ವಿಜಯಪುರ: ಆಪರೇಷನ ಕಮಲದಿಂದ ರಾಜ್ಯಕ್ಕೆ ಕಳಂಕವಾಗಿದೆ. ನೂತನ ಸಿಎಂ ಬಿಎಸ್ ವೈ ಅವರೇ ಆಪರೇಷನ್ ಕಮಲ ಹುಟ್ಟು ಹಾಕಿದ್ದು, ಈ ಹೇಯ ಕೃತ್ಯದಿಂದಾಗಿ ರಾಜ್ಯದ ಘನತೆ ಮಣ್ಣು ಪಾಲಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರಕ್ಕೆ ಅಂತ್ಯವಿಲ್ಲ ಇದು ಪ್ರಾರಂಭ. ಇದು ಬೇರೆ ಬೇರೆ ರಾಜ್ಯದಲ್ಲಿ ನಡೆಯುತ್ತದೆ. ಆದರೆ ಇದಕ್ಕೆಲ್ಲ ಕರ್ನಾಟಕ ಫಾರ್ಮೂಲಾ ಆಗಿದೆ ಎಂದರು.
ಯಡಿಯೂರಪ್ಪ ಅವರಿಗೆ ಸಹನೆ ಇಲ್ಲ. ಮುಂದೆ ಸಿಎಂ ಆಗ್ತೀನೋ ಇಲ್ಲವೋ ಎಂಬ ಭಾವನೆ ಅವರಲ್ಲಿತ್ತು. ಆಸೆ ಇರಬೇಕು ಆದರೆ ದುರಾಸೆ ಇರಬಾರದು ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರ ಅನೈತಿಕ ಸರಕಾರ ಎಂದೂ ಟೀಕಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ ಎಂದ ಎಂ.ಬಿ. ಪಾಟೀಲ, ಈ ಕಾಯಿದೆಯ 10 ಶೆಡ್ಯೂಲ್ ಗೆ ತಿದ್ದುಪಡಿಯಾಗಬೇಕಿದೆ. ಅನರ್ಹ ಶಾಸಕರ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಬೇಕಿದೆ ಎಂದರು.
ಅತೃಪ್ತರಿಗೆ ಝಿರೋ ಟ್ರಾಫಿಕ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ ಬಿ. ಪಾಟೀಲ, ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ, ಇನ್ನೂ ಅತೃಪ್ತರಿಗೆ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ತಾಳ್ಮೆಯಿಂದ ಮುಂದೆ ಸಿಎಂ ಆಗುವ ವಿಶ್ವಾಸ ಅವರಲ್ಲಿರಲಿಲ್ಲ. ದುರಾಸೆಯಿಂದ ಸಿಎಂ ಆಗಿದ್ದಾರೆ. ಪಕ್ಷದಲ್ಲಿರುವ ವಯಸ್ಸಿನ ಪರಿಮಿತಿಯಿಂದಾಗಿ ಈಗ ತರಾತುರಿಯಲ್ಲಿ ಸಿಎಂ ಆಗಿದ್ದಾರೆ. ಇಲ್ಲದಿದ್ದರೆ ಅವರನ್ನು ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದು ಎಂಬ ಆತಂಕ ಯಡಿಯೂರಪ್ಪ ಅವರಲ್ಲಿತ್ತು ಎಂದರು.
ಈಗ ರಚನೆಯಾಗಿರುವ ಸರಕಾರವೇ ಅನೈತಿಕವಾಗಿದೆ. ಆರು ತಿಂಗಳಿಂದ ಒಂದು ವರ್ಷ ಈ ಸರಕಾರದ ಆಯುಷ್ಯವಿದೆ ಎಂದು ಹೇಳಿದರು.
ಎಂಬಿಪಿ ಹೊಸ ಬಾಂಬ್
ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಂಬೈಗೆ ಹೋಗಿದ್ದ ಅತೃಪ್ತರು ಫೋನ್ ಮಾಡಿದ್ರು. ಆದರೆ ಸಿದ್ದರಾಮಯ್ಯ ಕಾಲ್ ರಿಸೀವ್ ಮಾಡಿಲ್ಲ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರಳಯವಾದರೂ ಅತೃಪ್ತರನ್ನು ಪಕ್ಷಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದಿದ್ದಾರೆ ಪಾಟೀಲ್.
ಆ ಒಂದು ವಸ್ತುವಿನಿಂದ ಸರ್ಕಾರ ಪತನ ಎಂಬ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ಯಾವ ವಸ್ತು ಕಳೆದುಕೊಂಡಿದ್ದಾರೆ ಗೊತ್ತಿಲ್ಲ. ಆ ವಸ್ತು ಹುಡುಕಿಕೊಂಡು ಹೋಗಿದ್ದಾರೆ, ಅವರನ್ನೇ ಕೇಳಿ ಎಂದು ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರಕ್ಕೆ ಅಂತ್ಯವಿಲ್ಲ ಇದು ಪ್ರಾರಂಭ. ಇದು ಬೇರೆ ಬೇರೆ ರಾಜ್ಯದಲ್ಲಿ ನಡೆಯುತ್ತದೆ. ಆದರೆ ಇದಕ್ಕೆಲ್ಲ ಕರ್ನಾಟಕ ಫಾರ್ಮೂಲಾ ಆಗಿದೆ ಎಂದರು.
ಯಡಿಯೂರಪ್ಪ ಅವರಿಗೆ ಸಹನೆ ಇಲ್ಲ. ಮುಂದೆ ಸಿಎಂ ಆಗ್ತೀನೋ ಇಲ್ಲವೋ ಎಂಬ ಭಾವನೆ ಅವರಲ್ಲಿತ್ತು. ಆಸೆ ಇರಬೇಕು ಆದರೆ ದುರಾಸೆ ಇರಬಾರದು ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರ ಅನೈತಿಕ ಸರಕಾರ ಎಂದೂ ಟೀಕಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ ಎಂದ ಎಂ.ಬಿ. ಪಾಟೀಲ, ಈ ಕಾಯಿದೆಯ 10 ಶೆಡ್ಯೂಲ್ ಗೆ ತಿದ್ದುಪಡಿಯಾಗಬೇಕಿದೆ. ಅನರ್ಹ ಶಾಸಕರ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಬೇಕಿದೆ ಎಂದರು.
ಅತೃಪ್ತರಿಗೆ ಝಿರೋ ಟ್ರಾಫಿಕ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ ಬಿ. ಪಾಟೀಲ, ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ, ಇನ್ನೂ ಅತೃಪ್ತರಿಗೆ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ತಾಳ್ಮೆಯಿಂದ ಮುಂದೆ ಸಿಎಂ ಆಗುವ ವಿಶ್ವಾಸ ಅವರಲ್ಲಿರಲಿಲ್ಲ. ದುರಾಸೆಯಿಂದ ಸಿಎಂ ಆಗಿದ್ದಾರೆ. ಪಕ್ಷದಲ್ಲಿರುವ ವಯಸ್ಸಿನ ಪರಿಮಿತಿಯಿಂದಾಗಿ ಈಗ ತರಾತುರಿಯಲ್ಲಿ ಸಿಎಂ ಆಗಿದ್ದಾರೆ. ಇಲ್ಲದಿದ್ದರೆ ಅವರನ್ನು ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದು ಎಂಬ ಆತಂಕ ಯಡಿಯೂರಪ್ಪ ಅವರಲ್ಲಿತ್ತು ಎಂದರು.
ಈಗ ರಚನೆಯಾಗಿರುವ ಸರಕಾರವೇ ಅನೈತಿಕವಾಗಿದೆ. ಆರು ತಿಂಗಳಿಂದ ಒಂದು ವರ್ಷ ಈ ಸರಕಾರದ ಆಯುಷ್ಯವಿದೆ ಎಂದು ಹೇಳಿದರು.
ಎಂಬಿಪಿ ಹೊಸ ಬಾಂಬ್
ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಂಬೈಗೆ ಹೋಗಿದ್ದ ಅತೃಪ್ತರು ಫೋನ್ ಮಾಡಿದ್ರು. ಆದರೆ ಸಿದ್ದರಾಮಯ್ಯ ಕಾಲ್ ರಿಸೀವ್ ಮಾಡಿಲ್ಲ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರಳಯವಾದರೂ ಅತೃಪ್ತರನ್ನು ಪಕ್ಷಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದಿದ್ದಾರೆ ಪಾಟೀಲ್.
ಆ ಒಂದು ವಸ್ತುವಿನಿಂದ ಸರ್ಕಾರ ಪತನ ಎಂಬ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ಯಾವ ವಸ್ತು ಕಳೆದುಕೊಂಡಿದ್ದಾರೆ ಗೊತ್ತಿಲ್ಲ. ಆ ವಸ್ತು ಹುಡುಕಿಕೊಂಡು ಹೋಗಿದ್ದಾರೆ, ಅವರನ್ನೇ ಕೇಳಿ ಎಂದು ಹೇಳಿದರು.