ಆ್ಯಪ್ನಗರ

ಜನ ಸಹಕರಿಸಿದರೆ ಕೊರೊನಾ ತಡೆ ಸಾಧ್ಯ

ಜಿಲ್ಲೆಯಲ್ಲಿಈ ವರೆಗೆ 18 ಸಾವಿರ ಜನರ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, 8500 ಜನರ ಪರೀಕ್ಷೆಯ ವರದಿ ಬಾಕಿ ಇದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.

Vijaya Karnataka Web 29 May 2020, 5:00 am
ವಿಜಯಪುರ: ಜಿಲ್ಲೆಯಲ್ಲಿಈ ವರೆಗೆ 18 ಸಾವಿರ ಜನರ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, 8500 ಜನರ ಪರೀಕ್ಷೆಯ ವರದಿ ಬಾಕಿ ಇದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.
Vijaya Karnataka Web 0127BLDE-BJP27_38


ನಗರದ ಬಿಎಲ್‌ಡಿಇ ಬಿ.ಎಂ.ಪಾಟೀಲ್‌ ನರ್ಸಿಂಗ್‌ ಕಾಲೇಜಿನಲ್ಲಿಕೊರೊನಾ ಸಂಕಷ್ಟದ ಸಮಯದಲ್ಲಿಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತ ಆನ್‌ಲೈನ್‌ ವಿಚಾರ ಸಂಕಿರಣ ವೆಬಿನಾರ್‌ದಲ್ಲಿಅವರು ಮಾತನಾಡಿದರು.

ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲರವರ ನೇತೃತ್ವದಲ್ಲಿಜಿಲ್ಲೆಯಲ್ಲಿಕೊರೊನಾ ವಿರುದ್ಧ ಸಮರ ಸಾರಿ, ಸ್ವಚ್ಛತೆ ಹಾಗೂ ಜನರಲ್ಲಿಕೊರೊನಾ ಕಾಯಿಲೆ ಬಗ್ಗೆ ಮನವರಿಕೆ ಮಾಡಿಸಿ, ಕಾಯಿಲೆ ನಿಯಂತ್ರಿಸುವಲ್ಲಿಶ್ರಮಿಸಲಾಗುತ್ತಿದೆ. ಜನರು ಸಹಕರಿಸಿದರೆ ಮುಂದಿನ ದಿನಗಳಲ್ಲಿಕೊರೊನಾ ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.

ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಮಾತನಾಡಿ, ಕೊರೊನಾ ಆರಂಭದ ಒಂದು ತಿಂಗಳು ಶೂನ್ಯ ಸಂಖ್ಯೆಯಲ್ಲಿದ್ದ ಜಿಲ್ಲೆಯಲ್ಲಿಏಕಾಏಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ, ರಾಜ್ಯದಲ್ಲಿ3ನೇ ಸ್ಥಾನಕ್ಕೆ ಏರಿಕೆಯಾಗಿತ್ತು. 10 ಸಾವಿರ ಮನೆಗಳನ್ನು 28 ದಿನ ಸೀಲ್‌ಡೌನ್‌ ಮಾಡಿದ ಮೇಲೆ ಪರಿಸ್ಥಿತಿ ಹತೋಟಿಗೆ ಬಂತು. ಜಿಲ್ಲೆಇದೀಗ 13ನೇ ಸ್ಥಾನಕ್ಕೆ ಕುಸಿದಿದೆ ಎಂದರು.

ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ.ಬಿರಾದಾರ ಮಾತನಾಡಿದರು.

ಪ್ರಾಚಾರ್ಯ ಡಾ.ಶೋಲ್ಮೊನ್‌ ಚೋಪಡೆ ವೀಕ್ಷಕರ ಪರವಾಗಿ ಪ್ರಶ್ನೆಗಳನ್ನು ಕೇಳಿದರು. ಕೊರೊನಾ ಸಂಕಟವನ್ನು ಸಮರ್ಥವಾಗಿ ನಿಭಾಯಿಸಿದ ಅಪರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಹಾಗೂ ಜಿಲ್ಲಾಸರ್ವೇಕ್ಷಣಾಧಿಕಾರಿಗಳನ್ನು ಕಾಲೇಜ್‌ ಪರವಾಗಿ ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಡಾ.ಮಹಾಂತೇಶ ಬಿರಾದಾರ ಸನ್ಮಾನಿಸಿದರು.

ದೇಶ-ವಿದೇಶಗಳಿಂದ 1 ಸಾವಿರಕ್ಕೂ ಹೆಚ್ಚು ವೀಕ್ಷಕರು ಈ ವೆಬಿನಾರ್‌ನಲ್ಲಿಭಾಗವಹಿಸಿದ್ದರು. ವಿಶೇಷವಾಗಿ ನರ್ಸಿಂಗ್‌ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡಿದ್ದರು. ಸಂಚಾಲಕ ಬಸೀರಅಹಮ್ಮದ್‌ ಸಿಖಂದರ್‌, ಸುಚಿತ್ರಾ ಪಾಟೀಲ, ಎನ್‌.ಜಿ.ಪಾಟೀಲ, ಸಂತೋಷ ಇಂಡಿ, ಅಮಿತ ಬಿರಾದಾರ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ