ಆ್ಯಪ್ನಗರ

ಹೂವು ಬೆಳೆಗಾರರಿಗೆ ಬೆಳಕು ನೀಡುವ ದೀಪಾವಳಿ

ವಿಜಯಪುರ ಚೆಂಡು, ಸೇವಂತಿಗೆ ಹೂಗಳಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ದೀಪಾವಳಿ ನಿಮಿತ್ತ ದರ ಏರಿಕೆಯಿಂದ ಹೂವುಗಳ ಕೃಷಿಯಲ್ಲಿ ತೊಡಗಿದ ರೈತರಿಗೆ ದೀಪಾವಳಿ ಬೆಳಕು ನೀಡಿದೆ.

Vijaya Karnataka 6 Nov 2018, 5:00 am
ವಿಕ ವಿಶೇಷ ವಿಜಯಪುರ
Vijaya Karnataka Web diwali lighting for flower growers
ಹೂವು ಬೆಳೆಗಾರರಿಗೆ ಬೆಳಕು ನೀಡುವ ದೀಪಾವಳಿ

ಚೆಂಡು, ಸೇವಂತಿಗೆ ಹೂಗಳಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ದೀಪಾವಳಿ ನಿಮಿತ್ತ ದರ ಏರಿಕೆಯಿಂದ ಹೂವುಗಳ ಕೃಷಿಯಲ್ಲಿ ತೊಡಗಿದ ರೈತರಿಗೆ ದೀಪಾವಳಿ ಬೆಳಕು ನೀಡಿದೆ.

ಜಿಲ್ಲೆಯ ಕೂಡಗಿ, ಕೂಡಗಿ ತಾಂಡಾ, ಮನಗೂಳಿ, ತೊರವಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಅನೇಕ ರೈತರು ಪುಷ್ಪ ಕೃಷಿಯಲ್ಲಿ ನಿರತರಾಗಿದ್ದಾರೆ. ವರ್ಷಪೂರ್ತಿ ಒಂದೇ ರೀತಿಯ ದರ ಪಡೆಯುವ ರೈತರಿಗೆ ಹಬ್ಬಗಳು ವರದಾನವಾಗಿ ಪರಿಣಮಿಸಿ ಜೇಬು ತುಂಬಿಸುತ್ತಿವೆ.

ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಅರ್ಧ ಎಕರೆ, ಒಂದು ಎಕರೆ ಹೆಚ್ಚೆಂದರೆ ಎರಡ್ಮೂರು ಎಕರೆ ಪ್ರದೇಶದಲ್ಲಿ ಹೂಗಳನ್ನು ಬೆಳೆಯುತ್ತಾರೆ.

ಎನ್‌ಟಿಪಿಸಿಯಿಂದ ದೇಶದ ಗಮನ ಸೆಳೆದ ಕೂಡಗಿ ಕೆಲ ವರ್ಷಗಳಿಂದ ಹೂವುಗಳ ಕೃಷಿಯಿಂದ ಗಮನ ಸೆಳೆಯುತ್ತಿದೆ. ಇಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಚೆಂಡು ಹೂವು, ಸೇವಂತಿಗೆ, ಸುಗಂಧ ರಾಜ, ಗುಲಾಬಿ ಹೂವುಗಳ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಹೋದರೆ ಎಲ್ಲೆಡೆ ಹೂಗಳ ರಾಶಿ ಕಂಡು ಬರುತ್ತದೆ. ಬಣ್ಣ ಬಣ್ಣದ ತರಹೇವಾರಿ ಹೂಗಳು ದಾರಿ ಹೋಕರನ್ನು ಆಕರ್ಷಿಸುತ್ತಿವೆ. ಇಲ್ಲಿ ಹೆಚ್ಚಾಗಿ ಚೆಂಡು ಹೂವು, ರಾಜಾ(ಬಿಳಿ)ಸೇವಂತಿಗೆ, ಗುಂಡಿ(ಹಳದಿ) ಸೇವಂತಿಗೆ, ಕರ್ನೂಲ್‌ ಸೇವಂತಿಗೆ ಸೇರಿದಂತೆ ನಾನಾ ತಳಿಯ ಸೇವಂತಿಗೆ, ಸುಗಂಧ ರಾಜಾ ಹೂವು ಸೇರಿದಂತೆ ನಾನಾ ಹೂಗಳನ್ನು ಬೆಳೆಯುತ್ತಾರೆ.

ವರ್ಷಪೂರ್ತಿ ಹೂಗಳ ಬೆಳೆಯುವ ಈ ಭಾಗದ ಕೆಲ ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಡ್ರೀಪ್‌ ಅಳವಡಿಸಿ ಹೂವು ಬೆಳೆಯುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಬಯಸದೇ ಮನೆ ಮಂದಿಯೇ ನಿರ್ವಹಣೆ ಮಾಡುತ್ತಾ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ರೈತರು ತಾವು ಬೆಳೆದ ಹೂಗಳನ್ನು ನಿತ್ಯ ನಿಗದಿತ ಅಂಗಡಿಗಳಿಗೆ ನಿಗದಿತ ದರಕ್ಕೆ ಮಾರಾಟ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಅಂಗಡಿಕಾರರೇ ಜಮೀನಿಗೆ ಬಂದು ಹೆಚ್ಚಿನ ಬೆಲೆ ನೀಡಿ ಹೂವುಗಳನ್ನು ಕೊಳ್ಳುತ್ತಾರೆ. ದಸರಾ ಮತ್ತು ದೀಪಾವಳಿಯಲ್ಲಿ ಹೆಚ್ಚಿನ ಬೇಡಿಕೆಯಿಂದ ದರ ಏರಿಕೆ ಕಂಡು ಬರುತ್ತದೆ.

-------

ಬರದಿಂದ ನೀರಿನ ಕೊರತೆ, ಈ ವರ್ಷ ಅಧಿಕ ಮಾಸ ಇರುವುದರಿಂದ ಕಳೆದ ತಿಂಗಳಲ್ಲೇ ಅತಿ ಹೆಚ್ಚಿನ ಹೂವಿನ ಇಳುವರಿ ಬಂದಿದೆ. ದೀಪಾವಳಿಗೆ ಕಡಿಮೆ ಪ್ರದೇಶದಲ್ಲಿ ಹೂವು ಇರುವುದರಿಂದ ಸಹಜವಾಗಿ ದರ ಏರಿಕೆ ಇದೆ. 2 ಎಕರೆ ಪ್ರದೇಶದಲ್ಲಿ ಬೆಳೆದ ಸೇವಂತಿಗೆಯನ್ನು ಕೆಜಿಗೆ 65ರಿಂದ 80ರೂ.ನಂತೆ ಮಾರಿದ್ದು 40 ಸಾವಿರ ರೂ.ಗಳ ಆದಾಯವಾಗಿದೆ

-ಈಶ್ವರ ರಾಠೋಡ. ಕೂಡಗಿ ತಾಂಡಾದ ರೈತ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ