ಆ್ಯಪ್ನಗರ

ಶಿವನ ಆರಾಧನೆಗೆ ಭಕ್ತರು ಸಜ್ಜು

ವಿಜಯಪುರ: ಭೀಕರ ಬರದ ನಡುವೆಯೂ ಜಿಲ್ಲಾದ್ಯಂತ ಮಹಾಶಿವರಾತ್ರಿ ಆಚರಣೆಗೆ ಜನತೆ ಮುಂದಾಗಿದ್ದಾರೆ. ದೇಶದ ಅತಿ ಎತ್ತರದ 2ನೇ ಶಿವಮೂರ್ತಿ ಹೊಂದಿರುವ ಶಿವಗಿರಿ ಸೇರಿದಂತೆ ಶಿವಮಂದಿರಗಳಲ್ಲಿ ವಿಶೇಷ ಪೂಜೆ, ಜಾಗರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

Vijaya Karnataka 14 Dec 2022, 2:06 pm
ವಿಜಯಪುರ: ಭೀಕರ ಬರದ ನಡುವೆಯೂ ಜಿಲ್ಲಾದ್ಯಂತ ಮಹಾಶಿವರಾತ್ರಿ ಆಚರಣೆಗೆ ಜನತೆ ಮುಂದಾಗಿದ್ದಾರೆ. ದೇಶದ ಅತಿ ಎತ್ತರದ 2ನೇ ಶಿವಮೂರ್ತಿ ಹೊಂದಿರುವ ಶಿವಗಿರಿ ಸೇರಿದಂತೆ ಶಿವಮಂದಿರಗಳಲ್ಲಿ ವಿಶೇಷ ಪೂಜೆ, ಜಾಗರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.
Vijaya Karnataka Web shiva
ಶಿವ


ಮಾ.4ರಂದು ಶಿವರಾತ್ರಿ ಹಬ್ಬದ ಆಚರಣೆ ನಡೆಯಲಿದ್ದು , ಪರಮಾತ್ಮ, ವಿಶ್ವನಾಥ, ನೀಲಕಂಠ, ಮಹೇಶ್ವರ, ಶಂಕರ ಹೀಗೆ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಶಿವನ ಸ್ಮರಣೆಗೆ ಜನತೆ ಮುಂದಾಗಿದೆ.

ಶಿವಗಿರಿಯಲ್ಲಿ 13ನೇ ಮಹೋತ್ಸವ :

ದೇಶದ 2ನೇ ಅತಿ ಎತ್ತರ ಶಿವನ ಮೂರ್ತಿ ಹೊಂದಿರುವ ನಗರ ಹೊರವಲಯದ ಶಿವಗಿರಿಯಲ್ಲಿ ಬಸಂತಕುಮಾರ್‌ ಪಾಟೀಲ ಕುಟುಂಬದ ನೇತೃತ್ವದಲ್ಲಿ 13ನೇ ಶಿವರಾತ್ರಿ ಉತ್ಸವ ಮಾ.3ರಿಂದ 6ರ ತನಕ ನಡೆಯಲಿದೆ.

ಮಾ.3ರಂದು ರುದ್ರ ಮೃತ್ಯುಂಜಯ ಹೋಮ ನಡೆಯಲಿದೆ. ಮಾ.4ರ ಶಿವರಾತ್ರಿಯಂದು ನಸುಕಿನ 4.30ಕ್ಕೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ, ಪ್ರತಿ ಗಂಟೆಗೊಮ್ಮೆ ವಿಶೇಷ ಪೂಜೆ ನೆರವೇರಲಿದೆ.

ಬೆಳಗ್ಗೆ 6.30ಕ್ಕೆ ಶಹನಾಯ್‌ ಕಾರ್ಯಕ್ರಮ, 8.30ಕ್ಕೆ ಅವ್ವನವರ ಪೂಜೆ, ಮಧ್ಯಾಹ್ನ 2ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4.30ಕ್ಕೆ ಮಹಿಳೆಯರಿಂದ ಸುವರ್ಣ ರಥ ಎಳೆಯುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿವೆ. ಶಿವಗಿರಿಗೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿದೆ.

ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ರುದ್ರ ಮಂತ್ರ, ಧೂಪ, ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ. ಜನತೆ ಕೂಡ ಶಿವರಾತ್ರಿ ಆಚರಣೆಗೆ ಪೂಜಾ ಸಾಮಗ್ರಿ ಖರೀದಿಸುತ್ತಿದ್ದಾರೆ.

ವಿಶೇಷ ಪೂಜೆ:

ವಿಜಯಪುರದ ಜೋರಾಪುರ ಪೇಠದಲ್ಲಿರುವ ಶಂಕರಲಿಂಗ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಅಡವಿ ಶಂಕರಲಿಂಗ ದೇವಾಲಯ, 770 ಲಿಂಗದ ಗುಡಿ, ಐತಿಹಾಸಿಕ ಸುಂದರೇಶ್ವರ ದೇವಾಲಯ, ಚಿಂದಬರೇಶ್ವರ ದೇವಾಲಯ ಹಾಗೂ ನಾನಾ ಬಡಾವಣೆಗಳಲ್ಲಿರುವ ಶಿವ ಮಂದಿರಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿದೆ. ನಾನಾ ಮಂದಿರಗಳಿಗೆ ಅಸಂಖ್ಯ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆಯಲಿದ್ದಾರೆ. ಸಂಘ-ಸಂಸ್ಥೆಗಳು ಶಿವರಾತ್ರಿ ಅಂಗವಾಗಿ ಭಕ್ತರಿಗೆ ನೀರು, ಪಾನಕ, ಮಜ್ಜಿಗೆ ಸೇವೆ ಒದಗಿಸಿ ಶಿವನ ಕೃಪೆಗೆ ಪಾತ್ರರಾಗಲು ಮುಂದಾಗಿವೆ.

ಜಿಲ್ಲೆಯಲ್ಲಿ ಈ ಬಾರಿ ಭೀಕರ ಎದುರಾಗಿದ್ದು, , ರೈತರು ಸಂಕಷ್ಟದಲ್ಲಿದ್ದಾರೆ. ಆದರೂ ಹಬ್ಬ ,ಸಂಪ್ರದಾಯ ಬಿಡಲಾಗದು ಎಂದು ಜನತೆ ಮಹಾಶಿವರಾತ್ರಿ ಆಚರಣೆಗೆ ಮುಂದಾಗಿದ್ದಾರೆ. ಅಗತ್ಯ ವಸ್ತು, ಹೂವು, ಹಣ್ಣಿನ ಬೆಲೆ ತುಟ್ಟಿಯಾದರೂ ಹಬ್ಬ ಆಚರಿಸಬೇಕೆಂದು ಜನ ಖರೀದಿಸತೊಡಗಿದ್ದಾರೆ. ಸೋಮವಾರ ನಸುಕಿನಿಂದಲೇ ಶಿವ ಮಂದಿರಗಳಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ