ಆ್ಯಪ್ನಗರ

ನಾಳೆ ಕಲಕೇರಿಯಲ್ಲಿ ಕತ್ತೆ ಮೆರವಣಿಗೆ

ಕಲಕೇರಿ: ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು, ಕದರಗುಂಡ ಮತ್ತು ಹುಣಶ್ಯಾಳ ಕರೆ ತುಂಬುವದು, ನೆಮ್ಮದಿ ಕೇಂದ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂದಿಟ್ಟುಕೊಂಡು ಹಳೆ ಗ್ರಾಪಂ ಕಾರ್ಯಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಪಧಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಸೆ.25 ರಿಂದ ನಡೆಸುತ್ತಿರುವಂತಹ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಬುಧವಾರ 22 ದಿನ ಪೂರೈಸಿ 23ನೇ ದಿನಕ್ಕೆ ಮುಂದುವರೆಯಿತು.

Vijaya Karnataka 17 Oct 2019, 5:00 am
ಕಲಕೇರಿ: ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು, ಕದರಗುಂಡ ಮತ್ತು ಹುಣಶ್ಯಾಳ ಕರೆ ತುಂಬುವದು, ನೆಮ್ಮದಿ ಕೇಂದ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂದಿಟ್ಟುಕೊಂಡು ಹಳೆ ಗ್ರಾಪಂ ಕಾರ್ಯಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಪಧಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಸೆ.25 ರಿಂದ ನಡೆಸುತ್ತಿರುವಂತಹ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಬುಧವಾರ 22 ದಿನ ಪೂರೈಸಿ 23ನೇ ದಿನಕ್ಕೆ ಮುಂದುವರೆಯಿತು.
Vijaya Karnataka Web donkey parade in kalakari tomorrow
ನಾಳೆ ಕಲಕೇರಿಯಲ್ಲಿ ಕತ್ತೆ ಮೆರವಣಿಗೆ


ಈ ವೇಳೆ ಕೆಪಿಆರ್‌ಎಸ್‌ ಕಲಕೇರಿ ಘಟಕದ ಅಧ್ಯಕ್ಷ ಸಲೀಂ ನಾಯ್ಕೋಡಿ ಮಾತನಾಡಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿಸಾರ್ವಜನಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 22ನೇ ದಿನ ಪೂರೈಸಿದ್ದು, ಈ ಧರಣಿ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದು ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಹೋಗಿದ್ದಾರೆ.ಇದನ್ನು ಖಂಡಿಸಿ ದಿ.18 ರಂದು ಕೆಪಿಆರ್‌ಎಸ್‌ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಕಲಕೇರಿ ಪಟ್ಟಣದಲ್ಲಿಕತ್ತೆಗಳ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಎಂ ಪಿ ನಧಾಪ್‌, ಕಾಶೀಮ್‌ ನಾಯ್ಕೋಡಿ, ಟಿಪ್ಪು ಸಿಪಾಯಿ, ರಮೇಶ ಪಾಟೀಲ, ಸಿದ್ದು ಪೂಜಾರಿ, ಮಲ್ಲನಗೌಡ ಬಿರಾದಾರ, ಮಕ್ತುಮ ಬಿರಾದಾರ, ಹೊನ್ನಪ್ಪ ಯಂಕಂಚಿ, ನಬಿಸಾಬ ಕುಕನೂರ, ಅಲ್ಲಾಭಕ್ಷ ಆಲಗೂರ, ಗೋಪಾಲ ನಾಯ್ಕೋಡಿ, ಲಾಲಸಾಬ ಸಿಪಾಯಿ, ಮಾದೆಪ್ಪ ಕರಿಗೌಡ, ರಾಜಶೇಖರ ಪಾಟೀಲ, ಚಂದಾಹುಸೇನ ಬಾಣಕಾರ, ಮುನಾಫ ಬಾಣಕಾರ ಸೇರಿದಂತೆ ಹುಣಶ್ಯಾಳ, ಕುದರಗುಂಡ, ಕಲಕೇರಿ ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ