ಆ್ಯಪ್ನಗರ

ವಿದ್ಯುತ್ ತಗುಲಿ ಅಪ್ಪ ಮಗ ಸಾವು

ಕಣಿಕೆ ತರಲು ಹೋದ ರುಕ್ಮುದ್ದೀನ್‌ಗೆ ಹರಿದು ಬಿದ್ದ ತಂತಿ ತಕ್ಷಣ ವಿದ್ಯುತ್‌ ಪ್ರವಹಿಸಿದೆ. ಆಗ ತಕ್ಷ ಣ ಆತ ಒದ್ದಾಡಲು ಶುರುಮಾಡಿದಾಗ ಮಗ ಜಾವೀದ್‌ ಏನಾನಾಯಿತೆಂದು ಗಾಬರಿಯಿಂದ ಓಡಿ ಬಂದು ತಂದೆಯನ್ನು ಉಳಿಸಲು ಹೋದಾಗ ಆತನಿಗೂ ವಿದ್ಯುತ್‌ ಪ್ರವಹಿಸಿದೆ.

Vijaya Karnataka Web 27 May 2019, 9:53 am
ವಿಜಯಪುರ: ವಿದ್ಯುತ್ ತಂತಿ ತಗುಲಿ ಅಪ್ಪ-ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಸವನಬಾಗೇವಾಡಿ ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ತೋಟದಲ್ಲಿ ಭಾನುವಾರ ಸಂಜೆ ನಡೆದಿದೆ.
Vijaya Karnataka Web Death 2


ರುಕ್ಮುದ್ದೀನ್ ಬೊಮ್ಮನಹಳ್ಳಿ (52) ಹಾಗೂ ಪುತ್ರ ಜಾವೀದ ಬೊಮ್ಮನಹಳ್ಳಿ (22) ಸ್ಥಳದಲ್ಲೇ ಮೃತಪಟ್ಟವರು.

ಕಣಿಕೆ ತರಲು ಹೋದ ರುಕ್ಮುದ್ದೀನ್‌ಗೆ ಹರಿದು ಬಿದ್ದ ತಂತಿ ತಕ್ಷ ಣ ವಿದ್ಯುತ್‌ ಪ್ರವಹಿಸಿದೆ. ಆಗ ತಕ್ಷ ಣ ಆತ ಒದ್ದಾಡಲು ಶುರುಮಾಡಿದಾಗ ಮಗ ಜಾವೀದ್‌ ಏನಾನಾಯಿತೆಂದು ಗಾಬರಿಯಿಂದ ಓಡಿ ಬಂದು ತಂದೆಯನ್ನು ಉಳಿಸಲು ಹೋದಾಗ ಆತನಿಗೂ ವಿದ್ಯುತ್‌ ಪ್ರವಹಿಸಿದೆ. ಆಗ ಇಬ್ಬರೂ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಇನ್ನೊಬ್ಬ ಮಗ ಸಲೀಂ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಬಸವನಬಾಗೇವಾಡಿ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಸವನ ಬಾಗೇವಾಡಿ ಪಿಎಸ್ಐ ಹಾಗೂ ಹೆಸ್ಕಾ ಅಧಿಕಾರಿಗಳ ದೌಡಾಯಿಸಿದ್ದಾರೆ.

ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ