ಭೀಮಾ ತೀರದ ದುಷ್ಕರ್ಮಿಗಳಿಂದ ಗುತ್ತಿಗೆದಾರನ ಕಿಡ್ನಾಪ್: 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 6 ಆರೋಪಿಗಳು ಅಂದರ್
ಮಲ್ಲಿಕಾರ್ಜುನ ಅವರ ಕಾರು ನಿಲ್ಲಿಸಿ, ಹಣೆಗೆ ಕಂಟ್ರಿ ಪಿಸ್ತೂಲ್ ಹಚ್ಚಿ, 5 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿ, ಬಳಿಕ ಕಾರಿನಲ್ಲಿ ಅಪಹರಿಸಿದ್ದರು.
Vijaya Karnataka 7 May 2021, 8:22 pm
ಹೈಲೈಟ್ಸ್:
- 6 ಮಂದಿ ಅಂತರ್ ಜಿಲ್ಲಾ ಆರೋಪಿಗಳ ಬಂಧನ
- 1 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು ವಶ
- 5 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಖದೀಮರು
ವಿಜಯಪುರ: ಮರಳು ಗುತ್ತಿಗೆದಾರ ಹಾಗೂ ಆತನ ಕಾರು ಚಾಲಕನನ್ನು ಅಪಹರಿಸಿ 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ 6 ಜನ ಅಂತರ್ ಜಿಲ್ಲಾಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 1 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ. ಭೀಮಾ ತೀರ ವ್ಯಾಪ್ತಿಯ ರಮೇಶ ಈರಪ್ಪ ಸೊಡ್ಡಿ (45), ಜಮೀರ ದಾವಲಸಾಬ ಆಲಮೇಲ (25), ರಾಜು ಇಬ್ರಾಹಿಂ ನದಾಫ್ (22), ಆಲಮೇಲದ ಮಹ್ಮದಲಿ ಬಸೀರಹ್ಮದ ಕಲ್ಮನಿ (26), ಅಫ್ಜಲ್ಪುರದ ಸತೀಶ ಪರಸಪ್ಪ ಆರೇಕರ (32) ಹಾಗೂ ಇಸ್ಮಾಯಿಲ್ ದಾವಲಸಾಬ ಕೋತಂಬರಿ (25) ಬಂಧಿತ ಆರೋಪಿಗಳು.
ವಿಜಯಪುರ ರಾಧಾಕೃಷ್ಣನ್ ನಗರದ ಮಲ್ಲಿಕಾರ್ಜುನ ಗುಂದಗಿ ಎಂಬುವರು ತಮ್ಮ ಕಾರ್ ಚಾಲಕ ಸಿದ್ದಣ್ಣ ವಿಶ್ವನಾಥ ಪೂಜಾರಿ ಜೊತೆಗೆ ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾಮದಿಂದ ಬಗಲೂರ-ಘತ್ತರಗಿ ಮಾರ್ಗವಾಗಿ ಅಫ್ಜಲ್ಪುರ ಕಡೆಗೆ ಹೊರಟಿದ್ದರು.
ಬಗಲೂರ ಗ್ರಾಮದ ಊರ ಆಚೆಗೆ ಬಂಧಿತ ಪ್ರಮುಖ ಆರೋಪಿ ರಮೇಶ ಸೊಡ್ಡಿ ಹಾಗೂ ಇತರರು ಸೇರಿಕೊಂಡು, ಮಲ್ಲಿಕಾರ್ಜುನ ಅವರ ಕಾರು ನಿಲ್ಲಿಸಿ, ಹಣೆಗೆ ಕಂಟ್ರಿ ಪಿಸ್ತೂಲ್ ಹಚ್ಚಿ, 5 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿ, ಬಳಿಕ ಕಾರಿನಲ್ಲಿ ಅಪಹರಿಸಿಕೊಂಡು ಹೊರಟರು.
ಮಾರ್ಗ ಮಧ್ಯೆದಲ್ಲಿ ನಿನ್ನ ಮಗನಿಂದ ತಕ್ಷಣಕ್ಕೆ 5 ಲಕ್ಷ ಹಣ ಕೊಡಿಸಬೇಕು. ಇಲ್ಲವಾದಲ್ಲಿ ನಿನ್ನ ಮಗನನ್ನು ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾರೆ.
ತಕ್ಷಣ ಮಲ್ಲಿಕಾರ್ಜುನ ಮಗನಿಗೆ ಫೋನಾಯಿಸಿ, ವಿಷಯ ತಿಳಿಸುತ್ತಿದ್ದಂತೆಯೇ, ಅವರು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಸಿಂದಗಿ ಠಾಣೆ ಪೊಲೀಸರು, ಆರೋಪಿಗಳ ಪತ್ತೆ ಕಾರ್ಯದಲ್ಲಿದ್ದಾಗ, ಸಿಂದಗಿ ಪಟ್ಟಣದ ಯಂಕಂಚಿ ಬೈಪಾಸ್ ಹತ್ತಿರ ಆರೋಪಿಗಳು ಅಪಹೃತ ವ್ಯಕ್ತಿಯೊಂದಿಗಿದ್ದಾಗ ದಾಳಿ ನಡೆಸಿ, ಬಂಧಿಸಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯಪುರ ರಾಧಾಕೃಷ್ಣನ್ ನಗರದ ಮಲ್ಲಿಕಾರ್ಜುನ ಗುಂದಗಿ ಎಂಬುವರು ತಮ್ಮ ಕಾರ್ ಚಾಲಕ ಸಿದ್ದಣ್ಣ ವಿಶ್ವನಾಥ ಪೂಜಾರಿ ಜೊತೆಗೆ ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾಮದಿಂದ ಬಗಲೂರ-ಘತ್ತರಗಿ ಮಾರ್ಗವಾಗಿ ಅಫ್ಜಲ್ಪುರ ಕಡೆಗೆ ಹೊರಟಿದ್ದರು.
ಬಗಲೂರ ಗ್ರಾಮದ ಊರ ಆಚೆಗೆ ಬಂಧಿತ ಪ್ರಮುಖ ಆರೋಪಿ ರಮೇಶ ಸೊಡ್ಡಿ ಹಾಗೂ ಇತರರು ಸೇರಿಕೊಂಡು, ಮಲ್ಲಿಕಾರ್ಜುನ ಅವರ ಕಾರು ನಿಲ್ಲಿಸಿ, ಹಣೆಗೆ ಕಂಟ್ರಿ ಪಿಸ್ತೂಲ್ ಹಚ್ಚಿ, 5 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿ, ಬಳಿಕ ಕಾರಿನಲ್ಲಿ ಅಪಹರಿಸಿಕೊಂಡು ಹೊರಟರು.
ಮಾರ್ಗ ಮಧ್ಯೆದಲ್ಲಿ ನಿನ್ನ ಮಗನಿಂದ ತಕ್ಷಣಕ್ಕೆ 5 ಲಕ್ಷ ಹಣ ಕೊಡಿಸಬೇಕು. ಇಲ್ಲವಾದಲ್ಲಿ ನಿನ್ನ ಮಗನನ್ನು ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾರೆ.
ತಕ್ಷಣ ಮಲ್ಲಿಕಾರ್ಜುನ ಮಗನಿಗೆ ಫೋನಾಯಿಸಿ, ವಿಷಯ ತಿಳಿಸುತ್ತಿದ್ದಂತೆಯೇ, ಅವರು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಸಿಂದಗಿ ಠಾಣೆ ಪೊಲೀಸರು, ಆರೋಪಿಗಳ ಪತ್ತೆ ಕಾರ್ಯದಲ್ಲಿದ್ದಾಗ, ಸಿಂದಗಿ ಪಟ್ಟಣದ ಯಂಕಂಚಿ ಬೈಪಾಸ್ ಹತ್ತಿರ ಆರೋಪಿಗಳು ಅಪಹೃತ ವ್ಯಕ್ತಿಯೊಂದಿಗಿದ್ದಾಗ ದಾಳಿ ನಡೆಸಿ, ಬಂಧಿಸಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.