ಆ್ಯಪ್ನಗರ

ಉಚ್ಚಾಟಿತ ಹಾಜರ್‌, ಅಶೋಕ ಆಕ್ರೋಶ

ಸಿಂದಗಿ : ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ಶನಿವಾರ ನಡೆದ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಚ್ಚಾಟಿತರ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಗೊಂದಲ, ಗಲಾಟೆಗೆ ಕಾರಣವಾಯಿತು.

Vijaya Karnataka 17 Feb 2019, 5:00 am
ಸಿಂದಗಿ : ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ಶನಿವಾರ ನಡೆದ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಚ್ಚಾಟಿತರ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಗೊಂದಲ, ಗಲಾಟೆಗೆ ಕಾರಣವಾಯಿತು.
Vijaya Karnataka Web expelled hazar ashoka outrage
ಉಚ್ಚಾಟಿತ ಹಾಜರ್‌, ಅಶೋಕ ಆಕ್ರೋಶ


ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನಪರಿಷತ್‌ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಸಮ್ಮುಖದಲ್ಲಿ ಈ ಗೊಂದಲ ಏರ್ಪಟ್ಟಿತು.

ಕಾರ್ಯಕ್ರಮದ ಉದ್ಘಾಟನೆ ನಂತರ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಅಶೋಕ ಅಲ್ಲಾಪೂರ, ಬಿಜೆಪಿಯಿಂದ ಇತ್ತೀಚೆಗೆ ಉಚ್ಚಾಟಿತ ಸಿದ್ದು ಬುಳ್ಳಾ ವೇದಿಕೆಯಲ್ಲಿರುವುದನ್ನು ಪ್ರಶ್ನಿಸುವಂತೆ ಮಾತನಾಡಿದ್ದಕ್ಕೆ ಕೆಲ ಬಿಜೆಪಿ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸಿ, ಜೆಡಿಎಸ್‌ ಪರ ಚುನಾವಣೆ ಮಾಡಿ ಇಲ್ಲಿಗೇಕೆ ಬಂದಿದ್ದೀರಿ ಎಂದು ಮರು ಪ್ರಶ್ನಿಸಿದರು. ಈ ಘಟನೆಯಿಂದ ಬೇಸರಗೊಂಡ ಮುಖಂಡರು, ವೇದಿಕೆಯಿಂದ ಎದ್ದು ಹೊರ ನಡೆದರೆ, ವೇದಿಕೆಯಲ್ಲಿದ್ದ ಕೆಲವು ಹಿರಿಯ ಮುಖಂಡರು, ಯಾರನ್ನೂ ತಡಯದೇ ಸಮಾಧಾನಿಸಲೂ ಮುಂದಾಗದೇ ಇರುವುದು ಕಂಡುಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ