ಆ್ಯಪ್ನಗರ

ಕೊರೊನಾ ಭೀತಿ ಹಿನ್ನಲೆ: ಧಾನ್ಯ ತಂದ ರೈತರು ವಾಪಸ್‌, ಎಪಿಎಂಸಿ ವಹಿವಾಟು ಸ್ಥಗಿತ

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.

Vijaya Karnataka Web 23 Mar 2020, 4:47 pm
ವಿಜಯಪುರ: ದೇಶಾದ್ಯಂತ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಮಾರುಕಟ್ಟೆಯಲ್ಲಿ ಮಾ.23ರಿಂದ ಮಾ.31ರ ತನಕ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಎಸ್‌.ಬಿಜ್ಜರಗಿ ತಿಳಿಸಿದ್ದಾರೆ.
Vijaya Karnataka Web apmc


ವ್ಯಾಪಾರಸ್ಥರು, ರೈತರು, ಸಾರ್ವಜನಿಕರು, ಕೂಲಿಕಾರ್ಮಿಕರು ಬಂದ್‌ಗೆ ಸಹಕರಿಸಿ ಸಾರ್ವಜನಿಕರ ಆರೋಗ್ಯ ಹಿತಾಸಕ್ತಿ ಕಾಪಾಡಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯಪುರ ಎಪಿಎಂಸಿಯಲ್ಲಿ ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚು ವಹಿವಾಟು ನಡೆಯುತ್ತದೆ. ಇಲ್ಲಿ400 ವರ್ತಕರಿದ್ದು, ನಿತ್ಯ 20-25 ಕೋಟಿ ವಹಿವಾಟು ನಡೆಯುತ್ತದೆ. 15 ಸಾವಿರ ಕಾರ್ಮಿಕರು ಎಪಿಎಂಸಿ ಮೇಲೆ ಅವಲಂಬಿತರಾಗಿದ್ದಾರೆ. ಆದರೀಗ ಮಾ.31ರ ತನಕ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಿಂದ ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಅಲ್ಲಿ ಕೊರೊನಾ ಸೋಂಕು ಹೆಚ್ಚಿದ್ದು, ಅಲ್ಲಿನವರು ಹತ್ತಿ ಮಾರಾಟಕ್ಕೆ ನಮ್ಮಲ್ಲಿಗೆ ಬರುವುದರಿಂದ ಅದು ಎಲ್ಲೆಡೆ ಹರಡುವ ಭೀತಿ ಇದೆ. ಹೀಗಾಗಿ ವ್ಯಾಪಾರಸ್ಥರು, ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ರವೀಂದ್ರ ಬಿಜ್ಜರಗಿ ತಿಳಿಸಿದ್ದಾರೆ.

ಬಂದ ರೈತರು ವಾಪಸ್‌
ಸೋಮವಾರದಿಂದಲೇ ಎಪಿಎಂಸಿ ಬಂದ್‌ ಆಗಿದ್ದರಿಂದ ಮಾರಲೆಂದು ದವಸ ಧಾನ್ಯ ತಂದಿದ್ದ ನೂರಾರು ರೈತರಿಗೆ ನಿರಾಸೆಯುಂಟಾಯಿತು. ವಹಿವಾಟು ಬಂದ್‌ ಆಗುವ ಮಾಹಿತಿ ಇರಲಿಲ್ಲ. ಹೀಗಾಗಿ ಎಂದಿನಂತೆ ಕಾಳುಕಡಿಯನ್ನು ಮಾರಲೆಂದು ತಂದಿದ್ದೇವು. ಇಲ್ಲಿನೋಡಿದರೆ ಇಡೀ ಎಪಿಎಂಸಿ ಬಂದ್‌ ಆಗಿದೆ. ಧಾನ್ಯವನ್ನು ಮತ್ತೆ ಊರಿಗೆ ಸಾಗಿಸಬೇಕಿದೆ ಎಂದು ರೈತರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ