ಹುಸೇನ್ ಆರ್.ಕೊಕಟನೂರ, ದೇವರಹಿಪ್ಪರಗಿ : ಗ್ರಾಮೀಣ ಪ್ರದೇಶದ ಅನೇಕ ಮುಖ್ಯರಸ್ತೆಗಳಲ್ಲಿಬಸ್ ಶೆಲ್ಟರ್ ಇಲ್ಲದೆ ಜನತೆ ಬಿರುಬಿಸಿಲ್ಲಿಹೈರಾಣುಗುತ್ತಿದ್ದರೆ, ಇರುವ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿವೆ. ಕೆಲವು ಪಡ್ಡೆ ಹುಡುಗರ ಅಡ್ಡೆಗಳಾಗಿದ್ದು, ಅನೇಕ ಶೆಲ್ಟರ್ಗಳು ಚಹಾ ಅಂಗಡಿ, ಕಟ್ಟಿಗೆ ತುಂಬಿಡುವ ಜಾಗೆಗಳಾಗಿವೆ. ಹೀಗಾಗಿ ಪ್ರಯಾಣಿಕರಿಗೆ ಬಸ್ ಶೆಲ್ಟರ್ ಸೌಲಭ್ಯ ಅಲಭ್ಯವಾಗಿದೆ.
ಗ್ರಾಮೀಣ ಪ್ರದೇಶದ ಜನ ನಿತ್ಯ ಹಲವಾರು ಗ್ರಾಮಗಳಿಂದ ಪಟ್ಟಣಕ್ಕೆ ಬರುತ್ತಾರೆ. ಅವರಿಗೆ ಬಸ್ ಬರುವ ತನಕ ವಿರಮಿಸಲೆಂದು ಮುಖ್ಯ ರಸ್ತೆಗೆ ಕೆಲವು ಕಡೆ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ ಅವುಗಳು ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿವೆ. ಅನೇಕ ಶೆಲ್ಟರ್ಗಳು ಬೀಳುವ ಸ್ಥಿತಿಯಲ್ಲಿದ್ದು, ಜೀವಭಯದಲ್ಲಿ ಆಶ್ರಯ ಪಡೆಯುವ ಸ್ಥಿತಿ ಇದೆ ಎಂದು ಗ್ರಾಮೀಣ ಜನ ದೂರುತ್ತಿದ್ದಾರೆ.
ಬೀಳುವ ಸ್ಥಿತಿಯಲ್ಲಿ
ದೇವರಹಿಪ್ಪರಗಿ-ತಾಳಿಕೋಟೆ ರಸ್ತೆಗೆ ಹೊಂದಿಕೊಂಡಿರುವ ಬೂದಿಹಾಳ ಡೋಣ ಗ್ರಾಮದಲ್ಲಿನಿರ್ಮಿಸಿದ ಬಸ್ ಶೆಲ್ಟರ್ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಸ್ ಬರುವ ತನಕ ಮಹಿಳೆಯರು, ವೃದ್ಧರು ಆತಂಕದಲ್ಲಿಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಸರಕಾರಿ, ಖಾಸಗಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ಕಡೆಗೆ ಹೋಗಬೇಕಾದರೆ ಬಸ್ ಶೆಲ್ಟರ್ ಹತ್ತಿರವೇ ನಿಲ್ಲಬೇಕು. ಓಬಿರಾಯನ ಕಾಲದ ಈ ಬಸ್ ಶೆಲ್ಟರ್ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ವೇಳೆ ಬೀಳುವ ಅಪಾಯ ಎದುರಾಗಿದೆ. ಬಸ್ ಶೆಲ್ಟರ್ ಊರ ಹೊರಗಿನ ಬಯಲು ಪ್ರದೇಶದಲ್ಲಿದ್ದು, ವಿಷಜಂತುಗಳ ಆಶ್ರಯತಾಣವಾಗಿದೆ. ಇಲ್ಲಿಆಶ್ರಯ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನೊಂದೆಡೆ ದೇವರಹಿಪ್ಪರಗಿಯಿಂದ ಚಿಕ್ಕರೂಗಿ ಕಡೆ ಹೋಗುವ ಮಾರ್ಗ ಮದ್ಯದಲ್ಲಿನಿರ್ಮಿಸಿದ ಇಂಗಳಗಿ, ಮುಳಸಾವಳಗಿ, ಕಡ್ಲೇವಾಡ ಹಾಗೂ ಚಿಕ್ಕರೂಗಿ ಗ್ರಾಮಗಳಲ್ಲಿ, ತಾಳಿಕೋಟೆ ಕಡೆ ಹೋಗುವ ದೇವೂರ, ಕೊಂಡಗೂಳಿ, ಬಿಬಿ ಇಂಗಳಗಿಯಲ್ಲಿನಿರ್ಮಿಸಿದ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಕೆಲವೆಡೆ ಜನ ಆಶ್ರಯ ಪಡೆಯುವುದಕ್ಕಿಂತ ಚಹಾದ ಅಂಗಡಿ, ಕುಳ್ಳು, ಕಟ್ಟಿಗೆ ತುಂಬಿಡುವ ಜಾಗಗಳಾಗಿವೆ.
ಹಳೆಯ ಬಸ್ ಶೆಲ್ಟರ್ ನೆಲಸಮಗೊಳಿಸಿ ಹೊಸ ಬಸ್ ಶೆಲ್ಟರ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೂದಿಹಾಳ ಡೋಣ ಗ್ರಾಮದ ಗಣ್ಯರಾದ ಶಾಂತಪ್ಪ ಸಾವಳಗಿ, ಐ.ಎಸ್.ಇಜೇರಿ, ಸಿದ್ರಾಮಪ್ಪ ಸಾಲೋಡಗಿ, ಮಲ್ಲನಗೌಡ ಸರ್ಜಪ್ಪಗೋಳ ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿವೆ. ಕೆಲವು ಚಹಾ ಅಂಗಡಿ, ಪಡ್ಡೆ ಹುಡುಗರ ಅಡ್ಡೆಗಳಾಗಿವೆ. ಇವುಗಳ ನಿರ್ವಹಣೆಗೆ ಸಂಬಂಧ ಇಲಾಖೆ ಮುಂದಾಗಬೇಕು.
ಮಲ್ಲಿಕಾರ್ಜುನ ಉಕ್ಕಲಿ, ಬೂದಿಹಾಳ ಡೋಣ
ಗ್ರಾಮೀಣ ಭಾಗದಿಂದ ಮುಖ್ಯರಸ್ತೆಗೆ ಕೂಡುವ ಸ್ಥಳಗಳಲ್ಲಿರುವ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಕಡೆಗೆ ಹೊಸ ಬಸ್ ಶೆಲ್ಟರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಬಸ್ ಶೆಲ್ಟರ್ಗಳನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
ಸೋಮನಗೌಡ ಪಾಟೀಲ ಸಾಸನೂರ, ದೇವರಹಿಪ್ಪರಗಿ ಶಾಸಕ
ಗ್ರಾಮೀಣ ಪ್ರದೇಶದ ಜನ ನಿತ್ಯ ಹಲವಾರು ಗ್ರಾಮಗಳಿಂದ ಪಟ್ಟಣಕ್ಕೆ ಬರುತ್ತಾರೆ. ಅವರಿಗೆ ಬಸ್ ಬರುವ ತನಕ ವಿರಮಿಸಲೆಂದು ಮುಖ್ಯ ರಸ್ತೆಗೆ ಕೆಲವು ಕಡೆ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ ಅವುಗಳು ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿವೆ. ಅನೇಕ ಶೆಲ್ಟರ್ಗಳು ಬೀಳುವ ಸ್ಥಿತಿಯಲ್ಲಿದ್ದು, ಜೀವಭಯದಲ್ಲಿ ಆಶ್ರಯ ಪಡೆಯುವ ಸ್ಥಿತಿ ಇದೆ ಎಂದು ಗ್ರಾಮೀಣ ಜನ ದೂರುತ್ತಿದ್ದಾರೆ.
ಬೀಳುವ ಸ್ಥಿತಿಯಲ್ಲಿ
ದೇವರಹಿಪ್ಪರಗಿ-ತಾಳಿಕೋಟೆ ರಸ್ತೆಗೆ ಹೊಂದಿಕೊಂಡಿರುವ ಬೂದಿಹಾಳ ಡೋಣ ಗ್ರಾಮದಲ್ಲಿನಿರ್ಮಿಸಿದ ಬಸ್ ಶೆಲ್ಟರ್ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಸ್ ಬರುವ ತನಕ ಮಹಿಳೆಯರು, ವೃದ್ಧರು ಆತಂಕದಲ್ಲಿಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಸರಕಾರಿ, ಖಾಸಗಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ಕಡೆಗೆ ಹೋಗಬೇಕಾದರೆ ಬಸ್ ಶೆಲ್ಟರ್ ಹತ್ತಿರವೇ ನಿಲ್ಲಬೇಕು. ಓಬಿರಾಯನ ಕಾಲದ ಈ ಬಸ್ ಶೆಲ್ಟರ್ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ವೇಳೆ ಬೀಳುವ ಅಪಾಯ ಎದುರಾಗಿದೆ. ಬಸ್ ಶೆಲ್ಟರ್ ಊರ ಹೊರಗಿನ ಬಯಲು ಪ್ರದೇಶದಲ್ಲಿದ್ದು, ವಿಷಜಂತುಗಳ ಆಶ್ರಯತಾಣವಾಗಿದೆ. ಇಲ್ಲಿಆಶ್ರಯ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನೊಂದೆಡೆ ದೇವರಹಿಪ್ಪರಗಿಯಿಂದ ಚಿಕ್ಕರೂಗಿ ಕಡೆ ಹೋಗುವ ಮಾರ್ಗ ಮದ್ಯದಲ್ಲಿನಿರ್ಮಿಸಿದ ಇಂಗಳಗಿ, ಮುಳಸಾವಳಗಿ, ಕಡ್ಲೇವಾಡ ಹಾಗೂ ಚಿಕ್ಕರೂಗಿ ಗ್ರಾಮಗಳಲ್ಲಿ, ತಾಳಿಕೋಟೆ ಕಡೆ ಹೋಗುವ ದೇವೂರ, ಕೊಂಡಗೂಳಿ, ಬಿಬಿ ಇಂಗಳಗಿಯಲ್ಲಿನಿರ್ಮಿಸಿದ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಕೆಲವೆಡೆ ಜನ ಆಶ್ರಯ ಪಡೆಯುವುದಕ್ಕಿಂತ ಚಹಾದ ಅಂಗಡಿ, ಕುಳ್ಳು, ಕಟ್ಟಿಗೆ ತುಂಬಿಡುವ ಜಾಗಗಳಾಗಿವೆ.
ಹಳೆಯ ಬಸ್ ಶೆಲ್ಟರ್ ನೆಲಸಮಗೊಳಿಸಿ ಹೊಸ ಬಸ್ ಶೆಲ್ಟರ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೂದಿಹಾಳ ಡೋಣ ಗ್ರಾಮದ ಗಣ್ಯರಾದ ಶಾಂತಪ್ಪ ಸಾವಳಗಿ, ಐ.ಎಸ್.ಇಜೇರಿ, ಸಿದ್ರಾಮಪ್ಪ ಸಾಲೋಡಗಿ, ಮಲ್ಲನಗೌಡ ಸರ್ಜಪ್ಪಗೋಳ ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿವೆ. ಕೆಲವು ಚಹಾ ಅಂಗಡಿ, ಪಡ್ಡೆ ಹುಡುಗರ ಅಡ್ಡೆಗಳಾಗಿವೆ. ಇವುಗಳ ನಿರ್ವಹಣೆಗೆ ಸಂಬಂಧ ಇಲಾಖೆ ಮುಂದಾಗಬೇಕು.
ಮಲ್ಲಿಕಾರ್ಜುನ ಉಕ್ಕಲಿ, ಬೂದಿಹಾಳ ಡೋಣ
ಗ್ರಾಮೀಣ ಭಾಗದಿಂದ ಮುಖ್ಯರಸ್ತೆಗೆ ಕೂಡುವ ಸ್ಥಳಗಳಲ್ಲಿರುವ ಬಸ್ ಶೆಲ್ಟರ್ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಕಡೆಗೆ ಹೊಸ ಬಸ್ ಶೆಲ್ಟರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಬಸ್ ಶೆಲ್ಟರ್ಗಳನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
ಸೋಮನಗೌಡ ಪಾಟೀಲ ಸಾಸನೂರ, ದೇವರಹಿಪ್ಪರಗಿ ಶಾಸಕ