ಆ್ಯಪ್ನಗರ

ದರೋಡೆಕೋರ ಪೊಲೀಸರಿಗೆ ಜೈಲು

ವ್ಯಾಪಾರಸ್ಥನ ಮೇಲೆ ಹಲ್ಲೆ ಮಾಡಿ ಆತನಿಂದ ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 28 Jun 2018, 9:22 am
ವಿಜಯಪುರ: ವ್ಯಾಪಾರಸ್ಥನ ಮೇಲೆ ಹಲ್ಲೆ ಮಾಡಿ ಆತನಿಂದ ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web jail


ಈ ಪ್ರಕರಣದಲ್ಲಿ ದರೋಡೆಕೋರರು ಪೊಲೀಸರೇ ಆಗಿರುವುದು ವಿಶೇಷ. ವಿಜಯಪುರದ ಬಾಬು ರಜಾಕಸಾಬ ಪಟೇಲ್‌, ಮಹಾದೇವ ಅಮೋಗಿ ಟಕ್ಕೆ ಹಾಗೂ ಜಗದೀಶ ಶಿಕ್ಷೆಗೆ ಒಳಗಾದ ಆರೋಪಿಗಳು. ಬಾಬು ರಜಾಕಸಾಬ ಹಾಗೂ ಜಗದೀಶ ಐಆರ್‌ಬಿ ಪೇದೆಗಳಾಗಿದ್ದಾರೆ.

ಹಣದ ಆಸೆಗಾಗಿ 2014ರ ಜು.28ರಂದು ಸಿಂದಗಿ ತಾಲೂಕಿನ ಗಬಸಾವಳಗಿ ಬಳಿ ಕಾರಿನಲ್ಲಿ ಬರುತ್ತಿದ್ದ ವಿಜಯಪುರದ ವಜ್ರಹನುಮಾನ ನಗರದ ನಿವಾಸಿ ಸ್ವೀಟ್‌ ಮಾರ್ಟ್‌ ವ್ಯಾಪಾರಸ್ಥ ದಿನಕರನ್‌ ಆಶೀರ್ವಾದಂ ನಾಡರ್‌ ಎಂಬುವವರ ಮೇಲೆ ಹಲ್ಲೆ ನಡೆಸಿ 1.20 ಲಕ್ಷ ರೂ.ದೋಚಿ ಪರಾರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ