ಆ್ಯಪ್ನಗರ

ಚುನಾವಣೆ ಎದುರಿಸಲು ಕೈ ಸಜ್ಜು

ವಿಜಯಪುರ: ಅನರ್ಹ ಶಾಸಕರ ಕ್ಷೇತ್ರಗಳಲ್ಲಿಚುನಾವಣೆ ಘೋಷಣೆಯಾಗಿದ್ದು ಒಳ್ಳೆಯ ನಿರ್ಧಾರ. ಆದರೂ ಅನರ್ಹರ ಹಣೆಬರಹ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಏನಾಗುತ್ತದೆ ನೋಡೋಣ. ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜಾಗಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

Vijaya Karnataka 22 Sep 2019, 5:00 am
ವಿಜಯಪುರ: ಅನರ್ಹ ಶಾಸಕರ ಕ್ಷೇತ್ರಗಳಲ್ಲಿಚುನಾವಣೆ ಘೋಷಣೆಯಾಗಿದ್ದು ಒಳ್ಳೆಯ ನಿರ್ಧಾರ. ಆದರೂ ಅನರ್ಹರ ಹಣೆಬರಹ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಏನಾಗುತ್ತದೆ ನೋಡೋಣ. ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜಾಗಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
Vijaya Karnataka Web face the election
ಚುನಾವಣೆ ಎದುರಿಸಲು ಕೈ ಸಜ್ಜು


ಶನಿವಾರ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿನಾನು ಹೋದ ಕಡೆಯಲ್ಲೆಲ್ಲಈ ಅನರ್ಹ ಶಾಸಕರಿದ್ದರೆ ಒಳ್ಳೆಯದಾಗುತಿತ್ತು. ನಮಗೆ ನ್ಯಾಯ, ಸ್ಪಂದನೆ ಸಿಗುತ್ತಿತ್ತು. ನಮ್ಮನ್ನು ನಡುನೀರಲ್ಲಿಬಿಟ್ಟುಹೋಗಿದ್ದಾರೆಂಬ ಭಾವನೆ ಸಂತ್ರಸ್ತರಲ್ಲಿದೆ ಎಂದರು.

ಗೋಕಾಕ್‌, ಕಾಗವಾಡ, ಅಥಣಿ ಕ್ಷೇತ್ರಗಳಲ್ಲಿ ನಾನು , ಸತೀಶ ಜಾರಕಿಹೊಳೆ,ಲಕ್ಷ್ಮಿ ಹೆಬ್ಬಾಳಕರ, ಶಿವಾನಂದ ಪಾಟೀಲ ಸೇರಿದಂತೆ ಎಲ್ಲರು ಒಗ್ಗಟ್ಟಾಗಿ

ಚುನಾವಣೆ ಎದುರಿಸುತ್ತೇವೆ ಎಂದರು.

ನಾನು ಅಥಣಿ ಕ್ಷೇತ್ರದ ಉಸ್ತುವಾರಿ ಇದ್ದು , ಕಳೆದ ಸಲ ನಾವೇ ಗೆದ್ದಿದ್ದೆವು. ಅಭ್ಯರ್ಥಿ ಯಾರೆಂಬುದನ್ನು ಪಕ್ಷ ನಿರ್ಧರಿಸಲಿದೆ. ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಎಷ್ಟೇ ಪ್ರಬಲರು ಸ್ಪರ್ಧಿಸಿದರೂ ಗೆದ್ದು ಕ್ಷೇತ್ರವನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ