ಆ್ಯಪ್ನಗರ

ನೀತಿ ಸಂಹಿತೆ; ಕಾರ್ಯವೈಖರಿಗೆ ಅಡ್ಡಿ

ಸ್ಥಳೀಯ ಸಂಸ್ಥೆಗಳ ಹಾಗೂ ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಅಧಿಕಾರ ವರ್ಗಾವಣೆಗೆ ಅಡಕತ್ತರಿಯಾಗಿ ಪರಿಣಮಿಸಿದೆ. ಇದರಿಂದ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ತೊಡಕಾಗಿದೆ.

Vijaya Karnataka 14 Aug 2018, 5:00 am
ವಿಕ ವಿಶೇಷ ವಿಜಯಪುರ
Vijaya Karnataka Web code of conduct
ನೀತಿ ಸಂಹಿತೆ; ಕಾರ್ಯವೈಖರಿಗೆ ಅಡ್ಡಿ


ಸ್ಥಳೀಯ ಸಂಸ್ಥೆಗಳ ಹಾಗೂ ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಅಧಿಕಾರ ವರ್ಗಾವಣೆಗೆ ಅಡಕತ್ತರಿಯಾಗಿ ಪರಿಣಮಿಸಿದೆ. ಇದರಿಂದ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ತೊಡಕಾಗಿದೆ.

ನೀತಿ ಸಂಹಿತೆಯಿಂದಾಗಿ ಜಿಲ್ಲೆಗೆ ಬೇರೆಡೆಯಿಂದ ವರ್ಗಾವಣೆಗೊಂಡ ಅಧಿಕಾರಿಗಳು ನಿಯೋಜಿತ ಸ್ಥಳಕ್ಕೆ ಬರಲಾಗುತ್ತಿಲ್ಲ. ಅಷ್ಟೇ ಅಲ್ಲ ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆಗೊಂಡವರು ಕೂಡ ಜಾಗ ಬಿಟ್ಟು ಕದಲುವಂತಿಲ್ಲ. ಹೀಗಾಗಿ ಆಡಳಿತ ಯಂತ್ರಕ್ಕೆ ತೊಂದರೆಯಾಗಿದೆ.

ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಸುಂದರೇಶ ಬಾಬು ಹೆಸ್ಕಾಂ ಎಂಡಿಯಾಗಿ ವರ್ಗಾವಣೆಗೊಂಡು ತಕ್ಷಣವೇ ಬಿಡುಗೊಂಡೆಗೊಂಡು ನಿಯೋಜಿತ ಹುದ್ದೆ ಅಲಂಕರಿಸಿದ್ದಾರೆ. ಅವರ ಜಾಗಕ್ಕೆ ವರ್ಗಾವಣೆಯಾಗಿದ್ದ ಮಹಾಂತೇಶ ಬೀಳಗಿ ಬಂದು ಅಧಿಕಾರ ಸ್ವೀಕರಿಸುವ ಮುನ್ನವೇ ಬಾಗಲಕೋಟ ಜಿಪಂ ಸಿಇಒ ಆಗಿದ್ದ ವಿಕಾಸ ಸುರಳ್ಕರ್‌ ವಿಜಯಪುರ ಜಿಪಂ ಸಿಇಒ ಆಗಿ ನಿಯೋಜನೆಗೊಂಡಿದ್ದಾರೆ. ಆದರೆ ಅವರು ಕೂಡ ಇದುವರೆಗೂ ಬಂದು ಅಧಿಕಾರ ಸ್ವೀಕರಿಸಿಲ್ಲ. ಹೀಗಾಗಿ ಜಿಪಂಗೆ ಸದ್ಯಕ್ಕೆ ಸಿಇಒ ಇಲ್ಲದಂತಾಗಿದೆ. ವಿಕಾಸ ಸುರಳ್ಕರ್‌ ನಿಯೋಜಿತ ಹುದ್ದೆಗೆ ಬರಬೇಕೆಂದರೆ ನೀತಿ ಸಂಹಿತೆ ಅಡ್ಡಿಯಾಗಿದೆ.

ಆಡಳಿತ ಯಂತ್ರಕ್ಕೆ ತೊಂದರೆಯಾಗಿದ್ದರಿಂದ ಜಿಪಂ ಸಿಇಒ ಅಧಿಕಾರ ವಹಿಸಿಕೊಳ್ಳಲು ಚುನಾವಣೆ ಆಯೋಗದಿಂದ ಅನುಮತಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ತಿಳಿಸಿದ್ದಾರೆ.

ಪಾಲಿಕೆ ಆಯುಕ್ತರದ್ದೂ ಇದೇ ಕತೆ

ವಿಜಯಪುರ ಪಾಲಿಕೆ ಆಯುಕ್ತರಾಗಿದ್ದ ಹರ್ಷಶೆಟ್ಟಿ ಅವರು ಕಲುಬುರಗಿ ಪಾಲಿಕೆಯ ಕೌನ್ಸಿಲ್‌ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿದ್ದಾರೆ. ಅವರ ಜಾಗಕ್ಕೆ ಡಾ.ಔದ್ರಾಮ ವರ್ಗಾವಣೆಗೊಂಡಿದ್ದಾರೆ. ಆದರೆ ಇದುವರೆಗೂ ಇವರಿಬ್ಬರೂ ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿಲ್ಲ.

ನೀತಿ ಸಂಹಿತೆ ಇಬ್ಬರೂ ಅಧಿಕಾರಿಗಳ ಕೆಲಸಕ್ಕೆ ತೊಡಕಾಗಿದೆ. ಸದ್ಯಕ್ಕೆ ಇಬ್ಬರೂ ವರ್ಗಾವಣೆ ಜಾಗದ ಬದಲು ಈಗಿದ್ದ ಸ್ಥಳದಲ್ಲೇ ಕಾರ್ಯನಿರ್ವಹಿಸುವಂತಾಗಿದೆ. ಇವರಷ್ಟೇ ಇಲ್ಲ ಇನ್ನೂ ನಾನಾ ಇಲಾಖೆಯಲ್ಲಿ ಇಂತಹ ಸಮಸ್ಯೆಗಳು ಎದುರಾಗಿದ್ದು, ಹೀಗಾಗಿ ಅಧಿಕಾರಿಗಳ ಕಾರ್ಯ ನಿರ್ವಹಣೆ ತೊಡಕಾಗಿ ಪರಿಣಮಿಸಿದೆ.

------

ಜಿಪಂ ಸಿಇಒ, ಪಾಲಿಕೆ ಆಯುಕ್ತರು ಸೇರಿದಂತೆ ಕೆಲ ಹುದ್ದೆಗಳಿಗೆ ವರ್ಗಾವಣೆಗೊಂಡ ಅಧಿಕಾರಿಗಳು ನೀತಿ ಸಂಹಿತೆಯಿಂದಾಗಿ ಅಧಿಕಾರ ಸ್ವೀಕರಿಸಲಾಗುತ್ತಿಲ್ಲ. ಆಡಳಿತಕ್ಕೆ ತೊಂದರೆಯಾಗಬಾರದೆಂದು ಅಧಿಕಾರಿಗಳ ನಿಯೋಜನೆಗೆ ಚುನಾವಣೆ ಆಯೋಗದಿಂದ ಅನುಮತಿ ಪಡೆದುಕೊಳ್ಳಲಾಗುವುದು.

ಎಸ್‌.ಬಿ.ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ