ಆ್ಯಪ್ನಗರ

ಸುಳ್ಳು ಹೇಳಿಕೆ

ವಿಜಯಪುರ : ರಾಷ್ಟ್ರೀಯ ಮಹಾಪುರುಷರ ಕುರಿತು ಸುಳ್ಳು ಹೇಳಿಕೆ ನೀಡುವುದು ಸಾಮಾಜಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ಅಪರಾಧ. ತಾವು ತಮ್ಮದೇ ಮಹಾಪುರುಷರಿಗೆ ಬೈಯುತ್ತೀರಾ ಎಂದು ಪ್ರಶ್ನಿಸುವ ಮೂಲಕ ಯೋಗ ಗುರು ಬಾಬಾ ರಾಮದೇವ್‌ ಅವರು ವಿಚಾರವಾದಿ ಕೆ.ಎಸ್‌.ಭಗವಾನ್‌ ಹೇಳಿಕೆಯನ್ನು ಖಂಡಿಸಿದರು.

Vijaya Karnataka 30 Dec 2018, 5:00 am
ವಿಜಯಪುರ : ರಾಷ್ಟ್ರೀಯ ಮಹಾಪುರುಷರ ಕುರಿತು ಸುಳ್ಳು ಹೇಳಿಕೆ ನೀಡುವುದು ಸಾಮಾಜಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ಅಪರಾಧ. ತಾವು ತಮ್ಮದೇ ಮಹಾಪುರುಷರಿಗೆ ಬೈಯುತ್ತೀರಾ ಎಂದು ಪ್ರಶ್ನಿಸುವ ಮೂಲಕ ಯೋಗ ಗುರು ಬಾಬಾ ರಾಮದೇವ್‌ ಅವರು ವಿಚಾರವಾದಿ ಕೆ.ಎಸ್‌.ಭಗವಾನ್‌ ಹೇಳಿಕೆಯನ್ನು ಖಂಡಿಸಿದರು.
Vijaya Karnataka Web false statement
ಸುಳ್ಳು ಹೇಳಿಕೆ


ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಶನಿವಾರ ಸಂಜೆ ವಿಜಯಪುರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹಾತ್ಮರ ಬಗ್ಗೆ ಕೆಟ್ಟದ್ದಾಗಿ ಮಾತಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಯಾವುದೇ ಧರ್ಮ, ಮಹಾತ್ಮರ ಬಗ್ಗೆ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಯೋಗ ಗುರು, ರಾಮ ಕೇವಲ ದಲಿತರು, ಆದಿವಾಸಿಗಳು, ವನವಾಸಿಗಳು, ಬ್ರಾಹ್ಮಣರಿಗೆ ಸಂಬಂಧಿಸಿಲ್ಲ, ಅವರು ನಮ್ಮ ಪೂರ್ವಜರು. ವಾಲ್ಮೀಕಿ ರಾಮಾಯಣದಲ್ಲಿ ರಾಮನ ಕುರಿತು ಕೆಟ್ಟದ್ದಾಗಿ ಪ್ರಸ್ತಾಪವಾಗಿಲ್ಲ ಎಂದರು.

ಬಡತನ, ನಿರುದ್ಯೋಗ, ಬೆಲೆ ಏರಿಕೆ ದೇಶದ ಸಮಸ್ಯೆಗಳಾಗಿವೆ. ಕಪ್ಪು ಹಣ ತರುವ ವಿಷಯವನ್ನು ಮೋದಿ ಅವರಿಗೆ ಬಿಟ್ಟಿದ್ದೇವೆ. ಕಪ್ಪು ಮನಸ್ಸಿನವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಬಾಬಾ ರಾಮದೇವ್‌ ಹೇಳಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ