ಆ್ಯಪ್ನಗರ

'ದೀಪ ಭಾರತ'ಕ್ಕೆ ವಿಜಯಪುರದಲ್ಲಿ ಉತ್ತಮ ಪ್ರತಿಕ್ರಿಯೆ, ಕೊರೊನಾ ವಿರುದ್ಧ ಏಕತೆ ಮಂತ್ರ ಜಪಿಸಿದ ಜನತೆ

ಕೊರೊನಾ ವೈರಸ್‌ ವಿರುದ್ಧ ಏಕತೆಯ ಹೋರಾಟದ ಸಂಕಲ್ಪವಾಗಿ ಪ್ರಧಾನಿ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಕರೆ ನೀಡಿದ್ದ ದೀಪಾಂದೋಲನಕ್ಕೆ ವಿಜಯಪುರ ಜಿಲ್ಲೆಯಲ್ಲಿ ಅಭೂತ ಪೂರ್ವ ಯಶಸ್ಸು ದೊರೆತಿದ್ದು, ಜಿಲ್ಲೆಯಾದ್ಯಂತ ಅಸಂಖ್ಯಾತ ಜನರು 9 ನಿಮಿಷಗಳ ಕಾಲ ದೀಪ ಬೆಳಗುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದರು.

Vijaya Karnataka Web 5 Apr 2020, 9:32 pm
ವಿಜಯಪುರ: ಮಹಾಮಾರಿ ಕೊರೊನಾ ವಿರುದ್ಧ ಏಕತೆಯ ಹೋರಾಟದ ಸಂಕಲ್ಪವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಕರೆ ನೀಡಿದ್ದ ದೀಪಾಂದೋಲನಕ್ಕೆ ಜಿಲ್ಲೆಯಲ್ಲಿ ಅಭೂತ ಪೂರ್ವ ಯಶಸ್ಸು ದೊರೆಯಿತು. ಜಿಲ್ಲೆಯಾದ್ಯಂತ ಅಸಂಖ್ಯಾತ ಜನರು 9 ನಿಮಿಷಗಳ ಕಾಲ ದೀಪ ಬೆಳಗುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದರು.
Vijaya Karnataka Web Vijayapura
ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ದೀಪ‌ ಬೆಳಗಿಸಿದರು.


ಸರಿಯಾಗಿ 9 ಗಂಟೆಗೆ ಸಾರ್ವಜನಿಕರು ಮನೆಯಲ್ಲಿ ವಿದ್ಯುತ್ ದೀಪ ಆರಿಸಿದರು. ಮೊದಲೇ ಹಚ್ಚಿಟ್ಟಿದ್ದ ಮೊಂಬತ್ತಿಗಳನ್ನು ಕೈಯ್ಯಲ್ಲಿ ಹಿಡಿದು, ಮನೆಯ ಬಾಗಿಲಿಗೆ ಬೆಳಗುವ ಮೂಲಕ ಕೊರೊನಾ ನೀನು ನಮ್ಮನ್ನೆಲ್ಲ ತೊರೆದು ಹೋಗು ಎಂದು ಪ್ರಾರ್ಥಿಸಿದರು.

ಬಹುತೇಕರು ತಮ್ಮ ತಮ್ಮ ಮನೆಯ ಟೇರೆಸ್, ಮಹಡಿಗಳ ಮೇಲೆ ನಿಂತು ಮಕ್ಕಳಾದಿಯಾಗಿ ವಯೋವೃದ್ಧವರೆಗೂ ದೀಪ ಬೆಳಗುವ ದೀಪಾಂದೋಲನದ ಮೇಲೆ ದೃಷ್ಟಿ ಹರಿಸಿದಾಗ, ಪಟಾಕಿ ಸದ್ದು ಹೊರತುಪಡಿಸಿದರೆ, ದೀಪಾವಳಿ ಮರುಕಳಿಸಿದ ಅನುಭೂತಿ ಪ್ರತಿಯೊಬ್ಬರಿಗಾಯಿತು. ಜೊತೆಗೆ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶವನ್ನು ದೇಶಕ್ಕೆ ಸಾರಿದರು.

'ನಮೋ' ಕರೆಗೆ ಓಗೊಟ್ಟ ಭಾರತ..! ಕೊರೊನಾ ವಾರಿಯರ್ಸ್‌ಗೆ 'ದೀಪ ಅಭಿಯಾನ'ದ ಧನ್ಯವಾದ

ಕೆಲವರು ಮೊಬೈಲ್ ಟಾರ್ಚಗಳನ್ನೇ ದೀಪದ ಅಸ್ತ್ರಗಳೆಂದು ಬಗೆದು, 9 ರಿಂದ 9 ನಿಮಿಷಗಳ ಕಾಲ ಬೆಳಗುತ್ತಿರುವ ದೃಶ್ಯ ನಗರ ಸೇರಿ ಜಿಲ್ಲೆಯಾದ್ಯಂತ ಕಂಡು ಬಂತು. ಎಕ್ಸಟೆನ್ಶನ್ ಬಡಾವಣೆಗಳಲ್ಲಂತೂ ಸಾಲು ಸಾಲು ಮೊಂಬತ್ತಿಯ ದೀಪಗಳು ಪ್ರಕಾಶಿಸುತ್ತಿತ್ತಾ ಪ್ರತಿಯೊಬ್ಬರಲ್ಲೂ ಹೊಸ ಹುರುಪು ಮೂಡಿಸಿದಂತಾಗಿತ್ತು.

ಕೊರೊನಾ ಭೀತಿಯಿಂದ ಪ್ರವಾಸೋದ್ಯಮ ಬಂದ್‌: ಟೂರಿಸ್ಟ್‌ ಗೈಡ್‌ಗಳ ಬದುಕು ಅತಂತ್ರ!

ಈ ದೀಪಾಂದೋಲನಕ್ಕೆ ಬಡವರು, ಶ್ರೀಮಂತರೆಂಬ ಭೇದವಿರಲಿಲ್ಲ. ದೇಶದ ಒಳಿತು ಹಾಗೂ ತಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಗುಡಿಸಲುವಾಸಿಗಳಿಂದ ಹಿಡಿದು, ದೊಡ್ಡ ದೊಡ್ಡ ಅರಮನೆಗಳಲ್ಲಿರುವ ಶ್ರೀಮಂತರಾದಿಯಾಗಿ ಪ್ರತಿಯೊಂದು ಮನೆಗಳಲ್ಲಿ ದೀಪ ಬೆಳಗುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಕಂಡು ಬಂತು.

ವಿಜಯಪುರ: ಪತ್ನಿ ಕೊಲೆಗೈದ ಪೊಲೀಸ್‌ ಪೇದೆ ಸೇರಿ 7 ಜನರ ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ