನಗರ

ಶಾಸಕರು ಒತ್ತಡ ಹೇರುವುದು, ಮಂತ್ರಿ ಸ್ಥಾನ ಕೇಳೋದು ಸ್ವಾಭಾವಿಕ: ಎಸ್‌ಟಿ ಸೋಮಶೇಖರ್

ಸಂಪುಟ ಪುನರಾಚನೆ ಅಥವಾ ವಿಸ್ತರಣೆ ನಿರ್ಧಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾರನ್ನು ಇಟ್ಟಕೊಳ್ಳೋದು, ತಗೆಯೋದೆಂಬುದನ್ನು ಸಿಎಂ ನಿರ್ಧಾರ ಮಾಡ್ತಾರ. ಅದು ಅವರ ಪರಮಾಧಿಕಾರ ಎಂದರು.

Vijaya Karnataka Web 21 Nov 2020, 12:37 am
ವಿಜಯಪುರ: ಬಿಜೆಪಿಯಲ್ಲಿ ಆಂತರಿಕ ಜಗಳ ಇಲ್ಲ, ಹಿರಿಯ ಶಾಸಕರು ಮಂತ್ರಿಗಿರಿ ಕೇಳೋದು ಸ್ವಾಭಾವಿಕ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಸಮರ್ಥಿಸಿಕೊಂಡರು.
Vijaya Karnataka Web ಎಸ್‌ಟಿ ಸೋಮಶೇಖರ್
ಎಸ್‌ಟಿ ಸೋಮಶೇಖರ್


ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಯಾರದು ಹೆಸರು ಹೇಳಿಲ್ಲ. ನಾಲ್ಕೈದು ಬಾರಿ ಆಯ್ಕೆಯಾದ ಶಾಸಕರಿದ್ದು, ಅವರಿಗೆ ಅವಕಾಶ ಕೊಡಿ ಅಂದಿದ್ದಾರೆ. ಪಕ್ಷದ ಚೌಕಟ್‌ನಲ್ಲಿ ಕೇಳಿದ್ದಾರೆ. ಅದರಲ್ಲೇನು ತಪ್ಪಿಲ್ಲ ಎಂದರು.

ಸಂಪುಟ ಪುನರಾಚನೆ ಅಥವಾ ವಿಸ್ತರಣೆ ನಿರ್ಧಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾರನ್ನು ಇಟ್ಟಕೊಳ್ಳೋದು, ತಗೆಯೋದೆಂಬುದನ್ನು ಸಿಎಂ ನಿರ್ಧಾರ ಮಾಡ್ತಾರ. ಅದು ಅವರ ಪರಮಾಧಿಕಾರ ಎಂದರು.

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಹೇಳಿಕೆಗೆ ಕಿಮ್ಮತ್ತು ಕೊಡಬೇಕಾಗಿಲ್ಲ. ಅದಕ್ಕೆ ಗೌರವನೂ ಇಲ್ಲ ಎಂದು ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ