ಆ್ಯಪ್ನಗರ

ಡಿಕೆಶಿ ಬಂಧನ ಜಿಲ್ಲೆಯಲ್ಲೂಪ್ರತಿಭಟನೆ

ಮುದ್ದೇಬಿಹಾಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಮುದ್ದೇಬಿಹಾಳದಲ್ಲಿಕಾಂಗ್ರೆಸ್‌ ಧುರೀಣರು, ನಾನಾ ಘಟಕಗಳ ಪದಾಧಿಕಾರಿಗಳು ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನಾ ರಾರ‍ಯಲಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

Vijaya Karnataka 5 Sep 2019, 5:00 am
ಮುದ್ದೇಬಿಹಾಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಮುದ್ದೇಬಿಹಾಳದಲ್ಲಿಕಾಂಗ್ರೆಸ್‌ ಧುರೀಣರು, ನಾನಾ ಘಟಕಗಳ ಪದಾಧಿಕಾರಿಗಳು ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನಾ ರಾರ‍ಯಲಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
Vijaya Karnataka Web dk shivkumar confrontation in detention district
ಡಿಕೆಶಿ ಬಂಧನ ಜಿಲ್ಲೆಯಲ್ಲೂಪ್ರತಿಭಟನೆ


ಬಸವೇಶ್ವರ ವೃತ್ತದಲ್ಲಿಮಾನವ ಸರಪಳಿ ನಿರ್ಮಿಸಿ ಪ್ರಧಾನಿ ಮೋದಿ ಹಾಗೂ ಅಮಿತ್‌ ಷಾ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಯುವ ಕಾಂಗ್ರೆಸ್‌ ಉಪಾಧ್ಯಕ್ಷ ಚಿನ್ನು ನಾಡಗೌಡ, ಎನ್‌ಎಸ್‌ಯುಐ ಜಿಲ್ಲಾಅಧ್ಯಕ್ಷ ಸದ್ದಾಂ ಕುಂಟೋಜಿ, ಮುದ್ದೇಬಿಹಾಳ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಎಪಿಎಂಸಿ ನಿರ್ದೇಶಕ ವೈ.ಎಚ್‌.ವಿಜಯಕರ್‌ ಡಿಕೆಶಿ ಬಂಧನ ಖಂಡಿಸಿ, ಬಿಜೆಪಿಯ ದ್ವೇಷದ ರಾಜಕಾರಣ ಟೀಕಿಸಿ ಮಾತನಾಡಿದರು.

ಮುದ್ದೇಬಿಹಾಳ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಗೋಪಿ ಮಡಿವಾಳರ, ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಯುಸೂಫ್‌ ನಾಯ್ಕೋಡಿ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಶಿವು ಶಿವಪುರ, ರಿಯಾಜ್‌ ಢವಳಗಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಜಿಲ್ಲಾಯುವ ಕಾಂಗ್ರೆಸ್‌ ಕಾರ್ಯದರ್ಶಿ ಶರಣು ಚಲವಾದಿ, ಪ್ರಮುಖರಾದ ಭಾಪ ಢವಳಗಿ, ಪ್ರಶಾಂತ ರಾಠೋಡ, ಅನಿಲ ನಾಯಕ, ಬಾವೂರಿ, ಬಸವರಾಜ ಗೂಳಿ, ಸಂತೋಷ ಮ್ಯಾಗೇರಿ, ರಾಜು ಚೌಹಾಣ್‌ ಸೇರಿದಂತೆ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ