ಆ್ಯಪ್ನಗರ

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ವಿಜಯಪುರದ 18 ಜನರ ಸಾವು

ಮಹಾರಾಷ್ಟ್ರದ ಸತಾರ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

Vijaya Karnataka Web 10 Apr 2018, 12:19 pm
ವಿಜಯಪುರ: ಮಹಾರಾಷ್ಟ್ರದ ಸತಾರ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಿಜಯಪುರ ಜಿಲ್ಲೆಯ ಕೆಲವು ತಾಂಡಾಗಳು ಸೇರಿದಂತೆ ನಾನಾ ಭಾಗದ 18 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
Vijaya Karnataka Web ac


ಸತಾರ ಮತ್ತು ಪುಣೆ ಮಧ್ಯದ ಕಬಾಟಗಿ ಘಾಟ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ.

ನಾಗಠಾಣೆಯ ಮಾದವಿ ಅನಿಲ್ ರಾಠೋಡ್, ಹಡಗಲಿಯ ಶಂಕರ್ ರೆಖು ಚವ್ಹಾಣ್, ಸಂತೋಷ್ ಕಾಶಿನಾಥ್ ನಾಯಕ್, ಮಂಗಳಾಬಾಯಿ ಚಂದು ನಾಯಕ್, ರಾಜನಾಳ ತಾಂಡಾದ ಕೃಷ್ಣಾ ಸೋನು ಪವಾರ್, ಮದಬಾಯಿ ತಾಂಡಾದ ಕಿರಣ್ ವಿಠ್ಠಲ್ ರಾಠೋಡ್, ದೇವಾಬಾಯಿ ಮೋಹನ್ ರಾಠೋಡ್, ಸಂಗೀತಾ ಕಿರಣ್ ರಾಠೋಡ್, ದೇವಾನಂದ್ ನಾರಾಯಣ ರಾಠೋಡ್, ಪ್ರಿಯಾಂಕಾ ಕಪ್ಪು ರಾಠೋಡ್, ಕಲ್ಲುಬಾಯಿ ವಿಠ್ಠಲ್ ರಾಠೋಡ್, ತನ್ವೀರ್ ಕಿರಣ್ ರಾಠೋಡ್, ವಿಠ್ಠಲ್ ಖಿರು ರಾಠೋಡ್, ಕುಡಗಿ ತಾಂಡಾದ ಅರ್ಜುನ್ ರಮೇಶ್ ಚವ್ಹಾಣ್, ಶ್ರೀಕಾಂತ್ ವಾಸು ರಾಠೋಡ್, ಸೀನು ವಾಸು ರಾಠೋಡ್ ಹಾಗೂ ಖಾದಿಗ್ರಾಮೋದ್ಯೋಗ ಎದುರುಗಡೆಯ ಆಲಿಕಾ ರೋಜಾದ ಮೆಹಬ್ಬುಬ್ ರಾಜಾಸಾಬ್ ಆತಾರ್, ಮಾಜಿದ್ ಮೆಹಬ್ಬುಬ್ ಆತಾರ್ ಮೃತ ದುರ್ದೈವಿಗಳು.

ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 18 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ 15 ಕ್ಕೂ ಅಧಿಕ ಜನ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಎಂಬಿ ಪಾಟೀಲ ದಿಗ್ಭ್ರಮೆ:
ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಕುಟುಂಬಗಳ ಮೂವರು ಬಾಲಕರು ಸೇರಿದಂತೆ, 18 ಜನ ಅಪಘಾತದಲ್ಲಿ ಸಾವನಪ್ಪಿರುವ ಘಟನೆ ಕುರಿತಂತೆ ಜಲಸಂಪನ್ಮೂಲ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿರುವ ಸಚಿವರು ಘಟನೆ ಮಾಹಿತಿ ಪಡೆದು, ಸ್ಥಳೀಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮೃತರ ಪತ್ತೆಯನ್ನು ಹಚ್ಚಿ, ಸಂಬಂಧಿಸಿದ ಗ್ರಾಮಸ್ಥರಿಗೆ ತಿಳಿಸಲು ಹೇಳಿದ್ದಾರೆ.

ತಮ್ಮ ಉಪಜೀವನಕ್ಕಾಗಿ ಮಕ್ಕಳು ಸಮೇತ ಸಂಸಾರದೊಂದಿಗೆ, ಕೂಲಿ ಕೆಲಸಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯವರು ಅಪಘಾತಕ್ಕೆ ಬಲಿಯಾಗಿ ಜೀವ ಕಳೆದುಕೊಂಡಿರುವದು ಅತೀವ ನೋವು ತಂದಿದೆ ಎಂದು ಸಚಿವ ಪಾಟೀಲ ಶೋಕ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ