ಆ್ಯಪ್ನಗರ

ಮೊಸರು ಗಡಿಗೆ ಒಡೆಯಲು ಪೈಪೋಟಿ

ತಾಳಿಕೋಟೆ : ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಆಷಾಢ ಶುದ್ಧ ಏಕಾದಶಿ ನಿಮಿತ್ತ ನಡೆದ ಗೋಪಾಳ ಕಾವಲಿ ಉತ್ಸವ ಭಕ್ತರ ಕಣ್ಮನ ಸೆಳೆಯಿತು. ಯುವಕರ ಗುಂಪುಗಳು ಜೀವದ ಹಂಗು ತೊರೆದು ಮಾನವ ಗೋಪುರ ನಿರ್ಮಿಸಿ ಎತ್ತರದಲ್ಲಿ ಕಟ್ಟಿದ ಮೊಸರು ಗಡಿಗೆ ಮುಟ್ಟಲು ಪೈಪೋಟಿ ನಡೆಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

Vijaya Karnataka 14 Jul 2019, 5:00 am
ತಾಳಿಕೋಟೆ : ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಆಷಾಢ ಶುದ್ಧ ಏಕಾದಶಿ ನಿಮಿತ್ತ ನಡೆದ ಗೋಪಾಳ ಕಾವಲಿ ಉತ್ಸವ ಭಕ್ತರ ಕಣ್ಮನ ಸೆಳೆಯಿತು. ಯುವಕರ ಗುಂಪುಗಳು ಜೀವದ ಹಂಗು ತೊರೆದು ಮಾನವ ಗೋಪುರ ನಿರ್ಮಿಸಿ ಎತ್ತರದಲ್ಲಿ ಕಟ್ಟಿದ ಮೊಸರು ಗಡಿಗೆ ಮುಟ್ಟಲು ಪೈಪೋಟಿ ನಡೆಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
Vijaya Karnataka Web compete to break down the yogurt border
ಮೊಸರು ಗಡಿಗೆ ಒಡೆಯಲು ಪೈಪೋಟಿ


ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬ ಷಡಕ್ಷ ರ ಮಂತ್ರ, ಖಾಸ್ಗತ ಖಾಸ್ಗತ ಎಂಬ ಘೋಷಣೆ ಮಧ್ಯೆ ಶನಿವಾರ ಬೆಳಗಿನ ಜಾವ 6 ಗಂಟೆಗೆ ಸಿದ್ಧಲಿಂಗ ದೇವರ ನೇತೃತ್ವದಲ್ಲಿ ಸಂಗಯ್ಯ ವಿರಕ್ತಮಠ ಶಾಸ್ತ್ರೋಕ್ತವಾಗಿ ಗಡಿಗೆ ಒಡೆಯುವ ಮೂಲಕ ಆಚರಣೆಗೆ ಕಳೆ ತಂದರು.

ಶುಕ್ರವಾರದ ರಾತ್ರಿಯಿಂದಲೇ ಸಾವಿರಾರು ಭಕ್ತರು ಮೊಸರ ಗಡಿಗೆ ವೀಕ್ಷಿಸಲು ಖಾಸ್ಗತ ಮಠಕ್ಕೆ ಆಗಮಿಸಿದ್ದರು.

ಆಚರಣೆ ಹೇಗೆ ?

ಹೊಸದೊಂದು ಗಡಿಗೆಯನ್ನು ವಿಭೂತಿ ಕುಂಕಮಗಳಿಂದ ಶುದ್ಧೀಕರಿಸಿ ಅದರಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣಿನ ರಸ, ಅವಲಕ್ಕಿ ಹಾಕಿ ಎತ್ತರಕ್ಕೆ ಕಟ್ಟಲಾಗುತ್ತದೆ. ಒಂದು ವಾರದಿಂದ ಭಜನೆ ನಡೆಸಿದ್ದ ಜಂಗಮ ಮೂರ್ತಿಗಳು ಆಷಾಢ ಶುದ್ಧ ಏಕಾದಶಿ ರಾತ್ರಿ ಊರು ಪ್ರದಕ್ಷಿಣೆ ಆರಂಭಿಸುತ್ತಾರೆ. ಬೆಳಗಿನ ಜಾವ 6ಕ್ಕೆ ಮಠ ತಲುಪಿ, ಏಣಿ ಏರಿ ಮೊಸರು ಗಡಿಗೆಯನ್ನು ಒಂದೆರಡು ಬಾರಿ ತೂಗಾಡಿಸಿ ಬೆತ್ತದಿಂದ ಒಡೆಯಲಾಗುತ್ತದೆ. ನೆರೆದ ಭಕ್ತರ ಮೇಲೆ ಮೊಸರು ಚೆಲ್ಲುತ್ತದೆ. ಮೈಮೇಲೆ ಮೊಸರು ಚೆಲ್ಲಿದರೆ ವರ್ಷವಿಡೀ ಸುಖ ಶಾಂತಿ ದೊರೆಯುತ್ತದೆ. ಅಷ್ಟೇ ಅಲ್ಲ ಚರ್ಮ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರದು. ಭಕ್ತರು ಹರಸಾಹಸ ಮಾಡಿಒಡೆದ ಗಡಿಗೆ ಚೂರು ತೆಗೆದುಕೊಂಡು ಹೋಗಿ ದೇವರ ಜಗಲಿ ಮೇಲೆ ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ರಾತ್ರಿ 11ಕ್ಕೆ ಹೆಣ್ಣು, ಗಂಡು, ಚಿಕ್ಕ ಮಕ್ಕಳು, ವಿಕಲಚೇತನರು ತಣ್ಣೀರು ಸ್ನಾನ ಮಾಡಿ ಅಂದಾಜು 1ಕಿಮೀ ದೂರದಿಂದ ಮಠದವರೆಗೂ ದೀಡ ನಮಸ್ಕಾರ ಹಾಕಿ ಗೋಪಾಳ ಕಾವಲಿಯಲ್ಲಿ ಭಾಗವಹಿಸುತ್ತಾರೆ.

ಮಠದಲ್ಲಿ ನಡೆಯುವ ಗೋಪಾಳ ಕಾವಲಿ ಭಾವೈಕ್ಯದ ಪ್ರತೀಕ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಜಾತಿ ಭೇದವಿಲ್ಲದೆ ಪಾಲ್ಗೋಳ್ಳುತ್ತಾರೆ.

-ಖಾಸ್ಗತ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ