ಆ್ಯಪ್ನಗರ

ಬಿಜೆಪಿ ಅವಧಿಯಲ್ಲೇ ದಲಿತರು ಸಿಎಂ

ವಿಜಯಪುರ: ಬಿಜೆಪಿ ಅಧಿಕಾರವಧಿಯಲ್ಲೇ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ ನಾನಿರುವಾಗಲೋ ಇಲ್ಲವೇ ಸತ್ತ ಬಳಿಕ ಆಗುತ್ತಾರೆ ಗೊತ್ತಿಲ್ಲ. ದಲಿತರು ಈ ರಾಜ್ಯದ ಸಿಎಂ ಆಗಬೇಕು ಎಂಬುದು ನನ್ನ ಗಟ್ಟಿ ಧ್ವನಿಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

Vijaya Karnataka 31 Jan 2020, 5:00 am
ವಿಜಯಪುರ: ಬಿಜೆಪಿ ಅಧಿಕಾರವಧಿಯಲ್ಲೇ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ ನಾನಿರುವಾಗಲೋ ಇಲ್ಲವೇ ಸತ್ತ ಬಳಿಕ ಆಗುತ್ತಾರೆ ಗೊತ್ತಿಲ್ಲ. ದಲಿತರು ಈ ರಾಜ್ಯದ ಸಿಎಂ ಆಗಬೇಕು ಎಂಬುದು ನನ್ನ ಗಟ್ಟಿ ಧ್ವನಿಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
Vijaya Karnataka Web news/vijayapura/cm
ಬಿಜೆಪಿ ಅವಧಿಯಲ್ಲೇ ದಲಿತರು ಸಿಎಂ


ನಗರದಲ್ಲಿಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣಕ್ಕೆ ನನ್ನ ಅವಶ್ಯಕತೆ ಇದೆ ಎಂದಾಗ ಮರಳುತ್ತೇನೆ. 45 ವರ್ಷ ರಾಜಕೀಯದಲ್ಲಿಜಾತಿಯಿಂದ ನಾಯಕನಾಗಿಲ್ಲ. ನೀತಿಯಿಂದ ನಾಯಕನಾಗಿದ್ದೇನೆ. ಜಾತಿಯಿಂದ ದೊಡ್ಡವನಾಗುವುದಿಲ್ಲ. ನನಗೆ ಸಿಎಂ ಆಗಲು ಜಾತಿ ಅಡ್ಡಿಯಾಗಿಲ್ಲ. ಯಾವಾಗ ಆಗುತ್ತೇನೆ ಎಂಬುದು ಗೊತ್ತಿಲ್ಲ. ನಾನಾಗದಿದ್ದರೂ ನಮ್ಮ ಪೀಳಿಗೆಯವರು ಒಂದು ದಿನ ಕರ್ನಾಟಕದ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

ಕಾಂಗ್ರೆಸ್‌ನವರು ಅಲ್ಪಸಂಖ್ಯಾತರಲ್ಲಿವೃಥಾ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. 6 ವರ್ಷಗಳಲ್ಲಿಕಾಂಗ್ರೆಸ್ಸಿಗೆ ಯಾವುದೇ ವಿಷಯ ಸಿಕ್ಕಿರಲಿಲ್ಲ. ಈಗ ಸಿಎಎ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅದೇ ಮುಸ್ಲಿಂ ಸ್ನೇಹಿತರು ಸಿಎಎ ಬಗ್ಗೆ ಪ್ರಶಂಸಿಸುತ್ತಿದ್ದಾರೆ. ಮತ ರಾಜಕೀಯಕ್ಕಾಗಿ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದರು.

ಅಲ್ಪಸಂಖ್ಯಾತರ ರಕ್ಷಣೆಗೆ ಬಿಜೆಪಿಯಿದೆ. ಹಿಂದೆ ದಲಿತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದರು. ಆದರೆ ದಲಿತರು ಕಾಂಗ್ರೆಸ್ಸಿನ ಸುಳ್ಳು ಮಾತಿಗೆ ಬಲಿಯಾಗಲಿಲ್ಲಎಂದು ತಿಳಿಸಿದರು.

ಹಿರಿಯ ನಾಯಕರು ಸಚಿವ ಸ್ಥಾನ ತ್ಯಾಗ ವಿಚಾರ ಕುರಿತು ನಿರ್ಣಯ ಕೈಗೊಳ್ಳಲು ಶಾಸಕ ಬಸನಗೌಡ ಪಾಟೀಲ ಯತ್ನಾಳ, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಮಾಧುಸ್ವಾಮಿ ಪಕ್ಷದ ಹಿರಿಯ ನಾಯಕರಲ್ಲ. ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಪ್ರಸಂಗ ಬಂದರೆ ಎಲ್ಲರೂ ತ್ಯಾಗ ಮಾಡಬೇಕಾಗುತ್ತದೆ ಎಂದು ತ್ಯಾಗದ ಕುರಿತು ಮಾತನಾಡಿದವರಿಗೆ ತಿರುಗೇಟು ನೀಡಿದರು.

------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ