ಆ್ಯಪ್ನಗರ

ಸಾಲಬಾಧೆ ರೈತ ಸುಭಾಸ ಆತ್ಮಹತ್ಯೆ

ಚಡಚಣ: ಸಾಲಬಾಧೆ ತಾಳದೇ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗೋಡಿಹಾಳ ಗ್ರಾಮದಲ್ಲಿಸೋಮವಾರ ನಡೆದಿದೆ.

Vijaya Karnataka 9 Jan 2020, 5:00 am
ಚಡಚಣ: ಸಾಲಬಾಧೆ ತಾಳದೇ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗೋಡಿಹಾಳ ಗ್ರಾಮದಲ್ಲಿಸೋಮವಾರ ನಡೆದಿದೆ.
Vijaya Karnataka Web farmer suicide
ಸಾಲಬಾಧೆ ರೈತ ಸುಭಾಸ ಆತ್ಮಹತ್ಯೆ


ಗೋಡಿಹಾಳ ಗ್ರಾಮದ ಸುಭಾಸ ಸುಧಾಕರ ಜೂಜಗಾರ (42) ಮೃತಪಟ್ಟ ರೈತ.

ಮೃತ ರೈತನ ತಂದೆ ಚಿದಾನಂದ ಅವರ ಹೆಸರಿನಲ್ಲಿರುವ ಅದೇ ಗ್ರಾಮದ ಸ.ನಂ. 223/3ರ ಜಮೀನಿನ ಮೇಲೆ ಗೋಡಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ1 ಲಕ್ಷ ರೂ. ಬೆಳೆ ಸಾಲ ಹಾಗೂ ಸುಮಾರು 8 ವರ್ಷಗಳ ಹಿಂದೆ ಚಡಚಣ ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ1 ಲಕ್ಷ ರೂ. ಸಾಲವನ್ನು ತನ್ನ ತಂದೆಯ ಹೆಸರಿನನಲ್ಲಿಪಡೆದಿದ್ದ. ಈತನು ಇಲ್ಲಿಯವರೆಗೂ ಮರಳಿ ಪಾವತಿಸಿರಲಿಲ್ಲ. ಅಲ್ಲದೆ, ತಿಂಗಳ ಹಿಂದೆ ಮೃತ ರೈತನ ಮಗ ಶ್ರೀನಿವಾಸ ಅಪಘಾತಕ್ಕೀಡಾದ ಸಂದರ್ಭದಲ್ಲಿ ಕೈಗಡ ರೂಪದಲ್ಲಿಸುಮಾರು 80 ಸಾವಿರ ರೂ. ಸಾಲ ಮಾಡಿ ಮಗನಿಗೆ ಔಷದೋಪಚಾರ ಮಾಡಿದ್ದನು. ಅಲದೇ, ಸುಮಾರು ವರ್ಷಗಳಿಂದ ಜಮೀನಿನಲ್ಲಿಯ ಬೆಳೆ ಕೂಡ ಕೈಗೆ ಬರದಿದ್ದರಿಂದ ಸಾಲ ಹೇಗೆ ತೀರಿಸುವುದು ಎಂದು ಮನನೊಂದು ತನ್ನ ತೋಟದ ವಸ್ತಿಯ ಪತ್ರಾಸ್‌ ಮನೆಯಲ್ಲಿನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತ ರೈತನ ಪತ್ನಿ ಮಲ್ಲಮ್ಮ ನೀಡಿದ ದೂರಿನ ಮೇರೆಗೆ ಪ್ರಕರಣ ಚಡಚಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ