ಆ್ಯಪ್ನಗರ

ಕುಡಿವ ನೀರಿನ ಘಟಕ ಸ್ತಬ್ಧ

ತಾಲೂಕಿನ ಅಂಬಳನೂರ ಗ್ರಾಮದ ಮಾರುತಿ ದೇವಾಲಯ ಬಳಿಯ ಶುದ್ಧ ಕುಡಿವ ನೀರಿನ ಘಟಕ 9-10 ತಿಂಗಳಿಂದ ಬಂದ್‌ ಬಿದ್ದಿದೆ. ಇದರಿಂದ ಕುಡಿವ ನೀರಿಗೆ ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ.

Vijaya Karnataka Web 24 May 2020, 5:00 am
ಬಸವನಬಾಗೇವಾಡಿ: ತಾಲೂಕಿನ ಅಂಬಳನೂರ ಗ್ರಾಮದ ಮಾರುತಿ ದೇವಾಲಯ ಬಳಿಯ ಶುದ್ಧ ಕುಡಿವ ನೀರಿನ ಘಟಕ 9-10 ತಿಂಗಳಿಂದ ಬಂದ್‌ ಬಿದ್ದಿದೆ. ಇದರಿಂದ ಕುಡಿವ ನೀರಿಗೆ ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ.
Vijaya Karnataka Web drinking water unit is quiet
ಕುಡಿವ ನೀರಿನ ಘಟಕ ಸ್ತಬ್ಧ


ಘಟಕಕ್ಕೆ ನೀರಿನ ಹಾಗೂ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಇದೆ. ಆದರೆ, ನೀರು ಶುದ್ಧೀಕರಿಸುವ ಯಂತ್ರ ದುರಸ್ತಿ ಇರುವುದರಿಂದ ನೀರು ತಲುಪುತ್ತಿಲ್ಲ. ಈ ಬಗ್ಗೆ ಗ್ರಾಪಂ ಸದಸ್ಯ ಯಮನಪ್ಪ ಚಲವಾದಿ, ಶುದ್ಧ ನೀರು ಘಟಕ ದುರಸ್ತಿ ಮಾಡಿ ಜನರಿಗೆ ಒಳಿತು ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಕೆಆರ್‌ಐಡಿಎಲ್‌ ಅಧಿಕಾರಿಗಳು ಇಂದು ಬರುತ್ತೇವೆ, ಆಮೇಲೆ ಬರುತ್ತೇವೆ ಎಂದು ಹೇಳುತ್ತಲೇ ಹೊರಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದಷ್ಟು ಬೇಗ ನೀರಿನ ಘಟಕ ಸರಿಪಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ