ಆ್ಯಪ್ನಗರ

ಪ್ರತಿಭಟನೆ ಅಂತ್ಯ, ವ್ಯಾಪಾರ ಶುರು

ವಿಜಯಪುರ: ರೈತರ ಹಿತದೃಷ್ಟಿಯಿಂದ ಪ್ರತಿಭಟನೆ ಸ್ಥಗಿತಗೊಳಿಸಿ ನ.30ರಿಂದ ನೆಹರು ಮಾರ್ಕೆಟ್‌ನಲ್ಲಿರುವ ಲಭ್ಯ ಸ್ಥಳದಲ್ಲಿಹಾಗೂ ರೇಡಿಯೊ ಮೈದಾನದಲ್ಲಿತಾತ್ಕಾಲಿಕವಾಗಿ ತರಕಾರಿ ಮತ್ತು ಹಣ್ಣು ವ್ಯಾಪಾರ ಆರಂಭಿಸುವುದಾಗಿ ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರು ನಿರ್ಧಾರ ಕೈಗೊಂಡಿದ್ದಾರೆ.

Vijaya Karnataka 30 Nov 2019, 5:00 am
ವಿಜಯಪುರ: ರೈತರ ಹಿತದೃಷ್ಟಿಯಿಂದ ಪ್ರತಿಭಟನೆ ಸ್ಥಗಿತಗೊಳಿಸಿ ನ.30ರಿಂದ ನೆಹರು ಮಾರ್ಕೆಟ್‌ನಲ್ಲಿರುವ ಲಭ್ಯ ಸ್ಥಳದಲ್ಲಿಹಾಗೂ ರೇಡಿಯೊ ಮೈದಾನದಲ್ಲಿತಾತ್ಕಾಲಿಕವಾಗಿ ತರಕಾರಿ ಮತ್ತು ಹಣ್ಣು ವ್ಯಾಪಾರ ಆರಂಭಿಸುವುದಾಗಿ ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರು ನಿರ್ಧಾರ ಕೈಗೊಂಡಿದ್ದಾರೆ.
Vijaya Karnataka Web end the protest start trading
ಪ್ರತಿಭಟನೆ ಅಂತ್ಯ, ವ್ಯಾಪಾರ ಶುರು


ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಲೀಂ ಮುಂಡೇವಾಡಿ ಹಾಗೂ ಮುಖಂಡ ಮೈನುದ್ದೀನ್‌ ಬೀಳಗಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, 7 ದಿನಗಳಿಂದ ವ್ಯಾಪಾರ ಬಂದ್‌ ಆಗಿದ್ದರಿಂದ ರೈತರಿಗೆ ತೊಂದರೆಯಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೂ ರೈತರ ಹಿತದೃಷ್ಟಿಯಿಂದ ಶನಿವಾರದಿಂದ ವಹಿವಾಟು ಆರಂಭಿಸಲಾಗುವುದು ಎಂದು ತಿಳಿಸಿದರು.

ಮೈದಾನದಲ್ಲಿತಾತ್ಕಾಲಿಕ ವ್ಯವಸ್ಥೆ :

ಜಿಲ್ಲಾಡಳಿತ ಪ್ರಸ್ತುತ ರೇಡಿಯೊ ಗ್ರೌಂಡ್‌ದಲ್ಲಿತಾತ್ಕಾಲಿಕವಾಗಿ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದು, ಆ ಸ್ಥಳದಲ್ಲಿನಾಳೆಯಿಂದ ತರಕಾರಿ ವ್ಯಾಪಾರ-ವಹಿವಾಟು ಆರಂಭಗೊಳ್ಳಲಿದೆ. ವ್ಯಾಪಾರಸ್ಥರ ಬೇಡಿಕೆ ಪೂರ್ಣ ಪ್ರಮಾಣದಲ್ಲಿಈಡೇರಿಲ್ಲ, ಆದರೆ ಜಿಲ್ಲಾಡಳಿತ ತರಕಾರಿ ವ್ಯಾಪಾರಸ್ಥರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. 8 ದಿನಗಳ ತನಕ ಕಾಯುತ್ತೇವೆ. ನಂತರವೂ ಬೇಡಿಕೆ ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮೈನುದ್ದೀನ್‌ ಬೀಳಗಿ ತಿಳಿಸಿದರು.

ಮುಖಂಡ ಅಬೂಬಕರ್‌ ಬಾಗವಾನ ಮಾತನಾಡಿ, ಹೋಲ್‌ಸೇಲ್‌ ಹಾಗೂ ರೀಟೆಲ್‌ ತರಕಾರಿ ಮಾರಾಟ ಬಂದ್‌ ಆಗಿದ್ದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ವ್ಯಾಪಾರ ವಹಿವಾಟು ಪ್ರಾರಂಭಿಸಲಾಗುತ್ತಿದೆ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ ತರಕಾರಿ ಮಾರಾಟಗಾರರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಎಲ್ಲವಿಷಯಗಳನ್ನಿಟ್ಟುಕೊಂಡು ತರಕಾರಿ ವ್ಯಾಪಾರವನ್ನು ಆರಂಭಿಸಲಾಗುತ್ತಿದೆ ಎಂದರು.

ಜಿಲ್ಲಾಡಳಿತ ನೆಹರು ಮಾರ್ಕೆಟ್‌ ಒಳ ಆವರಣದಲ್ಲಿಕೆಲವರಿಗೆ ಜಾಗ ಗುರುತಿಸಿದೆ. ಅಲ್ಲದೇ ಪಕ್ಕದ ಜನತಾಬಜಾರ್‌ ರಸ್ತೆಯಲ್ಲಿ ಕಟ್ಟೆ ನಿರ್ಮಿಸಲಾಗುತ್ತಿದೆ. ಶನಿವಾರದಿಂದ ನೆಹರು ಮಾರ್ಕೆಟ್‌ ಹಾಗೂ ರೇಡಿಯೊ ಮೈದಾನದಲ್ಲಿ ತಾತ್ಕಾಲಿಕವಾಗಿ ತರಕಾರಿ ವ್ಯಾಪಾರ ಪ್ರಾರಂಭಿಸಲಾಗುತ್ತಿದೆ. ಜಿಲ್ಲಾಡಳಿತ ಶಾಶ್ವತ ಜಾಗ ಕಲ್ಪಿಸಿದ ನಂತರ ಅಲ್ಲಿವ್ಯಾಪಾರ ಮುಂದುವರಿಸುವುದಾಗಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಲೀಂ ಮುಂಡೇವಾಡಿ ತಿಳಿಸಿದರು.

ಮುಖಂಡರಾದ ಅಬ್ದುಲ್‌ರಜಾಕ್‌ ಹೊರ್ತಿ, ಸೈಯ್ಯದ್‌ಆಸೀಫುಲ್ಲಾಖಾದ್ರಿ, ಮೊಹ್ಮದ್‌ಹನೀಫ್‌ ಮನಗೂಳಿ, ಅಯೂಬ್‌ ಕಲಾದಗಿ, ಮುಕ್ತಾರ್‌ ದಖನಿ ಮತ್ತಿತರರಿದ್ದರು.

-----

7 ದಿನ ಸ್ತಬ್ಧವಾಗಿದ್ದ ವಹಿವಾಟು

ಎಲ್‌ಬಿಎಸ್‌ ಹಾಗೂ ನೆಹರು ಮಾರ್ಕೆಟ್‌ ಮಧ್ಯದ ರಸ್ತೆಯಲ್ಲಿಗೂಡಂಗಡಿಗಳನ್ನು ತೆರವುಗೊಳಿಸಿದ್ದರಿಂದ ನ.23ರಿಂದ 29ರ ತನಕ ತರಕಾರಿ ವಹಿವಾಟು ಸ್ಥಗಿತಗೊಳಿಸಿ 300ಕ್ಕೂ ಹೆಚ್ಚು ವ್ಯಾಪಾರಸ್ಥರು ಪ್ರತಿಭಟನೆ ಕೈಗೊಂಡಿದ್ದರು. ನಿತ್ಯ 2 ಕೋಟಿ ತರಕಾರಿ ಹಾಗೂ ಹಣ್ಣಿನ ವಹಿವಾಟು ನಡೆಯುತ್ತಿತ್ತು. 7 ದಿನಗಳ ಬಂದ್‌ನಿಂದಾಗಿ 14-15 ಕೋಟಿ ರೂ.ಗಳಷ್ಟು ವಹಿವಾಟು ನಡೆಯಲಿಲ್ಲ. ಹೋಲ್‌ಸೇಲ್‌ ವ್ಯಾಪಾರ ಬಂದ್‌ ಆಗಿದ್ದರಿಂದಲೂ ರೈತರು ಬೆಳೆದ ತರಕಾರಿ, ಹಣ್ಣು ಮಾರುಕಟ್ಟೆಗೆ ಹೋಗದೆ ತೊಂದರೆಯಾಗಿತ್ತು. ಇದೀಗ ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮತ್ತೆ ಆರಂಭವಾಗುತ್ತಿರುವುದರಿಂದ ಬಡ ವ್ಯಾಪಾರಸ್ಥರು, ರೈತರು, ಸಾರ್ವಜನಿಕರಿಂದ ಸಂತಸ ವ್ಯಕ್ತವಾಗಿದೆ.

-------
ರೇಡಿಯೋ ಮೈದಾನ ತಾತ್ಕಾಲಿಕ ವ್ಯಾಪಾರ ತಾಣ

ಗಾಂಧಿಚೌಕದ ಪಕ್ಕದಲ್ಲಿರುವ ರೇಡಿಯೋ ಮೈದಾನದಲ್ಲಿ ಜಿಲ್ಲಾಡಳಿತ ತರಕಾರಿ ವ್ಯಾಪಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ. ಶನಿವಾರದಿಂದ ಗಾಂಧಿಚೌಕ್‌ ಎಡಭಾಗದಲ್ಲಿರುವ ರೇಡಿಯೋ ಮೈದಾನ ಹಾಗೂ ನೆಹರು ಮಾರ್ಕೆಟ್‌ನಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ