ಆ್ಯಪ್ನಗರ

ಸಮ್ಮೇಳನ ‘ಲಾಂಛನ’ ಬಿಡುಗಡೆ

ಬಸವನಬಾಗೇವಾಡಿ : ತಾಲೂಕಿನ ಯರನಾಳದಲ್ಲಿ ಫೆ.18ರಂದು ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಯರನಾಳ ವಿರಕ್ತಮಠದ ಸಂಗನಬಸವ ಶ್ರೀ, ತಹಸೀಲ್ದಾರ್‌ ಎಂ.ಎನ್‌.ಚೋರಗಸ್ತಿ ಶನಿವಾರ ಬಿಡುಗಡೆಗೊಳಿಸಿದರು.

Vijaya Karnataka 11 Feb 2019, 5:00 am
ಬಸವನಬಾಗೇವಾಡಿ : ತಾಲೂಕಿನ ಯರನಾಳದಲ್ಲಿ ಫೆ.18ರಂದು ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಯರನಾಳ ವಿರಕ್ತಮಠದ ಸಂಗನಬಸವ ಶ್ರೀ, ತಹಸೀಲ್ದಾರ್‌ ಎಂ.ಎನ್‌.ಚೋರಗಸ್ತಿ ಶನಿವಾರ ಬಿಡುಗಡೆಗೊಳಿಸಿದರು.
Vijaya Karnataka Web conference logo released
ಸಮ್ಮೇಳನ ‘ಲಾಂಛನ’ ಬಿಡುಗಡೆ


ಯರನಾಳ ವಿರಕ್ತಮಠದ ಪ್ರಮುಖ ಗದ್ದುಗೆ, ವಿಶ್ವಗುರು ಬಸವಣ್ಣನ, ಲಿಂ.ದಯಾನಂದ ಶ್ರೀಗಳ ಭಾವಚಿತ್ರ ಹೊಂದಿದ ಲಾಂಛನ ಇದಾಗಿದೆ.

ತಹಸೀಲ್ದಾರ್‌ ಚೋರಗಸ್ತಿ ಮಾತನಾಡಿ, ಯರನಾಳದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಶ್ರಮಿಸೋಣ ಎಂದರು.

ಸಾನ್ನಿಧ್ಯವಹಿಸಿದ್ದ ವಿರಕ್ತಮಠದ ಸಂಗನಬಸವ ಶ್ರೀ ಮಾತನಾಡಿ, ಸಮ್ಮೇಳನಕ್ಕೆ ನಮ್ಮ ಜನ ಸಂಪೂರ್ಣ ಸಹಕಾರ ಕೊಡುತ್ತಾರೆ ಎಂದರು. ಕಸಾಪ ಅಧ್ಯಕ್ಷ ಆರ್‌.ಜಿ.ಅಳ್ಳಗಿ, ಶಿವಾನಂದ ಬೀಳಗಿ, ಪಿಡಿಒ ರವಿ ಗುಂಡಳ್ಳಿ, ನಿವೃತ್ತ ಶಿಕ್ಷ ಕ ಎಸ್‌.ಎ.ದೆಗಿನಾಳ, ಎಸ್‌.ಜಿ.ಪಾಟೀಲ, ಶಾಂತು ವಿವೇಕಿ, ಸಿದ್ದು ಸಜ್ಜನ, ಎಸ್‌.ಐ.ಮನಗೂಳಿ ಮತ್ತಿತರರಿದ್ದರು. ಎಸ್‌.ಬಿ.ಮುತ್ತಗಿ ನಿರೂಪಿಸಿದರು. ದೆಗಿನಾಳ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ