ಆ್ಯಪ್ನಗರ

ಸೇವಾ ದಾಖಲೆಗಳ ನಾಶ : ನೊಂದ ಶಿಕ್ಷಕಿ ಧರಣಿ

ಮುದ್ದೇಬಿಹಾಳ: ಹನ್ನೊಂದು ವರ್ಷ ಸೇವೆ ಸಲ್ಲಿಸಿದ ತಮ್ಮನ್ನು ಕೈಬಿಟ್ಟು ಅನುದಾನ ದೊರಕುವಾಗ ಬೇರೆಯವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತನ್ನ ದಾಖಲೆಗಳನ್ನೇ ನಾಶಪಡಿಸಿದ ಶಿಕ್ಷಣ ಸಂಸ್ಥೆಗೆ ನೀಡಿರುವ ಅನುದಾನ ರದ್ದುಪಡಿಸಬೇಕು ಮತ್ತು ಇದಕ್ಕೆ ಕಾರಣರಾದ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನೊಂದ ಶಿಕ್ಷಕಿ ಭೂದೇವಿ ಹುನಗುಂದ ಮತ್ತು ಅವರ ಪುತ್ರ ಚೇತನ್‌ ಬೆಂಬಲಿಗರೊಂದಿಗೆ ಇಲ್ಲಿನ ಬಿಇಒ ಕಚೇರಿ ಎದುರು ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.

Vijaya Karnataka 8 Jan 2019, 5:00 am
ಮುದ್ದೇಬಿಹಾಳ: ಹನ್ನೊಂದು ವರ್ಷ ಸೇವೆ ಸಲ್ಲಿಸಿದ ತಮ್ಮನ್ನು ಕೈಬಿಟ್ಟು ಅನುದಾನ ದೊರಕುವಾಗ ಬೇರೆಯವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತನ್ನ ದಾಖಲೆಗಳನ್ನೇ ನಾಶಪಡಿಸಿದ ಶಿಕ್ಷಣ ಸಂಸ್ಥೆಗೆ ನೀಡಿರುವ ಅನುದಾನ ರದ್ದುಪಡಿಸಬೇಕು ಮತ್ತು ಇದಕ್ಕೆ ಕಾರಣರಾದ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನೊಂದ ಶಿಕ್ಷಕಿ ಭೂದೇವಿ ಹುನಗುಂದ ಮತ್ತು ಅವರ ಪುತ್ರ ಚೇತನ್‌ ಬೆಂಬಲಿಗರೊಂದಿಗೆ ಇಲ್ಲಿನ ಬಿಇಒ ಕಚೇರಿ ಎದುರು ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.
Vijaya Karnataka Web destruction of service documents a predictive teacher dialogue
ಸೇವಾ ದಾಖಲೆಗಳ ನಾಶ : ನೊಂದ ಶಿಕ್ಷಕಿ ಧರಣಿ


ತಾಲೂಕಿನ ಢವಳಗಿಯಲ್ಲಿರುವ ಬಸವ ಸಮಿತಿಯ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ 11 ವರ್ಷ ಸೇವೆ ಸಲ್ಲಿಸಿದ್ದೇನೆ. ಆದರೆ ಶಾಲೆಗೆ ಸರಕಾರದಿಂದ ಅನುದಾನ ಸೌಲಭ್ಯ ಪಡೆಯುವಾಗ ನನ್ನ ಕೈಬಿಟ್ಟು ಬೇರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಅಲ್ಲದೇ ನಾನು 11 ವರ್ಷ ಸಲ್ಲಿಸಿದ ಸೇವೆಯ ದಾಖಲೆಗಳನ್ನು ನಾಶಪಡಿಸಿ ಅನ್ಯಾಯ ಮಾಡಿದ್ದಾರೆ. ಈ ಶಿಕ್ಷಣ ಸಂಸ್ಥೆ ವಿರುದ್ಧ ಮತ್ತು ಇದಕ್ಕೆ ಸಹಕಾರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ.ಗಾಂಜಿ ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಭೂದೇವಿ ಅವರು ಬಾಲ ಭಾರತಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ದಾಖಲೆ ಒದಗಿಸಿದರೆ ಅದನ್ನು ಪರಿಗಣಿಸಲು ತಾವು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದರು. ನ್ಯಾಯಕ್ಕಾಗಿ ಕಾನೂನು ಮೊರೆ ಹೋಗುವುದು ಉತ್ತಮ. ಸರಕಾರಿ ಕಚೇರಿ ಎದುರು ಧರಣಿ ನಡೆಸುವುದು ಬೇಡ ಎಂದು ತಿಳಿಹೇಳಲು ಯತ್ನಿಸಿದರು. ಆದರೆ ಯಾವುದೇ ಪ್ರಯತ್ನಗಳು ಫಲ ನೀಡದ್ದರಿಂದ ಧರಣಿ ಮುಂದುವರಿಸಿದರು.

ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷ ಶಿವಪುತ್ರ ಅಜಮನಿ, ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸಯ್ಯ ನಂದಿಕೇಶ್ವರಮಠ, ರವಿ ಸೋಮನಾಳ, ರಾಜಶೇಖರ ಹೊಳಿ, ಪುನಿತ್‌ ಹಿಪ್ಪರಗಿ, ತಂಗಡಗಿಯ ನಿವೃತ್ತ ಶಿಕ್ಷಕ ಹೊಳಿ ಸೇರಿದಂತೆ ಹಲವರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ